ಠೇವಣಿ ವಾಪಸ್ಗೆ ಆಗ್ರಹ
Team Udayavani, Jul 15, 2019, 2:25 PM IST
ಅಥಣಿ: ಗ್ರಾಹಕರ ಠೇವಣಿ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಗ್ರಾಹಕರು ಪ್ರತಿಭಟನೆ ನಡೆಸಿದರು.
ಅಥಣಿ: ಪಟ್ಟಣದ ಕರ್ನಾಟಕ ಕೋ ಆಫ್ ಕ್ರಿಡಿಟ್ ಸೊಸೈಟಿಯಲ್ಲಿಟ್ಟ ಠೇವಣಿ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಗ್ರಾಹಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಠೇವಣಿ ಹಣ ವಂಚಿತ ಗ್ರಾಹಕ ಎಸ್.ಎಂ. ಗುರುಸ್ವಾಮಿ ಮಾತನಾಡಿ, ಶ್ರಮ ವಹಿಸಿ ಜೀವನೋಪಯೋಗಕ್ಕಾಗಿ ಕೂಡಿಟ್ಟ ಠೇವಣಿ ಹಣವನ್ನು ಅಥಣಿಯ ಕರ್ನಾಟಕ ಕೋ ಆಫ್ ಕ್ರೆಡಿಟ್ ಸೊಸೈಟಿ ತನ್ನ ಗ್ರಾಹಕರಿಗೆ ನೀಡಲಾರದೆ ವಂಚಿಸಿದೆ. ಇದರಿಂದ ಠೇವಣಿದಾರರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಹಕರು ಠೇವಣಿ ಕೇಳಲು ಹೋದಾಗ ಬ್ಯಾಂಕ್ ಮುಚ್ಚಲಾಗಿದ್ದು, ಬ್ಯಾಂಕಿನ ಮ್ಯಾನೇಜರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸಿಗುತ್ತಿಲ್ಲ. ಶೀಘ್ರ ಗ್ರಾಹಕರು ಇಟ್ಟ ಠೇವಣಿ ಹಣವನ್ನು ವಾಪಸ್ ನೀಡದಿದ್ದರೆ ತಹಶೀಲ್ದಾರ್ ಕಚೇರಿ ಹಾಗೂ ಸೊಸೈಟಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಪಿ.ಡಿ. ಹರಳೆ ಮಾತನಾಡಿದರು. ಎ.ಎಸ್. ಗುಂಡಾ, ಎಲ್.ಡಿ. ಪುಟಾಣಿ, ಶ್ರೀಧರ ಕುಲಕರ್ಣಿ, ಎಸ್.ಆರ್. ಕಾಡಪ್ಪನ್ನವರ, ಎಸ್.ಆರ್. ಪಾಟೀಲ, ಬಿ.ಎ. ಪಾಟೀಲ, ಆರ್.ಡಿ. ಬಾಗೇನ್ನವರ ಸೇರಿದಂತೆ ಹಲವರು ಗ್ರಾಹಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ