ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರ ಬಂಧನ
Team Udayavani, Jul 20, 2019, 11:16 AM IST
ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಬೆಳಗಾವಿ: ನಗರದಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಸಿಸಿಐಬಿ ಹಾಗೂ ಸಿಇಎನ್ ಪೊಲೀಸರು ಆರು ಜನರನ್ನು ಬಂಧಿಸಿ 36 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸುಭಾಷ ನಗರ 3ನೇ ಕ್ರಾಸಿನ ಮೋದಿನ್ ರಫೀಕ್ ಅತ್ತಾರ (34), ವೀರಭದ್ರ ನಗರದ ತಬ್ರೇಜ್ ಇಬ್ರಾಹಿಂ ಅಂಡೇವಾಲೆ (20), ಅನಗೋಳ ಕುರಬರಗಲ್ಲಿಯ ಚೇತನ ಮಾರುತಿ ಶಿಂಧೆ (19), ಸುಭಾಷ ನಗರದ ಮಹ್ಮದಯಾಸೀನ ಕುತ್ಬುದ್ದಿನ್ಅತ್ತಾರ(23), ವೀರಭದ್ರ ನಗರದ ಮಹ್ಮದಶಾಹೀದ್ ಅತಿಕ್ ಮುಲ್ಲಾ (19) ಎಂಬುವರನ್ನು ಬಂಧಿಸಲಾಗಿದೆ.
ನಗರದ ಗ್ಯಾಂಗ್ವಾಡಿಯ ಧರ್ಮನಾಥ ಭವನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಗಾಂಜಾ/ಮಾದಕ ವಸ್ತುವನ್ನು ವಶದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಸಿಇಎನ್ ವಿಶೇಷ ಠಾಣೆಯ ಪಿಐ ಯು.ಎಚ್. ಸಾತೇನಹಳ್ಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ 30 ಸಾವಿರ ರೂ. ಮೌಲ್ಯದ 1 ಕೆಜಿ 486.5 ಗ್ರಾಂ. 5 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಹಳೆ ಭಾಜಿ ಮಾರ್ಕೆಟ್ ಬಳಿ ಸಿಸಿಐಬಿ ಹಾಗೂತಂಡದಿಂದ ದಾಳಿ ನಡೆಸಿ ಓರ್ವನನ್ನು ಬಂಧಿಸಿ 5980 ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿಸಿಐಬಿ ಇನ್ಸ್ಪೆಕ್ಟರ್ ಸಂಜೀವ ಕಾಂಬಳೆ ನೇತೃತ್ವದಲ್ಲಿಎಎಸ್ ಐ ಬಿ ಆರ್ ಮುತ್ನಾಳ, ಸಿಬ್ಬಂದಿಗಳಾದ ಚೆನ್ನಪ್ಪಚೆನ್ನಪ್ಪನವರ, ಬಿಎನ್. ಬಳಗನ್ನವರ, ಎಸ್. ಆರ್. ಮೇತ್ರಿ, ನಾಯ್ಕವಾಡಿ, ಅರುಣ ಕಾಂಬಳೆ, ಮಹೇಶ ವಡೆಯರ್, ಎಸ್. ಎಸ್. ಪಾಟೀಲ ಅವರು ದಾಳಿ ನಡೆಸಿದ್ದರು.
ನಗರದ ಘೀ ಗಲ್ಲಿಯ ಅನ್ವರ ಹುಸೇನ ತಖೀಜವಾದ (57) ಎಂಬಾತನನ್ನು ಬಂಧಿಸಿ 598 ಗ್ರಾಂ. ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ