ಎಲ್ಲೆಡೆ ಬಿಜೆಪಿಗೆ ಅಧಿಕಾರ
Team Udayavani, Mar 29, 2021, 4:11 PM IST
ಅಡಹಳ್ಳಿ: ರಾಜ್ಯದ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ, ಬೆಳಗಾವಿ ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಎಷ್ಟು ಸತ್ಯವೋ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಕೂಡ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದು ಸತ್ಯ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ನದಿ ಇಂಗಳಗಾಂವ ಗ್ರಾಮದಲ್ಲಿ ಕೃಷ್ಣಾ ನದಿ ಹಿನ್ನೀರಿನ ತೀರ್ಥ ಗ್ರಾಮಕ್ಕೆ 2.25 ಕೋಟಿ ವೆಚ್ಚದ ಸಂಪರ್ಕ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಅಧಿಕಾರ ಕೊಡುವ ನಿದರ್ಶನ ಕೇವಲ ಜಿಜೆಪಿ ಪಕ್ಷದಲ್ಲಿ ಮಾತ್ರ ಕಾಣ ಸಿಗಲು ಸಾಧ್ಯ. ಇಂತಹ ಪಕ್ಷದ ಕಾರ್ಯಕರ್ತನೆಂದು ಹೆಮ್ಮೆ ಪಡಬೇಕು. ನಾವು ಮಾಡಿದ ಸಾಧನೆಗಳೇ ಜನಮಾನಸದಲ್ಲಿ ಉಳಿಯುತ್ತದೆ. ಬರುವ ದಿನಗಳಲ್ಲಿ ಅಥಣಿ ತಾಲೂಕಿನಲ್ಲಿ ಇನ್ನಷ್ಟು ಸೇತುವೆ ನಿರ್ಮಿಸಿ ಸಂಚಾರ ಸುಗಮವಾಗುವಂತೆ ಮಾಡಲಾಗುವುದು. ದೇಶಾದ್ಯಂತ ಎರಡನೇ ಕೋವಿಡ್ -19 ಅಲೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಏ.1ರಿಂದ 45 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.
ಎ.ಎನ್. ಪಾಟೀಲ, ಜಿ.ಎಂ. ತೇವರಮನಿ, ಸಂಜೀವ ರಾಚಗೌಡರ, ಶ್ರೀಶೈಲ ನಾಯಿಕ, ಶಂಕರ ಠಕ್ಕಣ್ಣವರ, ಅಪ್ಪು ಮದಭಾವಿ, ಕುಮಾರ ಮಠಪತಿ, ಶಂಕರಗೌಡ ಪಾಟೀಲ, ನೀರಾವರಿ ಇಲಾಖೆ ಎಡಬ್ಲ್ಯೂ ಪ್ರವೀಣ ಹುಣಸಿಕಟ್ಟಿ, ಸಿದ್ಧು ಲಾಂಡಗೆ, ಎನ್.ಸಿ. ಪವಾರ, ಅಯನಗೌಡಪಾಟೀಲ, ಶಿವರುದ್ರ ಘೂಳಪ್ಪನವರ, ಹಣಮಂತ ಬಾಡಗಿ, ಮಹಾಂತೇಶ ಪಾಟೇಲ, ಅಲಗೌಡ ಮುದಿಗೌಡರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ