ಶುದ್ಧ ನೀರು ಘಟಕದಲ್ಲಿ ಹಣವೂ ವೇಸ್ಟ್‌-ನೀರೂ ವೇಸ್ಟ್‌

1 ರೂ.ಗೆ ಹತ್ತು ಲೀಟರ್‌ ಬದಲಾಗಿ ಈಗ ಕೇವಲ 4 ಲೀ. ನೀರು ! ಕಾರ್ಡ್‌ ಬಳಸಿದರೆ ಕನಿಷ್ಠ 5 ರೂ. ಕಟ್‌

Team Udayavani, Mar 31, 2021, 8:20 PM IST

gsd

ತೆಲಸಂಗ: ಗ್ರಾಮೀಣ ಭಾಗದ ಶುದ್ಧ ಕುಡಿಯುವ ನೀರು ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಲೂಕಿನ 104 ಘಟಕಗಳನ್ನು ವ್ಯಕ್ತಿಗಳಿಗೆ ಟೆಂಡರ್‌ ನೀಡಿದ್ದು, ಉತ್ತಮ ನಿರ್ವಹಣೆ ನೆಪದಲ್ಲಿ ಜನರ ಹಿತ ಕಾಯುವುದನ್ನು ಮರೆತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮೊದಲು 1 ರೂ.ಗೆ ಹತ್ತು ಲೀಟರ್‌ ನೀರು ದೊರಕುತ್ತಿದ್ದುದು ಈಗ ಕೇವಲ ನಾಲ್ಕು ಲೀ. ಸಿಗುತ್ತಿದೆ. ಮೊದಲಿದ್ದ ನಾಣ್ಯದ ಪದ್ಧತಿ ತೆಗೆದುಹಾಕಿ ಸ್ಮಾರ್ಟ್‌ ಕಾರ್ಡ್‌ ಪದ್ಧತಿ ಅಳವಡಿಸಿದ್ದಕ್ಕೆ ಜನರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚಿತವಾಗಿ ನೀಡಬೇಕಾದ ಸ್ಮಾರ್ಟ್‌ ಕಾರ್ಡ್‌ಗೆ ಟೆಂಡರ್‌ದಾರರು ಜನರಿಂದ ನೂರು ರೂ. ವಸೂಲು ಮಾಡುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ. ಏನೀ ಕಾರ್ಡ್‌ ವ್ಯವಸ್ಥೆ: ಈ ಸ್ಮಾರ್ಟ್‌ಕಾರ್ಡ್‌ನ್ನು ಕೇವಲ ಒಂದು ಘಟಕಕ್ಕೆ ಮಾತ್ರ ಬಳಸಬಹುದು. ಗ್ರಾಮದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದು ಘಟಕ ಬಂದ್‌ ಇದ್ದಾಗ ಅಥವಾ ಸರತಿ ಸಾಲು ಹೆಚ್ಚಿದ್ದಾಗ ಇನ್ನೊಂದು ಘಟಕದಿಂದ ನೀರು ಪಡೆಯಲು ಸಾಧ್ಯವಾಗುವಂತೆ ಕಾರ್ಡ್‌ನಲ್ಲಿ ವ್ಯವಸ್ಥೆ ಮಾಡಬೇಕು. ಕಾರ್ಡ್‌ಲ್ಲಿ ಹಣ ಇದ್ದರೆ ಎಟಿಎಂ ತರಹ ಎಲ್ಲೆಡೆ ಬಳಕೆ ಮಾಡಲು ಬರಬೇಕು. ಇಂತಹ ಪದ್ಧತಿ ಜಾರಿಯಾಗಬೇಕು ಇಲ್ಲದಿದ್ದರೆ ಮೊದಲಿನಂತೆ ನಾಣ್ಯ ಹಾಕಿ ನೀರು ಪಡೆಯುವಂತಾಗಬೇಕು ಎಮದು ಒತ್ತಾಯಿಸಿದ್ದಾರೆ.

ಹೊಸ ಪದ್ಧತಿಯಿಂದ ನೀರು ಪೋಲು: ಕಾರ್ಡ್‌ ಬಳಕೆ ಮಾಡಿ ನೀರು ಪಡೆದ ತಕ್ಷಣ ಹಣ ಕಡಿತಗೊಂಡ ಬಗ್ಗೆ ಯಾವೊಂದು ಮೆಸೆಜ್‌ ಕೂಡ ಬರುವುದಿಲ್ಲ. ಎಷ್ಟು ಹಣ ಕಡಿತವಾಯಿತು, ಎಷ್ಟು ಹಣ ಬ್ಯಾಲೆನ್ಸ್‌ ಇದೆ ಎಂಬುದೇ ತಿಳಿಯುವದಿಲ್ಲ. ಅಲ್ಲದೆ ಒಮ್ಮೇ ಕಾರ್ಡ್‌ ಬಳಕೆ ಮಾಡಿದರೆ 5 ರೂ. ಕಡಿತಗೊಂಡು 20 ಲೀಟರ್‌ ನೀರು ಪಡೆಯುವುದನ್ನು ಕಡ್ಡಾಯ ಮಾಡಿದ್ದಾರೆ. ಇಲ್ಲಿ 15 ಲೀಟರ್‌ ಕೊಡ ತಂದ ವ್ಯಕ್ತಿ ಹೆಚ್ಚಿನ ನೀರನ್ನು ಚೆಲ್ಲಬೇಕು, ಅಲ್ಲದೆ ಚೆಲ್ಲಿದ ನೀರಿಗೂ ಹಣ ಕೊಡಬೇಕು. ಇದೆಂತಹ ತಂತ್ರಜ್ಞಾನ ಅಳವಡಿಕೆ ಎಂದು ಜನ ಗರಂ ಆಗಿದ್ದಾರೆ. ನಳದ ನೀರೇ ಗತಿ: ಈ ಮೊದಲು 1 ರೂಗೆ 10 ಲೀ. ನೀರು ದೊರೆಯುತ್ತಿತ್ತು. ಅದನ್ನು ಕಡಿತಗೊಳಿಸಿ 1ರೂ.ಗೆ 4 ಲೀಟರ್‌ ನೀರು ಕೊಡಲು ಆರಂಭಿಸಿದರು. ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿವ ನೀರನ್ನು ಗ್ರಾಮೀಣ ಜನರಿಗೆ ಒದಗಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಸರಕಾರದ ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆ ಈಗ ದುಬಾರಿಯಾಗಿದೆ. ದರವನ್ನು ಒಮ್ಮೆಲೇ ಡಬಲ್‌ಗಿಂತ ಜಾಸ್ತಿ ಮಾಡಿದ್ದರಿಂದ ಬಡ ರೈತಾಪಿ, ಕೂಲಿ ಜನರು ಬೋರ್‌ವೆಲ್‌ ಹಾಗೂ ನಳದ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದಾರೆ.

ವ್ಯವಸ್ಥೆ ಸರಿಪಡಿಸಿ: ಒಂದು ಬಾರಿ ಸ್ಮಾರ್ಟ್‌ ಕಾರ್ಡ್‌ ಬಳಸಿದರೆ 20 ಲೀ.ಟರ್‌ ನೀರು ಪಡೆಯಲೇಬೇಕು ಎಂಬುದು ಬದಲಾಗಬೇಕು. ಸ್ಮಾರ್ಟ್‌ಕಾರ್ಡ್‌ ಕಡ್ಡಾಯ ಮಾಡುವುದಾದರೆ ಲೀಟರ್‌ ಲೆಕ್ಕದಲ್ಲಿ ನೀರು ಸಿಗಬೇಕು. ಮತ್ತು ನೀರು ಪಡೆದಷ್ಟೇ ಹಣ ಕಡಿತಗೊಳ್ಳಬೇಕು. ಕಾರ್ಡ್‌ ಬಳಸಿದಾಗಲೆಲ್ಲ ಮೊಬೈಲ್‌ಗೆ ಹಣ ಕಡಿತಗೊಂಡ ಬಗ್ಗೆ ಮೆಸೆಜ್‌ ಬರಬೇಕು. ಒಂದು ಕಾರ್ಡ್‌ ಎಲ್ಲ ಘಟಕಗಳಲ್ಲಿ ಉಪಯೋಗಕ್ಕೆ ಬರುವಂತಿರಬೇಕು. ಕಾರ್ಡ್‌ ವಿತರಣೆಗೆ ಅಕ್ರಮ ಹಣ ಪಡೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಇದ್ಯಾವುದನ್ನು ಮಾಡದಿದ್ದರೆ ಉಳ್ಳವರಿಗೆ ಮಾತ್ರ ಈ ಘಟಕಗಳು ಎನ್ನುವಂತಾಗುತ್ತದೆ. ಬಡವರಿಗೆ ಮತ್ತೆ ಮೊದಲಿನಂತೆ ನಳದ ನೀರು ಅನಿವಾರ್ಯವಾಗುತ್ತದೆ.

ಜಗದೀಶ ಎಂ. ಖೊಬ್ರಿ

ಟಾಪ್ ನ್ಯೂಸ್

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.