ರಿಂಗ್‌ ರಸ್ತೆ ಮಾರ್ಕಿಂಗ್‌ಗೆ ರೈತರ ವಿರೋಧ

•ಸಂಚಾರ ದಟ್ಟಣೆ ತಡೆಯಲು ರಿಂಗ್‌ ರಸ್ತೆ ನಿರ್ಮಾಣ•ಬರಡು ಭೂಮಿ ಆಯ್ಕೆ ಮಾಡಲು ಒತ್ತಾಯ

Team Udayavani, Jul 20, 2019, 11:04 AM IST

bg-tdy-1

ಬೆಳಗಾವಿ: ಸಂಚಾರ ದಟ್ಟಣೆ ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ನಿರ್ಮಾಣವಾಗಲಿರುವ ರಿಂಗ್‌ ರಸ್ತೆಯ ಸರ್ವೇ ಹಾಗೂ ಮಾರ್ಕಿಂಗ್‌ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು ನಾಲ್ಕೈದು ತಿಂಗಳು ಬಳಿಕ ರಿಂಗ್‌ ರಸ್ತೆ ಕಾಮಗಾರಿಗೆ ಹಸಿರು ನಿಶಾನೆ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಸದ್ಯ ನಡೆಯುತ್ತಿರುವ ಮಾರ್ಕಿಂಗ್‌ ಕಾರ್ಯಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಸುಮಾರು 33 ಗ್ರಾಮಗಳ ಜಮೀನಿನಲ್ಲಿ ಹಾಯ್ದು ಹೋಗುವ ರಿಂಗ್‌ ರಸ್ತೆಗೆ ರೈತರು ವ್ಯಾಪಕವಾಗಿ ವಿರೋಧಿಸುತ್ತಿದ್ದು, ಈಗಾಗಲೇ ಅಲ್ಲಲ್ಲಿ ಸರ್ವೇ ಕಾರ್ಯ ನಡೆದಿದೆ. ಎಷ್ಟೇ ಅಡೆತಡೆಗಳು ಬಂದರೂ ಕಾಮಗಾರಿ ನಿಲ್ಲಿಸುವದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಸದ್ಯ ಕಾಮಗಾರಿಯ ನೀಲನಕ್ಷೆ ಪ್ರಾಥಮಿಕ ಹಂತದಲ್ಲಿದ್ದರೂ ಅದನ್ನು ಮುಂದುವರಿಸಲು ಅಧಿಕಾರಿಗಳು ವೇಗ ಪಡೆದುಕೊಂಡಿದ್ದಾರೆ.

ರಸ್ತೆಯ ನೀಲ ನಕ್ಷೆ ಸಿದ್ಧ: ಬೆಳಗಾವಿ ನಗರದಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಜತೆಗೆ ಗೋವಾ-ಬೆಂಗಳೂರು ಹಾಗೂ ಗೋವಾ-ಮುಂಬೈ ಮಧ್ಯೆ ಸಂಚರಿಸುವ ಭಾರಿ ವಾಹನಗಳು ಕೂಡ ನಗರ ಮೂಲಕವೇ ಸಂಚರಿಸುತ್ತವೆ. ಹೀಗಾಗಿ ನಗರದ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸ್ಥಳೀಯ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿರುವುದರಿಂದ ರಿಂಗ್‌ ರಸ್ತೆಯ ನೀಲ ನಕ್ಷೆ ತಯಾರಾಗಿದೆ.

427 ಹೆಕ್ಟೇರ್‌ ಜಮೀನು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ರಿಂಗ್‌ ರಸ್ತೆ ನಿರ್ಮಿಸಲು ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿದೆ. ಸುಮಾರು 68.3 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ 427.17 ಹೆಕ್ಟೇರ್‌ ಜಮೀನು ಸ್ವಾಧೀನಪಡಿಸಿಕೊಂಡಿದೆ. ಕಳೆದ ಒಂದೂವರೆ ದಶಕದಿಂದ ಯೋಜನೆ ರೂಪದಲ್ಲಿಯೇ ಇದ್ದ ಇದಕ್ಕೆ ಈಗ ಹೊಸ ಕಳೆ ಬಂದಿದೆ. ನಗರದ ಹೊರ ವಲಯದಲ್ಲಿ ಕಾಮಗಾರಿಗೆ ಬಗ್ಗೆ ಅಧಿಕಾರಿಗಳು ಕೆಲಸ ನಡೆಸಿದ್ದಾರೆ.

427 ಹೆಕ್ಟೇರ್‌ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರ ಜಮೀನಿನಲ್ಲಿ ರಿಂಗ್‌ ರಸ್ತೆ ನಿರ್ಮಾಣವಾಗಲಿದ್ದು, ಸುಮಾರು 68.03 ಕಿ.ಮೀ. ರಸ್ತೆ ಮಾರ್ಗ, 200 ಅಡಿ ಅಗಲವಾದ ರಸ್ತೆ ಇರಲಿದೆ. ಇದರಲ್ಲಿ 10 ಕಿ.ಮೀ. ಅರಣ್ಯ ಪ್ರದೇಶದ ಜಾಗವೂ ಸೇರಿಕೊಂಡಿದೆ. ರಸ್ತೆ ನಿರ್ಮಿಸಲು 3,000 ಕೋಟಿ ರೂ. ವೆಚ್ಚ ಆಗುವ ಸಾಧ್ಯತೆ ಇದೆ. ಇನ್ನು ನಾಲ್ಕೈದು ತಿಂಗಳಲ್ಲಿ ಈ ಸಣ್ಣ ಪುಟ್ಟ ಎಲ್ಲ ಪ್ರಾಥಮಿಕ ಹಂತದ ಕೆಲಸಗಳನ್ನು ಮುಗಿಸಿದ ಬಳಿಕ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಬರಡು ಭೂಮಿ ಆಯ್ಕೆಗೆ ಒತ್ತಾಯ: 2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಕುರಿತು ಚರ್ಚೆ ಆಗಿದ್ದಾಗಲೇ ರಿಂಗ್‌ ರಸ್ತೆ ಯೋಜನೆ ಮೊಳಕೆಯೊಡೆದಿದೆ. ಕೆಲವು ಗ್ರಾಮಗಳ ಹೆಸರು ಬರುತ್ತಿದ್ದಂತೆ ಆ ಭಾಗದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಹೊಲದಲ್ಲಿ ಈ ರಸ್ತೆ ಬೇಡ, ಬೇರೆ ಯಾವುದಾದರೂ ಪ್ರದೇಶಗಳಿಂದ ರಿಂಗ್‌ ರೋಡ್‌ ನಿರ್ಮಾಣ ಮಾಡಿ. ಫಲವತ್ತಾದ ಜಮೀನು ಕಸಿದುಕೊಂಡರೆ ಹೊಟ್ಟೆಗೆ ತಿನ್ನುವುದಾದರೂ ಏನು ಎಂಬುದು ರೈತರ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಸಮೀಕ್ಷೆ ಆರಂಭಿಸಿದಾಗ ರೈತರ ವಿರೋಧ ವ್ಯಾಪಕವಾಗಲು ಶುರುವಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯವರು ಸಂಪರ್ಕ ರಸ್ತೆಗಳ ನಿರ್ಮಾಣದ ಕಡೆಗೆ ಗಮನ ಹರಿಸಿ ಸಂಚಾರ ದಟ್ಟಣೆ ಪ್ರಮಾಣ ಕಡಿಮೆಗೊಳಿಸಲು ಯತ್ನಿದ್ದರು. ಆದರೆ ಇದು ಕೈಗೂಡಲಿಲ್ಲ. ಸಂಸದ ಸುರೇಶ ಅಂಗಡಿ ಅವರು ರಿಂಗ್‌ ರಸ್ತೆ ನಿರ್ಮಾಣ ಬಗ್ಗೆ ಮುತುವರ್ಜಿ ವಹಿಸಿದರು. ರಿಂಗ್‌ ರಸ್ತೆ ನಿರ್ಮಾಣ ಉಸ್ತುವಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ತೆಗೆದುಕೊಂಡಿದ್ದರಿಂದ ಕೆಲಸದ ವೇಗ ಹೆಚ್ಚಿದೆ.

ಈಗಾಗಲೇ ನಕ್ಷೆ ತಯಾರಿಗೊಂಡಿರುವ ರಿಂಗ್‌ ರಸ್ತೆಯಲ್ಲಿ ನಗರ ಪೂರ್ವಭಾಗದ ರಾಷ್ಟ್ರೀಯ ಹೆದ್ದಾರಿ 4ರ (ಪುಣೆ) ಕಡೆಯಿಂದ ಕಾಕತಿ, ಹಿಂಡಾಲ್ಕೋ, ಕಣಬರಗಿ, ಕಲಕಾಂಬ, ಮುಚ್ಚಂಡಿ, ಮುತಗಾ, ಶಿಂದೊಳ್ಳಿ, ಮಾಸ್ತಮರರ್ಡಿ ಮೂಲಕ ಸುವರ್ಣ ವಿಧಾನಸೌಧದ ಬಳಿ ಧಾರವಾಡ ಹೆದ್ದಾರಿವರೆಗೆ ಸೇರುತ್ತದೆ. ಪಶ್ಚಿಮ ಭಾಗದ ರಾಷ್ಟ್ರೀಯ ಹೆದ್ದಾರಿ 4ರ(ಧಾರವಾಡ) ಕಡೆಯಿಂದ ಹಲಗಾ, ಮಚ್ಛೆ, ಪೀರನವಾಡಿ, ಬೆಳಗುಂದಿ, ಉಚಗಾವಿ, ಅಲತಗಾ, ಬೆನಕನಹಳ್ಳಿ ಮೂಲಕ ಕಾಕತಿಗೆ ಸೇರಲಿದೆ.

ರಿಂಗ್‌ ರಸ್ತೆ ಹಾಯ್ದು ಹೋಗುವ ಹಳ್ಳಿಗಳು:

ಭೂತರಾಮನಹಟ್ಟಿ, ಹಾಲಭಾಂವಿ, ಹೆಗ್ಗೇರ, ಬಂಬರಗೆ, ಹಂದಿಗನೂರ, ಮಹಲೇನಹಟ್ಟಿ, ಚೆಲುವಿನಹಟ್ಟಿ, ಕೆದನೂರ, ಮನ್ನಿಕೇರಿ, ಅಗಸಗೆ, ಕಡೋಲಿ, ಜಾಫರವಾಡಿ, ದೇವಗಿರಿ, ಅಲತಗೆ, ಗೌಂಡವಾಡ, ಹೊನಗಾ, ಬೆಂಡಿ, ಸೋನಟ್ಟಿ, ಧರನಟ್ಟಿ, ಕೆಂಚನಟ್ಟಿ, ಹುದಲಿ, ಕಬಲಾಪುರ, ಭರಮ್ಯಾನಹಟ್ಟಿ, ಕರವಿನಕುಂಪಿ, ಕಲಖಾಂಬ, ಮುಚ್ಚಂಡಿ, ಅಷ್ಟೆ, ಚಂದಗಡ, ಬೆಕ್ಕಿನಕೇರಿ, ಅತ್ತಿವಾಡ, ಗೋಜಗೆ, ಮನ್ನೂರ, ಅಂಬೇವಾಡಿ, ಸುಳಗೆ, ಕಲ್ಲೇಹೊಳ, ಉಚಗಾಂವ, ಬಸುರ್ತೆ, ತುರಮುರೆ, ಬಾಚಿ, ಕುದ್ರೇಮನಿ, ಬೆಳಗುಂದಿ, ಬೋಕನೂರ, ಸಾವಗಾಂವ, ಮಂಡೋಳಿ, ಬಿಜಗರ್ಣಿ, ಕವಳೇವಾಡಿ, ರಾಕಸಕೊಪ್ಪ, ಕಿಣಯೇ, ಕರ್ಲೇ, ನಾವಗೆ, ಜಾನೇವಾಡಿ, ಕುಟ್ಟಲವಾಡಿ, ಸಂತಿಬಸ್ತವಾಡ, ಬಾಹದರವಾಡಿ, ರಣಕುಂಡೆ, ವಾಘವಡೆ, ದೇಸೂರ, ಸುಲಗೆ, ರಾಜಹಂಸಗಡ, ನಂದೀಹಳ್ಳಿ, ನಾಗೇನಹಟ್ಟಿ, ಜಾಡ ಶಾಹಪುರ, ದಸಾಮಣೆ, ಬೆಳಗಾವಿ, ಯರಮಾಳೆ, ಖನಗಾಂವ ಕೆ.ಎಚ್, ಖನಗಾಂವ ಬಿ.ಕೆ., ಬಾಳೇಕುಂದ್ರಿ ಬಿ.ಕೆ., ಬಾಳೇಕುಂದ್ರಿ ಕೆ.ಎಚ್., ನಿಲಜಿ, ಶಿಂಧೋಳ್ಳಿ, ಬಸರೀಕಟ್ಟಿ, ಮಾವಿನಕಟ್ಟಿ, ಚಂದನಹೊಸೂರ, ತಾರಿಹಾಳ, ಮಾಸ್ತಮರ್ಡಿ, ಹಲಗಾ, ಬಸ್ತವಾಡ, ಶಗನಮಟ್ಟಿ, ಡಸಕೊಪ್ಪ, ಕಮಕಾರಟ್ಟಿ, ಕೋಳಿಕೊಪ್ಪ, ಕಾಕತಿ, ಸಾಂಬ್ರಾ, ಮುತಗಾ, ಬೆನಕನಹಳ್ಳಿ, ಕಾಕತಿ, ಮಚ್ಚೆ, ಪೀರನವಾಡಿ, ಬೆಳಗಾವಿ, ಜುಮನಾಳ, ಶಿಂಧೋಳಿ, ಗೋಕುಲನಗರ, ತಮ್ಮನಾಯಕನಹಟ್ಟಿ, ಯಳ್ಳೂರ, ಕಣಬರಗಿಯಲ್ಲಿ ರಿಂಗ್‌ ರಸ್ತೆ ಹಾಯ್ದು ಹೋಗಲಿದೆ.

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ:

ರಿಂಗ್‌ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಮಾರ್ಕಿಂಗ್‌ ಕೆಲಸದ ವೇಳೆ ತಾಲೂಕಿನ ಸಂತಿಬಸ್ತವಾಡ ಹಾಗೂ ವಾಘವಡೆ ಗ್ರಾಮದಲ್ಲಿ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳನ್ನು ವಾಪಸ್‌ ಕಳುಹಿಸಲಾಗಿದೆ. ಮಾರ್ಕಿಂಗ್‌ ಕಾರ್ಯಕ್ಕೆ ತೆರಳುತ್ತಿರುವ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ರೈತರು, ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನು ಕಬಳಿಸಬಾರದು ಎಂದು ಆಗ್ರಹಿಸಿದರು. ರೈತರ ವಿರೋಧ ತೀವ್ರಗೊಳ್ಳುತ್ತಿದ್ದಂತೆ ಮಾರ್ಕಿಂಗ್‌ ಮಾಡಲು ಬಂದವರು ವಾಪಸ್‌ ಹೋಗಿದ್ದಾರೆ.

ಹೈಕೋರ್ಟ್‌ ಮೊರೆ ಹೋಗಲು ರೈತರ ನಿರ್ಧಾರ:

ರಿಂಗ್‌ ರಸ್ತೆಯನ್ನು ವಿರೋಧಿಸಲು ಎಲ್ಲ ಗ್ರಾಮಗಳಲ್ಲಿಯೂ ವಿರೋಧಿಸಬೇಕು ಹಾಗೂ ಪ್ರತಿ ಗ್ರಾಮದಿಂದ ಇಬ್ಬರು ರೈತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಶುಕ್ರವಾರ ನಡೆದ ಸಭೆಯಲ್ಲಿ ರೈತರು ತೀರ್ಮಾನಿಸಿದ್ದಾರೆ. ಯಾವುದೇ ಗ್ರಾಮಕ್ಕೂ ಅಧಿಕಾರಿ ವರ್ಗದವರು ಬಂದಿ ಮಾರ್ಕಿಂಗ್‌ ಮಾಡಲು ಪ್ರಯತ್ನಿಸಿದರೂ ಎಲ್ಲರೂ ತೀವ್ರವಾಗಿ ವಿರೋಧಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
•ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.