ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
Team Udayavani, Oct 11, 2021, 6:14 PM IST
ಬೈಲಹೊಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಾಲೂಕಿನ ನೇಸರಗಿ ಗ್ರಾಮದ ಬೆಳಗಾವಿ- ಬಾಗಲಕೋಟ ರಾಜ್ಯ ಹೆದ್ದಾರಿ ಮೇಲೆ 3 ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ,ಹಸಿರು ಸೇನೆ, ಕಿತ್ತೂರ ಹಾಗೂ ನೇಸರಗಿ ಬ್ಲಾಕ್ ಕಾಂಗ್ರೆಸ್ ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಅಪಾರ ಮಳೆಯಿಂದ ಹಾಳಾದ ರೈತನ ಬೆಳೆ ಈಗ ಬಂದ ಅಲ್ಪ ಸ್ವಲ್ಪ ಬೆಳೆಗೆ ಮೊದಲು ಇದ್ದ 10,000 ರೂ. ದರ ಈಗ ಕುಸಿತ ಕಂಡು 5200 ರೂ. ಆಗಿ ರೈತರ ಬಾಳು ತೀರಾ ಸಂಕಷ್ಟಕ್ಕೆ ತಲುಪಿದ್ದು ಇದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಕಾರಣ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ, ಕೇಂದ್ರದ ಕೃಷಿ ವಿರೋಧಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು ದೆಹಲಿ ಗಡಿಯಲ್ಲಿ 7 ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ ಸುಮಾರು 200ರೈತರು ಮೃತಪಟ್ಟಿದ್ದಾರೆ. ಈ ಬಗ್ಗೆ ಗಮನ ಹರಿಸದ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ.
ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಜನ ವಿರೋಧಿ ನಡೆಯಿಂದ ಇಡೀ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾ ರೈತ ಸಂಘದ ಹಾಗೂ ಹಸಿರು ಸೇನೆ ಕಾರ್ಯಾದ್ಯಕ್ಷ ರವಿ ಸಿದ್ದಮ್ಮನವರ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು.ನೇಸರಗಿ ಹೋಬಳಿಯಲ್ಲಿ ಟಾಕಿ ಕಂಪನಿಯ ಗಜ್ಜರಿ ಕಳಪೆ ಬೀಜದಿಂದ ಫಸಲು ಉತ್ತಮ ರೀತಿಯಲ್ಲಿ ಬಂದಿಲ್ಲ. ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಬೈಲಹೊಂಗಲ ತಾಲೂಕ ರೈತ ಸಂಘದ ಅದ್ಯಕ್ಷ ಮಹಾಂತೇಶ ಹಿರೇಮಠ, ನ್ಯಾಯವಾದಿ ಎಂ.ವಾಯ್. ಸೋಮಣ್ಣವರ ಮಾತನಾಡಿ, ಬ್ರಿಟಿಷ್ ಆಡಳಿತಕ್ಕಿಂತ ಕೆಟ್ಟದಾಗಿ ರೈತರನ್ನು ಮತ್ತು ಜನರನ್ನು ತುಳಿಯುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗುತ್ತಿದ್ದು ಅದನ್ನು ಬಿಟ್ಟು ಸಾಮಾನ್ಯ ಜನರ ,ರೈತ ಪರ ಯೋಜನೆಗಳನ್ನು ತರಬೇಕೆಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ದ್ವನಿ)ರಾಜ್ಯಾದ್ಯಕ್ಷ ಸುರೇಶ ರಾಯಪ್ಪಗೋಳ, ಜೈಭೀಮ ಸಂಘರ್ಷ ಸಮಿತಿ(ಅಂಬೇಡ್ಕರ ವಾಣಿ) ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ದ ರೈತರ ಬಾರುಕೋಲು ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದರು.
ಬೈಲಹೊಂಗಲ ಉಪವಿಭಾಗಾದಿಕಾರಿ ಶಶಿಧರ ಬಗಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾತನಾಡಿ, ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದೆಂದು ಹೇಳಿದರು. ಮೂರು ಘಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ರಾಮದುರ್ಗ,ಮಲ್ಲಿಕಾರ್ಜುನ ಹುಂಬಿ, ಪ್ರಕಾಶ ನಾಯ್ಕ, ಸಮರ್ಥ ಪಾಟೀಲ, ನಾನಾಸಾಹೇಬ ಪಾಟೀಲ, ಚಂದ್ರಯ್ಯ ಚರಂತಿಮಠ, ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ, ದೀಪಕಗೌಡ ಪಾಟೀಲ, ಪ್ರಕಾಶ ಮುಂಗರವಾಡಿ, ಸಂಕನಗೌಡ ಪಾಟೀಲ, ರಾಜೇಂದ್ರ ಇನಾಮದಾರ, ಆಕಾಶ ಪಾಟೀಲ, ಪ್ರಕಾಶ ತೋಟಗಿ, ವಾಸು ಹಮ್ಮನವರ, ಸುರೇಶ ಅಗಸಿಮನಿ, ಮುದಕಪ್ಪ ಮರಡಿ, ಮಹಾಂತೇಶ ಗುಜನಾಳ, ಬಸಣೆಪ್ಪ ಹುದ್ದಾರ, ಬಾಬು ಮರಿಗೌಡರ, ಸೋಮಪ್ಪ ಕೊಳದೂರ, ನಾಮದೇವ ಸಿದ್ದಮ್ಮನವನರ, ಸೋಮಪ್ಪ ಕೊಳದೂರ, ಸಾಗರ ದೇಸಾಯಿ, ಮಹಾಂತೇಶ ಗೌಡರ, ಹನಮಂತ ಕಿವಡ, ಚಂದ್ರಯ್ಯ ಚರಂತಿಮಠ, ರಾಜು ಕಡಕೋಳ, ಮಂಜು ಹೊಸಮನಿ, ಕಾಸಿಮ ಜಮಾದಾರ, ಲಕ್ಷ್ಮಿ ತಳವಾರ, ಮನೋಜ ಕೆಳಗೇರಿ, ಅಬ್ಬಾಶ ಪೀರಜಾದೆ, ಸುರೇಶ ಕೆಳಗೇರಿ, ಅಡಿವೆಪ್ಪಾ ಮೋದಗಿ, ಯಲ್ಲಪ್ಪ ತಿಗಡಿ, ಬಸಪ್ಪ ಕೊಳವಿ, ಸಂತೋಷ ಉಳವಿ, ಕಾಶಿನಾಥ ಹಡಪದ, ಯಲ್ಲಪ್ಪ ತಳವಾರ, ಸಿದ್ದಪ್ಪ ಕುಮರಿ, ಗಜಾನನ ಹೊಸಕೋಟಿ, ಅಯುಬ ಗಣಾಚಾರಿ, ಅಣ್ಣಪ್ಪ ಕಡಕೋಳ , ಹಂಪಣ್ಣ ಕೌಜಲಗಿ, ನಾಗೇಶ ಬಾಗೇವಾಡಿ, ರಮೇಶ ಮೂಲಿಮನಿ, ವಿನಾಯಕ ಮಾಸ್ತಮರ್ಡಿ, ಸೊಯಲ್ ಮೋಖಾಸಿ ಸೇರಿದಂತೆ ಅನೇಕ ರೈತ ಮಹಿಳೆಯರು, ರೈತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ
Shivaraj Tangadagi ಹೇಳಿಕೆ ಅತಿರೇಕದ ಪರಮಾವಧಿ: ಯಡಿಯೂರಪ್ಪ ಆಕ್ರೋಶ
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ