ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ

ಉತ್ತರ ಕರ್ನಾಟಕದ ಆಡು ಭಾಷೆಯ ಅಪೂರ್ವ ನಿಘಂಟು ನುಡಿ ಜಾನಪದವಾಗಿದೆ

Team Udayavani, Nov 1, 2021, 8:04 PM IST

ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ

ಹಾರೂಗೇರಿ: ನೆಲ ಮೂಲದ ಸಂಸ್ಕೃತಿಯೇ ಜಾನಪದವಾಗಿದ್ದು, ಅದುವೇ ನಮ್ಮ ಮನೆಯ ಸಂಪತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ|ಬಿ.ವಿ.ವಸಂತಕುಮಾರ ಹೇಳಿದರು ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌.ದರೂರ ಪದವಿ ಕಾಲೇಜಿನಲ್ಲಿ ರವಿವಾರ ಪ್ರಾಚಾರ್ಯ ಬಿ.ಎ.ಜಂಬಗಿ ಅವರ “ನುಡಿ ಜಾನಪದ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನೆಲದ ಬದುಕಿನ ಜೀವಕೋಶ. ಅದುವೇ ಸಂಸ್ಕೃತಿ. ಕನ್ನಡದ ಪ್ರತಿಯೊಂದು ಪದದಲ್ಲಿಯೂ ನೆಲಮೂಲ, ಬದುಕಿನ ಸುಗಂಧವಿದೆ. ಆ ಗಂಧದ ವಿವಿಧ ಆಯಾಮಗಳನ್ನು ಸಂಕಲಿಸಿದ ಶ್ರೇಯಸ್ಸು ಪ್ರಾಚಾರ್ಯ ಜಂಬಗಿಯವರ ನುಡಿ ಜಾನಪದ ಕೃತಿಗೆ ಸಲ್ಲುತ್ತದೆ. ಈ ನುಡಿ ಜಾನಪದವು ಕನ್ನಡ ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕೆ ಮೂಲ ಆಕರವಾಗಿದ್ದು, ಪ್ರತಿಯೊಂದು ಪದದ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಳ್ಳುವ ಎಲ್ಲ ಸಾಧ್ಯತೆಗಳು ಗ್ರಂಥದಲ್ಲಿ ಅನಾವರಣಗೊಂಡಿವೆ.

ನಿಘಂಟು ರಚನೆ ಬಹುದೊಡ್ಡ ಸವಾಲು. ಅದರಲ್ಲೂ ಜಾನಪದದ ಸೊಲ್ಲುಗಳಿಂದ ಕೂಡಿದ ನಮ್ಮ ಆಡು ನುಡಿಗಳನ್ನು ಗ್ರಂಥಸ್ಥಗೊಳಿಸುವುದು ಮತ್ತೂಂದು ಸವಾಲು. ಎರಡೂ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವುದರ ಮೂಲಕ ಉತ್ತರ ಕರ್ನಾಟಕದ ಆಡು ಭಾಷೆಯ ಅಪೂರ್ವ ನಿಘಂಟು ನುಡಿ ಜಾನಪದವಾಗಿದೆ ಎಂದು ಡಾ.ವಸಂತಕುಮಾರ ಶ್ಲಾಘಿಸಿದರು. ಖ್ಯಾತ ವಿಮರ್ಶಕ ಡಾ|ವೈ.ಎಂ.ಯಾಕೋಳ್ಳಿ ಕೃತಿ ಪರಿಚಯಿಸಿ ಮಾತನಾಡಿ, ಅದರ ವಿವಿಧ ಆಯಾಮಗಳನ್ನು ತೆರೆದಿಟ್ಟರು. ನಾಲ್ಕು ವರ್ಷಗಳ ಜಂಬಗಿಯವರ ತಪಸ್ಸಿನ ಫಲ ಈ ನುಡಿ ಜಾನಪದದಲ್ಲಿ ಫಲಿಸಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಆರ್‌ಸಿಯು ಕನ್ನಡ ಅಧ್ಯಾಪಕರ ಪರಿಷತ್‌ ಅಧ್ಯಕ್ಷ ಡಾ|ಎಚ್‌.ಐ.ತಿಮ್ಮಾಪೂರ ಮಾತನಾಡಿ, ಆಸ್ತಿ, ಅಂತಸ್ತು ಕುಟುಂಬಕ್ಕೆ ವರ್ಗಾವಣೆಯಾಗುತ್ತವೆ. ವರ್ಗಾವಣೆಯಾಗದ ಸಂಪತ್ತು ಪುಸ್ತಕಗಳು. ಜನಪದದಲ್ಲಿ ಜೀವನವೇ ಪ್ರೀತಿಯ ಹಂದರವಾಗಿದೆ ಎಂದ ಅವರು, ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಜಂಬಗಿಯವರು ಸಾಹಿತ್ಯದಲ್ಲಿ ಒಲವು ತೋರುವುದರ ಜತೆಗೆ ನಿಘಂಟು ರಚನೆಗೆ ಕೈ ಹಾಕಿದ್ದು, ಭಾಷಾ ಪ್ರಾಧ್ಯಾಪಕರಿಗೆ ಮಾದರಿಯಾಗಿದೆ ಎಂದರು.

ನುಡಿ ಜಾನಪದ ಗ್ರಂಥಕತೃ ಬಿ.ಎ.ಜಂಬಗಿ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ವಿ.ಎಸ್‌.ಮಾಳಿ ಅವರನ್ನು ರಾಣಿ ಚನ್ನಮ್ಮ ವಿವಿ ಪ್ರಾಚಾರ್ಯರ ಸಂಘದ ವತಿಯಿಂದ ಡಾ|ಎಚ್‌ .ಐ.ತಿಮ್ಮಾಪೂರ ಸತ್ಕರಿಸಿದರು. ಸಂಸ್ಥೆ ಹಿರಿಯ ಕಾರ್ಯದರ್ಶಿ ವಿ.ಎಚ್‌.ಪವಾರ, ಆರ್‌.ಎಂ.ಗಸ್ತಿ, ಡಾ|ಪಿ.ಬಿ.ಕಲಿcಮಡ್‌, ರಾಜಶೇಖರ ಜಂಬಗಿ, ಚಂದ್ರಶೇಖರ ಜಂಬಗಿ, ಸಚೀನ ಮೊರೆ, ಆದೇಶ ಜಂಬಗಿ, ಡಾ|ಶೀಲಾ ಜಂಬಗಿ, ಡಾ|ಸಿ.ಆರ್‌.ಗುಡಸಿ, ಎಸ್‌.ಎಲ್‌.ಬಾಡಗಿ, ಬಸವರಾಜ ತುಳಸಿಗೇರಿ, ಪ್ರೊ|ಬಿ.ಬಿ.ಮುಗಳಿಹಾಳ, ಡಾ|ರತ್ನಾ ಬಾಳಪ್ಪನವರ, ಡಾ|ಸಿದ್ದಣ್ಣ ಉತ್ನಾಳ, ಘಣಶ್ಯಾಮ ಭಾಂಡಗೆ, ಡಾ|ಪಿ.ಬಿ.ನರಗುಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಆಧಾರ ಹಿರಿಯ ನಾಗರಿಕರ ಕಲ್ಯಾಣ ಸಂಸ್ಥೆ ಹಾಗೂ ಬಿ.ಆರ್‌ .ದರೂರ ಸಂಶೋಧನ ಸಂಸ್ಥೆ ಕಾರ್ಯಕ್ರಮವನ್ನು ಸಂಯೋಜಿಸಿದ್ದವು. ಡಾ|ವಿ.ಎಸ್‌.ಮಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ|ವಿನೋದ ಕಾಂಬಳೆ ನಿರೂಪಿಸಿದರು. ಶರಣ ಐ.ಆರ್‌.ಮಠಪತಿ ವಂದಿಸಿದರು.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ

Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.