ಹಲವು ಅನುಮಾನಕ್ಕೆ ಕಾರಣವಾಯ್ತು ಕಾಲ್ನಡಿಗೆ ಮೂಲಕ ಹೊರಟಿದ್ದ ಕಾರ್ಮಿಕನ ಸಾವು
Team Udayavani, May 7, 2020, 1:02 PM IST
ಬೆಳಗಾವಿ/ಚಿಕ್ಕೋಡಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಖಾನಾಪೂರದಿಂದ ಜಾರ್ಖಂಡ್ ಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ತೆರಳುತ್ತಿದ್ದ 13 ಜನ ಕಾರ್ಮಿಕರನ್ನು ತಡೆದು ಆರೋಗ್ಯ ತಪಾಸಣೆ ನಡೆಸುವ ವೇಳೆ ಕಾರ್ಮಿಕನೋರ್ವ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಜಾರ್ಖಂಡ್ ಮೂಲದ ಬಾಬುಲಾಲ್ ಸಿಂಗ್ ( 45) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಖಾನಾಪುರದಲ್ಲಿ ಈ ಕಾರ್ಮಿಕರು ಸೆಂಟ್ರಿಂಗ್ ಕೆಲಸ ನಡೆಸುತ್ತಿದ್ದರು. ಲಾಕ್ಡೌನ್ನಲ್ಲಿ ಇಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಹೇಗಾದರೂ ಮಾಡಿ ಊರು ಸೇರಬೇಕೆಂದು ಕಾಲ್ನಡಿಗೆ ನಡೆಸಿದ್ದರು.
ಲಾಕ್ ಡೌನ್ ಆಗಿದ್ದರಿಂದ ಕಾಲ್ನಡಿಗೆ ಆರಂಭಿಸಿದ್ದ ಕಾರ್ಮಿಕರು ಖಾನಾಪುರದಿಂದ ಎರಡು ದಿನಗಳ ಹಿಂದೆ ಬಿಟ್ಟಿದ್ದರು. ಚಿಕ್ಕೋಡಿಗೆ ಬಂದಾಗ ಪೊಲೀಸರು ಇವರನ್ನು ತಡೆದು ಆಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕಾರ್ಮಿಕ ಬಾಬುಲಾಲ್ ಸಿಂಗ್ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾನೆ.
ವ್ಯಕ್ತಿಯ ಸಾವಿನ ಹಿಂದೆ ಹಲವು ಅನುಮಾನಗಳು ಕಂಡು ಬರುತ್ತಿದ್ದು, ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾನೋ ಅಥವಾ ಕಾಲ್ನಡಿಗೆಯಲ್ಲಿ ಬರುವಾಗ ಸರಿಯಾದ ಊಟ, ನೀರು ಇಲ್ಲದೇ ನಡೆಯುತ್ತ ಆಯಾಸವಾಗಿ ಸತ್ತಿದ್ದಾನೋ ಎಂಬುದು ಇನ್ನೂ ಖಚಿತವಾಗಿಲ್ಲ. ಕೋವಿಡ್ ಲಕ್ಷಣಗಳು ಯಾವುದೂ ಕಂಡು ಬಂದಿಲ್ಲ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ ಸುಭಾಷ ಸಂಪಗಾಂವಿ, ತಾಲೂಕು ಆರೋಗ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೊಣ್ಣೂರೆ, ಸಿಪಿಐ ಆರ್.ಆರ್.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್