ಹೆಬ್ಟಾಳ್ಕರ್ ಡಿಕೆಶಿ ನಿಷ್ಠರು:ಸಂಜಯ ಪಾಟೀಲ್
Team Udayavani, Oct 1, 2018, 6:55 AM IST
ಬೆಳಗಾವಿ: ಕಾಂಗ್ರೆಸ್ನವರಿಗೆ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ಆರಂಭವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಅವರಿಗೆ 30 ಕೋಟಿ ರೂ. ಆಫರ್ ನೀಡುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಸುಳ್ಳು ಮತ್ತು ಅಹಂಕಾರದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಹೆಬ್ಟಾಳ್ಕರ್ ಅವರಿಗೆ 30 ಕೋಟಿ ರೂ. ನೀಡಿ ಅವರನ್ನು ಕರೆತರುವ ಕೆಟ್ಟಿ ಸ್ಥಿತಿ ಬಿಜೆಪಿಗೆ ಬಂದಿಲ್ಲ. 30 ಕೋಟಿ ಆಫರ್ ದಾಖಲೆ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಈ ರೀತಿ ಸುಳ್ಳು ಪ್ರಚಾರ ಮಾಡುವುದನ್ನು ಬಿಡಲಿ. ಹೆಬ್ಟಾಳಕರ್ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಲ್ಲ. ಅವರು ಡಿ.ಕೆ.ಶಿವಕುಮಾರಗೆ ನಿಷ್ಠಾವಂತರು. ಡಿಕೆಶಿ ಮಾತು ಕೇಳಿ ರಮೇಶ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದರು.