ಸತೀಶ ಜಾರಕಿಹೊಳಿ ಕೈ ಬಲಪಡಿಸೋಣ : ಲಕ್ಷ್ಮಿ ಹೆಬ್ಬಾಳಕರ್
Team Udayavani, Apr 3, 2021, 7:39 PM IST
ಹಿರೇಬಾಗೇವಾಡಿ : ಸತೀಶ ಜಾರಕಿಹೊಳಿಯವರು ತಮ್ಮ ಘನತೆ, ಗೌರವಗಳೊಂದಿಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ಸಾವಿರಾರು ಕಾರ್ಯ ಕರ್ತರನ್ನು ಬೆಳೆಸಿದ್ದಾರೆ. ಇಂತಹ ಗೌರವವುಳ್ಳ ವ್ಯಕ್ತಿಗೆ ತಮ್ಮ ಮತ ನೀಡಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಅವರು ಶುಕ್ರವಾರ ಬೆಳಗಾವಿ ಲೊಕಸಭಾ ಉಪ ಚುನಾವಣೆ ನಿಮಿತ್ತ ಹಿರೇಬಾಗೇವಾಡಿಯ ಶಿವಾಲಯ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ ಪಕ್ಷ ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪರವಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದಿದೆ. ನೂರಾರು ವರ್ಷಗಳ ಇತಿಹಾಸ ಇರುವ ನಮ್ಮ ಪಕ್ಷವು ಹಲವಾರು ದಿಟ್ಟ ನಾಯಕರನ್ನು ಹೊಂದಿದೆ. ಅದರಲ್ಲಿ ಸತೀಶ ಜಾರಕಿಹೊಳಿಯವರು ಒಬ್ಬರು. ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸತೀಶ ಜಾರಕಿಹೊಳಿಯವರಿಗೆ ಮತ ನೀಡಿ ನಮ್ಮೆಲ್ಲರ ಕೂಗು ದೆಹಲಿಗೆ ಮುಟ್ಟಿಸೋಣ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕರೆ ನೀಡಿದರು.
ತಾಪಂ ಸದಸ್ಯೆ ಗೌರವ್ವಾ ಪಾಟೀಲ, ಬ್ಲಾಕ ಅದ್ಯಕ್ಷ ಸಿ.ಸಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷೆ ನಾಜರೀನಬಾನು ಕರಿದಾವಲ್, ಗ್ರಾಪಂ ಸದಸ್ಯರಾದ ಸುರೇಶ ಇಟಗಿ, ಗೌಸಮೋದ್ದೀನ ಜಾಲಿಕೊಪ್ಪ, ಸದ್ದಾಂ ನದಾಪ್, ಅನಂದಗೌಡ ಪಾಟೀಲ, ಶ್ರೀಕಾಂತ ಮಾಧುಬರಮನ್ನವರ, ಬಸವರಾಜ ತೋಟಗಿ, ಸಯ್ಯದ ಸನದಿ, ಸಲಿಂ ಸತ್ತಿಗೇರಿ, ಖತಾಲಭೀ ಗೋವೆ, ಮಹಾದೇವಿ ದುರ್ಗನ್ನವರ, ಸುನಂದಾ ಹೊರಗಿನಮನಿ, ಇಶ್ರತ್ಬಾನು ಬಂಕಾಪೂರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಿ.ಎನ್ .ಪಾಟೀಲ, ಜಗದೀಶ ಯಳ್ಳೂರ, ಸಿದ್ದಣ್ಣಾ ಹಾವನ್ನವರ, ಪ್ರಕಾಶಗೌಡ ಪಾಟೀಲ, ರಾಮನಗೌಡ ಪಾಟೀಲ, ಬಿ.ಜಿ ವಾಲಿಇಟಗಿ, ರಾಜು ಮೇಳೇದ, ಅಡಿವೆಪ್ಪ ಇಟಗಿ ಸೇರಿದಂತೆ ಬಸ್ಸಾಪೂರ, ಅರಳೀಕಟ್ಟಿ, ಹಿರೇಬಾಗೇವಾಡಿ, ಮುತ್ನಾಳ, ವಿರಪನಕೊಪ್ಪ, ಭೆಂಡಿಗೇರಿ, ಕುಕಡೊಳ್ಳಿ, ಗಜಪತಿ, ಬಡಸ್, ಅಂಗಲಗಿ, ಹುಲಿಕವಿ ಗ್ರಾಮಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ