ಲಾಕ್‌ಡೌನ್‌: ನಿತ್ಯ 100 ಟನ್‌ ಕಸ ಕಮ್ಮಿ


Team Udayavani, Apr 29, 2020, 4:54 PM IST

bg-tdy-1

ಸಾಂದರ್ಭಿಕ ಚಿತ್ರ

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಕಸ ಹಾಗೂ ಪ್ಲಾಸ್ಟಿಕ್‌ ಸಂಗ್ರಹ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ದಿನಕ್ಕೆ ಸರಿಸುಮಾರು 100 ಟನ್‌ ವರೆಗೆ ಕಸ ಸಂಗ್ರಹಣೆ ಇಳಿಕೆ ಆಗುತ್ತಿರುವುದರಿಂದ ಪಾಲಿಕೆಗೆ ನಿತ್ಯ ಲಕ್ಷ ರೂ. ವರೆಗೆ ಉಳಿತಾಯ ಆಗುತ್ತಿದೆ.

ಬೆಳಗಾವಿ ಮಹಾನಗರದಲ್ಲಿ ಈ ಮುಂಚೆ ದಿನಾಲು ಸುಮಾರು 250 ಟನ್‌ ವರೆಗೆ ಕಸ ಸಂಗ್ರಹವಾಗುತ್ತಿತ್ತು. ಈಗ ಹಸಿ ಹಾಗೂ ಒಣ ಕಸ ನಿರ್ವಹಣೆ ಮಾಡಿ ತಾಲೂಕಿನ ತುರಮುರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೇಬವಾರಿ ಮಾಡಲಾಗುತ್ತಿದೆ. ಲಾಕ್‌ಡೌನ್‌ ದಿಂದಾಗಿ ಕೇವಲ 140ರಿಂದ 150 ಟನ್‌ವರೆಗೆ ಮಾತ್ರ ಕಸ ಸಂಗ್ರಹವಾಗುತ್ತಿದೆ. ಇದರಿಂದ ಪೌರ ಕಾರ್ಮಿಕರ ಕೆಲಸದ ಒತ್ತಡ ತುಸು ಇಳಿಕೆ ಆಗಿದೆ.

ಟಿಪ್ಪಿಂಗ್‌ ವೆಚ್ಚ ಇಳಿಕೆ: ಲಾಕ್‌ಡೌನ್‌ದಿಂದಾಗಿ ಹೊಟೇಲ್‌, ರೆಸ್ಟಾರೆಂಟ್‌, ಸಂತೆ, ಮಾರುಕಟ್ಟೆ, ಸಭೆ-ಸಮಾರಂಭಗಳು ಬಂದ್‌ ಆಗಿದ್ದರಿಂದ ಕಸ ಇಲ್ಲವಾಗಿದೆ. ಒಣ ಹಾಗೂ ಹಸಿ ಕಸವನ್ನು ವರ್ಗೀಕರಣ ಮಾಡಿಕೊಂಡು ತ್ಯಾಜ್ಯ ಘಟಕಕ್ಕೆ ಕಳುಹಿಸಲಾಗುತ್ತಿದೆ. ತುರಮುರಿ ತ್ಯಾಜ್ಯ ಘಟಕದಲ್ಲಿ ಕಸ ಪ್ರಕ್ರಿಯೆ ವೆಚ್ಚ(ಟಿಪ್ಪಿಂಗ್‌ ಚಾರ್ಜ್‌)ವನ್ನು ಪ್ರತಿ ಟನ್‌ಗೆ ನೀಡಲಾಗುತ್ತದೆ. ಕಸ ಸಂಗ್ರಹಣೆ ಕಡಿಮೆ ಆಗಿದ್ದರಿಂದ ಇದರ ವೆಚ್ಚವೂ ಇಳಿಕೆ ಆಗಿ ಪಾಲಿಕೆಗೆ ಇದು ಉಳಿತಾಯವಾಗುತ್ತಿದೆ. ಕಸದ ಟಿಪ್ಪಿಂಗ್‌ ಮಾಡಲು ತುರಮುರಿಯಲ್ಲಿರುವ ರಾಮಕಿ ಕಂಪನಿಗೆ ಪ್ರತಿ ಟನ್‌ಗೆ 1031 ರೂ. ನೀಡುತ್ತದೆ. ಈಗ ಅಂದಾಜು 100 ಟನ್‌ ಕಸ ಸಂಗ್ರಹಣ ಕಡಿಮೆ ಆಗಿದ್ದರಿಂದ ದಿನಾಲು ಒಂದು ಲಕ್ಷ ರೂ.ವರೆಗೆ ಉಳಿತಾಯವಾಗುತ್ತಿದೆ.

ಕಡಿಮೆಯಾಗಿದೆ ಪ್ಲಾಸ್ಟಿಕ್‌ ಬಳಕೆ: ನಗರದ 58 ವಾರ್ಡಗಳ ಪೈಕಿ 47 ವಾರ್ಡ್‌ಗಳಲ್ಲಿ ಸ್ವತ್ಛತಾ ಗುತ್ತಿಗೆದಾರರದಿಂದ ಕಸ ಸಂಗ್ರಹ ಮಾಡಲಾಗುತ್ತಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ ಪಾಲಿಕೆಯ ಪೌರ ಕಾರ್ಮಿಕರೇ ನಿರ್ವಹಣೆ ಮಾಡುತ್ತಾರೆ. ಕೆಲವೊಂದು ವಾರ್ಡ್‌ಗಳಲ್ಲಿ ಮಹಿಳಾ ಉಳಿತಾಯ ಘಟಕದಿಂದ ವಾಹನಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಇದರಲ್ಲಿ ಒಣ ಹಾಗೂ ಹಸಿ ಎಂದು ಬೇರ್ಪಡಿಸಿಕೊಂಡು ಕಸ ಸಂಗ್ರಹವಾಗುತ್ತಿದ್ದು, ರಸ್ತೆ ಪಕ್ಕದಲ್ಲಿ ಹಾಗೂ ಡಸ್ಟ್‌ಬಿನ್‌ಗಳಲ್ಲಿ ಸಾಮಾನ್ಯ ಕಸಕ್ಕಿಂತ ಪ್ಲಾಸ್ಟಿಕ್‌ ಪ್ರಮಾಣ ಹೆಚ್ಚಾಗಿರುತ್ತದೆ.

ಲಾಕ್‌ಡೌನ್‌ದಿಂದಾಗಿ ರಸ್ತೆ ಪಕ್ಕದಲ್ಲಿ ರಾಶಿ ರಾಶಿಯಾಗಿ ಬೀಳುತ್ತಿದ್ದ ಕಸಕ್ಕೂ ಬ್ರೇಕ್‌ ಬಿದ್ದಿದ್ದು, ಪ್ಲಾಸ್ಟಿಕ್‌ ಬಳಕೆಯಂತೂ ಶೇ. 60-70ರಷ್ಟು ಕಡಿಮೆ ಆಗಿದೆ. ಈಗ ಏನಿದ್ದರೂ ಮನೆ ಮನೆಯಲ್ಲಿ ಸಂಗ್ರಹವಾಗುತ್ತಿರುವ ಕಸ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ವಿಲೇವಾರಿ ಮಡಲಾಗುತ್ತಿದೆ. ನಗರದಲ್ಲಿ ಕಸ ವರ್ಗೀಕರಣ ಮಾಡುವ ಪ್ರಕ್ರಿಯೆ ಕೆಲವೊಂದು ಕಡೆಗಳಲ್ಲಿ ನಡೆಯುತ್ತದೆ. ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಈಗ ಮನೆ ಮನೆಯಿಂದ ಮಾತ್ರ ಕಸ ಸಂಗ್ರಹಣೆ ಆಗುತ್ತಿರುವುದರಿಂದ ವರ್ಗೀಕರಣ ಪ್ರಕ್ರಿಯೆಯೂ ಕಡಿಮೆಯಾಗಿದೆ. ಒಣ ಕಸವನ್ನು ಕೆಲವು ತಿಂಗಳುಗಳಿಂದ ದಾಲ್ಮಿಯಾ ಸಿಮೆಂಟ್‌ ಕಾರ್ಖಾನೆಗೆ ಪೂರೈಸುತ್ತಿರುವುದರಿಂದ ಕಸದ ಸಮಸ್ಯೆಯೂ ಸ್ವಲ್ಪ ಪ್ರಮಾಣದಲ್ಲಿ ಬಗೆಹರಿದಂತಾಗಿದೆ.

ಪೌರಕಾರ್ಮಿಕರ ಕೆಲಸದ ಒತ್ತಡಕ್ಕೆ ಬ್ರೇಕ್‌ :  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕೆಲಸ ಲಾಕ್‌ಡೌನ್‌ ದಿಂದಾಗಿ ಕಡಿಮೆ ಆಗಿಲ್ಲ. ಆದರೆ ದಿನಂಪ್ರತಿ ಕೆಲಸ ಮಾಡುವ ಅವ  ಮಾತ್ರ ಇಳಿಕೆ ಆಗಿದೆ. ಹೀಗಾಗಿ ಪೌರ ಕಾರ್ಮಿಕರ ಕೆಲಸದ ಒತ್ತಡ ತುಸು ಇಳಿಮುಖಗೊಂಡಿದೆ. ಕಸ ಸಂಗ್ರಹಣ ಹಾಗೂ ವಿಲೇವಾರಿ ಕೆಲಸದಲ್ಲಿ ಇಳಿಕೆ ಕಂಡರೂ ಇನ್ನುಳಿದಂತೆ ರಸ್ತೆ ಸ್ವಚ್ಛತೆ, ಹೋಮ್‌ ಕ್ವಾರಂಟೆ„ನ್‌ ಆಗಿರುವ ಹೋಟೆಲ್‌ಗ‌ಳ ಸ್ವತ್ಛತೆ ಕಾರ್ಯವನ್ನು ಪೌರ ಕಾರ್ಮಿಕರೇ ಮಾಡುತ್ತಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಕಸ ಸಂಗ್ರಹ ದಿನನಿತ್ಯ 230ರಿಂದ 240 ಟನ್‌ ವರೆಗೆ ಆಗುತ್ತಿತ್ತು. ಈಗ ಲಾಕ್‌ಡೌನ್‌ದಿಂದಾಗಿ ಹೊಟೇಲ್‌, ಸಂತೆ, ಮಾರುಕಟ್ಟೆಗಳು ಬಂದ್‌ ಆಗಿದ್ದರಿಂದ ಕಸದ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಪೌರ ಕಾರ್ಮಿಕರಿಗೆ ಸ್ವಚ್ಛತೆಯ ಕೆಲಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ.  -ಜಗದೀಶ ಕೆ.ಎಚ್‌., ಆಯುಕ್ತರು ಮಹಾನಗರ ಪಾಲಿಕೆ

 

­-ಭೈರೋಬಾ ಕಾಂಬಳೆ

 

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.