ಮಾನಸಿಕ ಸ್ಥಿರತೆ ರಸ್ತೆ ಸುರಕ್ಷತೆಗೆ ಆಧಾರ: ಅಂಬಿಕಾ

75 ಬೈಕ್‌ಗಳ ರ್ಯಾಲಿ ಕಾರ್ಯಕ್ರಮ ; ­ಪಠ್ಯದಲ್ಲಿಯೂ ಸಂಚಾರ ನಿಯಮ ಪಾಲನೆ ವಿಷಯ ಸೇರಿಸಿ: ಡಿಸಿಪಿ

Team Udayavani, Jun 2, 2022, 4:28 PM IST

25

ಬೆಳಗಾವಿ: ಆಂತರಿಕವಾಗಿ ಶೇಖರಣೆಯಾಗಿರುವ ಪಂಚವಿಕಾರಗಳಿಂದ ಮಾನಸಿಕ ಸ್ಥಿರತೆ ಕಡಿಮೆಯಾಗಿದೆ. ಪ್ರತಿ ಸಿಗ್ನಲ್‌ ದೀಪದ ಕೆಳಗೆ ಒಂದೆರಡು ನಿಮಿಷ ಪರಮಾತ್ಮನ ನೆನಪು ಮಾಡಿದಾಗ ಮಾನಸಿಕ ಸ್ಥಿರತೆಗೆ ಅನುಕೂಲವಾಗುತ್ತದೆ. ಮಾನಸಿಕ ಸ್ಥಿರತೆ ರಸ್ತೆ ಸುರಕ್ಷತೆಗೆ ಆಧಾರ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬೆಳಗಾವಿ ಉಪವಲಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಅಂಬಿಕಾ ಹೇಳಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ 75 ಬೈಕ್‌ಗಳ ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಸಿಪಿ ಪಿ.ವಿ. ಸ್ನೇಹಾ ಬೈಕ್‌ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ನಾಗರಿಕ ನಿಯಮಗಳು ಪಾಲನೆಯಾಗಬೇಕು. ಪಠ್ಯಪುಸ್ತಕಗಳಲ್ಲಿಯೂ ಸಂಚಾರ ನಿಯಮ ಪಾಲನೆ ವಿಷಯ ಸೇರಿಸಬೇಕು. ಅಂತಃಕರಣ ಶುದ್ಧಿಯಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ. ರಸ್ತೆ ನಿಯಮ ಇರುವುದು ನಾಗರಿಕ ಸುರಕ್ಷತೆಗಾಗಿ. ಪೊಲೀಸರಿಗೆ ನೀಡುವ ಸಹಕಾರ ಉತ್ತಮ ನಗರ ನಿರ್ಮಾಣಕ್ಕೆ ಆಧಾರ ಎಂದರು.

ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಪಿ.ವೈ. ನಾಯಕ್‌ ಮಾತನಾಡಿ, ನಾಗರಿಕ ಸಂಸ್ಕೃತಿ, ಸದ್ಭಾವನೆಗಳು ಸುಗಮ ಜೀವನಕ್ಕೆ ಆಧಾರ. ಮನಸ್ಸಿನ ಏಕಾಗ್ರತೆಯಿಂದ ಗಡಿಬಿಡಿ ಜೀವನಕ್ಕೆ ತಡೆ ನೀಡುತ್ತದೆ. ರಸ್ತೆ ಸುರಕ್ಷತೆಯಿಂದ ಅಪಘಾತ ನಿಯಂತ್ರಣಕ್ಕೆ ಬ್ರಹ್ಮಕುಮಾರಿಯರ ಕೊಡುಗೆ ದೊಡ್ಡದು ಎಂದರು.

ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಅಜಿತ್‌ ವಾರಕೇರಿ ಮಾತನಾಡಿ, ಬೇರೆಯವರಿಗೆ ಹೇಳುವ ಬದಲು ಪ್ರತಿ ಕುಟುಂಬದಲ್ಲಿ ಬದಲಾವಣೆಯಾದರೆ ಜಗತ್ತು ಬದಲಾಗಲು ಸಾಧ್ಯ. ಭವಿಷ್ಯಕ್ಕಾಗಿ ವಿಮೆ ಪಾಲಿಸಿ ಹೊಂದುವುದರಿಂದ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ ಎಂದರು.

ರಾಜಯೋಗಿನಿ ಬಿ.ಕೆ. ಮೀರಾಜಿ ಹಾಗೂ ಬಿ.ಕೆ. ಸುಲೋಚನಾ ಮಾತನಾಡಿ, ರಾಜಯೋಗ ಅಭ್ಯಾಸ ಶ್ರೇಷ್ಠ ಹಾಗೂ ಸುರಕ್ಷತಾ ಜೀವನಕ್ಕೆ ಆಧಾರ. ಮುಂದೆ ಬರಲಿರುವ ಸುವರ್ಣ ಯುಗದಲ್ಲಿ ಅಪಘಾತ ಮುಕ್ತ ಪ್ರಪಂಚವಾಗಲಿದೆ ಎಂದರು.

ಬಿ.ಕೆ. ಪ್ರತಿಭಾ ಪ್ರಾಸ್ತಾವಿಕ ಭಾಷಣ ಮಾಡಿದರು. ರ್ಯಾಲಿಯು ಮಹಾಂತೇಶ ನಗರ, ಚನ್ನಮ್ಮ ವೃತ್ತ, ಶಾಸ್ತ್ರಿ ನಗರ, ಶಹಾಪುರ, ಭಾಗ್ಯನಗರ, ಅನಗೋಳ, ಚನ್ನಮ್ಮನಗರ, ಟಿಳಕವಾಡಿ, ವಿಜಯನಗರ, ಹನುಮಾನನಗರ, ಶಾಹೂನಗರ, ರಾಮತೀರ್ಥನಗರ ಭಾಗಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಕಾರ್ಯಕ್ರಮದಲ್ಲಿ ಬಿಕೆ ವಿದ್ಯಾ, ಬಿಕೆ ಮಹಾದೇವಿ, ಬಿಕೆ ರೂಪ, ಬಿಕೆ ಮೀನಾಕ್ಷಿ, ಬಿಕೆ ದತ್ತಾತ್ರೇಯ, ಬಿಕೆ ಮನೋಹರ, ಬಿಕೆ ರಾಜೇಂದ್ರ ಗೋಟಡಕಿ ಇತರರಿದ್ದರು.

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.