ಶೈಕ್ಷಣಿಕ ಗುಣಮಟ್ಟ ಹೆಚ್ಚಲಿ : ಸುರೇಶ ಕುಮಾರ
ಒಳ್ಳೆಯ ಮನಸ್ಸಿನ ಕಾರ್ಯದಿಂದ ಉತ್ತಮ ಬದಲಾವಣೆವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಲಿ
Team Udayavani, Feb 9, 2021, 6:00 PM IST
ಖಾನಾಪುರ: ಸಮಾಜದಲ್ಲಿ ಒಳ್ಳೆಯ ಮನಸ್ಸಿನಿಂದ ಕಾರ್ಯ ಮಾಡಲು ಹೊರಟರೆ ಮಾತ್ರ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ಅವರು ತಾಲೂಕಿನ ಜಾಂಬೋಟಿ ಗ್ರಾಮದ ಜನಕಲ್ಯಾಣ ಟ್ರಸ್ಟ್ ಸಂಚಾಲಿತ ವಿದ್ಯಾ ವಿಕಾಸ ಸಮಿತಿ ವತಿಯಿಂದ ಪುನರ್ ನಿರ್ಮಿತ ಮಾಧ್ಯಮಿಕ ವಿದ್ಯಾಲಯ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು. ಈ ಶಾಲೆ ಪುನರ್ ನಿರ್ಮಾಣ ಮಾಡಲು ಹೊರಟಿರುವುದು ಉತ್ತಮ ಬದಲಾವಣೆಗೆ ಮಾದರಿ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.
ಇಲ್ಲಿ ಕಲಿತ ವಿದ್ಯಾರ್ಥಿಗಳು 15 ವರ್ಷಕ್ಕೆ ಬೆಳಗಾವಿ ಜಿಲ್ಲಾ ಧಿಕಾರಿಗಳಾಗಿ ಬರುವುದರ ಮೂಲಕ ಸಮಾಜದ ಆಸ್ತಿಯಾಗಬೇಕು. ಕೇವಲ ಅಂಕ ಪಡೆಯುವುದಷ್ಟೇ ಅಲ್ಲ, ಜೊತೆಗೆ ಅದನ್ನು ಮೀರಿ ಸಮಾಜಕ್ಕೆ ಕೊಡುಗೆಯಾಗಿ ಬೆಳೆಯಬೇಕು. ನಾನು 4 ಶಾಲೆಗಳಿಗೆ ಭೇಟಿ ನೀಡಿದ್ದು ಎಲ್ಲ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಾಗಬೇಕು. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬಹುತೇಕ ಎಲ್ಲ ರಾಜ್ಯಗಳು ಮಾಡದಿದ್ದರೂ ನಾವು ಅಭಿಪ್ರಾಯ ಪಡೆದು ಪರೀಕ್ಷೆ ನಡೆಸಿದೆವು. ಇದೀಗ ಇಲ್ಲಿ ಯಾರೂ ಮಾಸ್ಕ ಹಾಕಿಲ್ಲ. ಇದರಿಂದ ಕೊರೊನಾ ಕಡಿಮೆಯಾಗಿದೆ ಎಂದು ಕಂಡು ಬರುತ್ತದೆ ಎಂದರು.
ಇದನ್ನೂ ಓದಿ :ನಿರಾಣಿ ಉದ್ಯಮ ಸಂಸೆಯಿಂದ ಉದ್ಯೋಗ ಸೃಷ್ಟಿ
ಸಮಾರಂಭದಲ್ಲಿ ಮಂಗೇಶ ಬಿಂಡೆ, ಅರವಿಂದ ದೇಶಪಾಂಡೆ, ವಿಶ್ವೇಶ್ವರಯ್ನಾ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಚಂದ್ರಶೇಖರನ್, ಶಿಕ್ಷಣ ಇಲಾಖೆ ಆಯುಕ್ತ ಮೇಜರ ಸಿದ್ದಲಿಂಗಯ್ನಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್