ವಿನಯ್ ಕುಲಕರ್ಣಿಗೆ ತಿಲಕವಿಟ್ಟು ರಾಖೀ ಕಟ್ಟಿ ಸ್ವಾಗತಿಸಿದ ಶಾಸಕಿ ಹೆಬ್ಬಾಳ್ಕರ್
Team Udayavani, Aug 22, 2021, 1:41 PM IST
ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಜೈಲಿನ ಆವರಣಕ್ಕೆ ಬಂದಿದ್ದರು. ಒಂದು ಗಂಟೆಗಳ ಕಾಲ ಕಾಯುತ್ತ ಹೊರ ಭಾಗದಲ್ಲಿ ನಿಂತಿದ್ದರು. ವಿನಯ ಜೈಲಿನಿಂದ ಹೊರ ಬರುತ್ತಲೇ ಹೂಗುತ್ಛ ನೀಡಿ ಹಣೆಗೆ ತಿಲಕವಿಟ್ಟು ಅವರಿಗೆ ರಾಖೀ ಕಟ್ಟಿ ಸ್ವಾಗತಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, “ನನ್ನ ಹಾಗೂ ವಿನಯಣ್ಣನ ಕುಟುಂಬದ ಸಂಬಂಧ ರಾಜಕೀಯೇತರವಾಗಿದೆ. 25 ವರ್ಷಗಳಿಂದಲೂ ಅಣ್ಣ-ತಂಗಿ ನಂಟಿದೆ. ರಕ್ಷಾ ಬಂಧನ ಮುನ್ನಾ ದಿನವೇ ಅಣ್ಣ ಕಾರಾಗೃಹದಿಂದ ಬಿಡುಗಡೆ ಆಗುತ್ತಿದ್ದಾರೆ. ಹೀಗಾಗಿ ನಮಗೆಲ್ಲ ಇದು ಸಂತಸದ ಸುದ್ದಿ. ಅವರು ಬಿಡುಗಡೆ ಆಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಂತೋಷದಿಂದ ಸ್ವಾಗತಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ’ ಎಂದರು.
“ವಿನಯಣ್ಣನ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಘಾಸಿಯಾಗಿದ್ದಾರೆ. ಅವರ ಕುಟುಂಬ ವರ್ಗದವರಿಗೂ ಬಹಳ ನೋವಾಗಿದೆ. ಈ ಪ್ರಕರಣದಲ್ಲಿ ಅವರು ಗೆದ್ದು ಬರಲಿ ಎಂಬುದಾಗಿ ಹಾರೈಸುತ್ತೇನೆ. ಕಾಂಗ್ರೆಸ್ ಪಕ್ಷ ವಿನಯಣ್ಣನ ಜೊತೆಗೆ ಇರುತ್ತದೆ. ಇವರ ಬಿಡುಗಡೆಯಿಂದ ಪಕ್ಷಕ್ಕೆ ಬಹಳ ಅನುಕೂಲ ಆಗಲಿದೆ. ಕೇವಲ ಒಂದು ಕ್ಷೇತ್ರದ ನಾಯಕರಲ್ಲದೇ ರಾಜ್ಯ ಮಟ್ಟದ ಪ್ರಭಾವಿ ನಾಯಕರು. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಆಗಿದ್ದಾರೆ’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ