ಏಡ್ಸ್‌-ಕ್ಯಾನ್ಸರ್‌ಗಿಂತಲೂ ಜಾತೀಯತೆ ಮಾರಕ

•ಪ್ರಾಣ ಪ್ರತಿಷ್ಠಾಪಣೆ ಹೆಸರಲ್ಲಿ ತಳ ಸಮಾಜ ತುಳಿತ: ಸತ್ಯಂಪೇಟೆ •ಹಬ್ಬದ ಹೆಸರಲ್ಲಿ ಹಾಲು ವ್ಯರ್ಥ: ಸತೀಶ ಕಳವಳ

Team Udayavani, Aug 5, 2019, 9:19 AM IST

bg-tdy-3

ಬೆಳಗಾವಿ: ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಬಸವ ಪಂಚಮಿ ಚಿಂತನಾಗೋಷ್ಠಿಯಲ್ಲಿ ಶಾಸಕ ಸತೕಶ ಜಾರಕಿಹೊಳಿ ಮಾತನಾಡಿದರು.

ಬೆಳಗಾವಿ: ಜಾತೀಯತೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ರಕ್ತದ ಕಣಗಳಲ್ಲಿ ಹಾಗೂ ನರ ನಾಡಿಗಳಲ್ಲಿ ಹರಡಿಕೊಂಡಿದ್ದು, ಇದು ಏಡ್ಸ್‌-ಕ್ಯಾನ್ಸರ್‌ಗಿಂತಲೂ ಮಾರಕವಾಗಿದೆ ಎಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಾಗ ಪಂಚಮಿ ಹಬ್ಬದಂದು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರವಿವಾರ ನಡೆದ ಬಸವ ಪಂಚಮಿ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಶ್ನೆಗಳಿಲ್ಲದ ಸಮಾಜ ಸತ್ತು ಹೋಗಿದೆ. ಸಮಾಜ ಪ್ರಶ್ನೆ ಮಾಡುವುದನ್ನೇ ಮರೆತಿರುವುದರಿಂದ ಜಾತೀಯತೆಯ ಬೀಜ ಮೊಳಕೆ ಒಡೆದು ಎಲ್ಲ ಕಡೆಯೂ ಜಾತಿ ಭ್ರಮೆ ಪಸರಿಸಿದೆ. ಇದರಿಂದ ವ್ಯಕ್ತಿತ್ವ ವಿಕಸನ ನಾಶವಾಗುತ್ತಿದೆ. ಸಮಾಜ ಸುಧಾರಣೆಯತ್ತ ಸಾಗಬೇಕಾದರೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.

ಸುಳ್ಳು ಹೇಳುವ ಮೂಲಕ ನಮ್ಮನ್ನು ನಾವು ವಂಚನೆ ಮಾಡಿಕೊಳ್ಳುತ್ತಿದ್ದೇವೆ. ಮನಸ್ಸಿನ ಮಾತು ಕೇಳುತ್ತಿಲ್ಲ. ವಚನ, ಸಂವಿಧಾನ, ಒಳ್ಳೆಯ ವ್ಯಕ್ತಿಗಳಿಂದ ಬದುಕು ಸುಧಾರಣೆ ಮಾಡಿಕೊಳ್ಳಬೇಕು. ದೇವರಿಗೆ ಹಾಲು ಎರೆಯುವುದು ಅವಶ್ಯಕತೆ ಇಲ್ಲ. ಪುರೋಹಿತಶಾಹಿಗಳು ಬೆಣ್ಣೆ, ಹಾಲು, ತುಪ್ಪ ತಿನ್ನುತ್ತಿದ್ದರೆ, ನಮಗೆ ಗೋ ಮೂತ್ರದ ಕುಡಿಸುತ್ತಿದ್ದಾರೆ. ಹುಲಿಯ ಕ್ರೌರ್ಯಕ್ಕಿಂತ ನರಿ ಕ್ರೌರ್ಯ ಬಹಳ ಕೆಟ್ಟದ್ದಾಗಿರುತ್ತದೆ ಎಂದರು.

ಮಂದಿರ, ದೇವಸ್ಥಾನಗಳನ್ನು ಕೆಳ ಸಮುದಾಯದ ಜನರೇ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದರೆ ಪ್ರಾಣ ಪ್ರತಿಷ್ಠಾಪಣೆ ಹೆಸರಲ್ಲಿ ತಳ ಸಮಾಜವನ್ನು ತುಳಿಯುತ್ತಿದ್ದಾರೆ. ವೇದ, ಪುರಾಣ, ಶಾಸ್ತ್ರ ಓದಿಕೊಂಡವರು ಮನುಷ್ಯತ್ವ ತಿಳಿದುಕೊಂಡಿಲ್ಲ. ಮನಸ್ಸಿನ ಮೈಲಿಗೆ ತೊಳೆದುಕೊಳ್ಳದೇ ಕೇವಲ ಬಾಯಲ್ಲಿ ಜ್ಞಾನ ಇಟ್ಟುಕೊಂಡು ಆಚರಣೆಯಲ್ಲಿ ಅಜ್ಞಾನ ತುಂಬಿಕೊಂಡಿದ್ದಾರೆ. ಇತಿಹಾಸವನ್ನು ಕಣ್ತೆರೆದು ನೋಡಬೇಕು, ಮನಸ್ಸು ಬಿಚ್ಚಿ ಓದಬೇಕು ಎಂದರು.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಪುರೋಹಿತಶಾಹಿಗಳು ನಂಬಿಕೆಗಳನ್ನು ಮೂಢನಂಬಿಕೆಗಳನ್ನಾಗಿ ಬದಲಾವಣೆ ಮಾಡಿದ್ದಾರೆ. ಕೆಲಸದ ಆಧಾರದ ಮೇಲೆ ಜಾತಿಗಳನ್ನಾಗಿ ವಿಭಜನೆ ಮಾಡಲಾಯಿತು. ಸ್ವಾತಂತ್ರ್ಯಕ್ಕಿಂತ ಮುಂಚೆ ಜನಸಂಖ್ಯೆಗಿಂತಲೂ ದೇವರ ಸಂಖ್ಯೆಯೇ ಹೆಚ್ಚಿತ್ತು. ಸಮಾಜವನ್ನು ಬದಲಾಯಿಸಬೇಕಾಗಿದ್ದು, ಮೌಡ್ಯದಿಂದ ಹೊರಬರಬೇಕಾಗಿದೆ. ಮೌಡ್ಯದ ಹೆಸರಲ್ಲಿ ಶೋಷಣೆ ಮಾಡುತ್ತಿರುವುದನ್ನು ಇತಿಹಾಸ, ಪುಸ್ತಕ ಓದುವುದರಿಂದ ಮಟ್ಟ ಹಾಕಬೇಕು ಎಂದರು.

ಕಳೆದ ನಾಲ್ಕು ವರ್ಷಗಳಿಂದ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಸಾಮಾಜಿಕ ಹೋರಾಟಗಳಲ್ಲಿ ಸೋತರೂ ನಾವು ಇದನ್ನು ನಿರಂತರವಾಗಿ ಮುಂದುವರಿಸುತ್ತೇವೆ. ಪುರೋಹಿತಶಾಹಿಗಳು ಬುದ್ಧನನ್ನು ದೇಶ ಬಿಟ್ಟು ಓಡಿಸಿದ್ದಾರೆ. ಬಸವಣ್ಣನನ್ನು ಹತ್ಯೆ ಮಾಡಿದ್ದಾರೆ. ಇವರ ವಿಚಾರಗಳನ್ನು ವಿರೋಧಿಸುವವರು ಮುಂಚೂಣಿಯಲ್ಲಿದ್ದು, ಭಾರತ ಮಾತಾ ಕೀ ಜೈ ಘೋಷಣೆ ಕೂಗುತ್ತಿದ್ದಾರೆ ಎಂದು ಟೀಕಿಸಿದರು.

ವಿಶ್ವಗುರು ಬಸವ ಮಂಟಪ ಸಂಚಾಲಕ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕಲ್ಯಾಣ ಕ್ರಾಂತಿ ಮಾಡಲು ಎಲ್ಲ ಶರಣರ ಶ್ರಮ ವಹಿಸಿದ್ದಾರೆ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಶರಣರಿಂದಾಗಿದೆ. ಇಂದಿನ ಸಮಾಜಕ್ಕೆ ಇದು ಮಾದರಿಯಾಗಿದೆ ಎಂದರು.

ನಾಗರ ಪಂಚಮಿಯ ದಿನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿದರು. ಶಂಕರ ಗುಡಸ, ಅರವಿಂದ ಪರುಶೆಟ್ಟಿ, ಆರ್‌.ಎಸ್‌. ದರ್ಗೆ ಇದ್ದರು. ಮಹಾಂತೇಶ ತೋರಣಗಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ

Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.