ಖಾಕಿ ಕಣ್ತಪ್ಪಿಸಿ ಬಂದ 30 ಜನರಿಗೆ ಸೋಂಕು: ಏನಿದು ನಿಜಾಮುದ್ದೀನ್- ಅಜ್ಮೀರ್- ಬೆಳಗಾವಿ ಲಿಂಕ್
ಪೊಲೀಸರ ಜಾಣ್ಮೆಯಿಂದ ತಪ್ಪಿತು ಭಾರೀ ಅನಾಹುತ
Team Udayavani, May 10, 2020, 2:21 PM IST
ಬೆಳಗಾವಿ: ರಾಜಸ್ಥಾನದ ಅಜ್ಮೀರದಿಂದ ಪೊಲೀಸರ ಕಣ್ಣು ತಪ್ಪಿಸಿ ಬಂದು ಕರ್ನಾಟಕ ಗಡಿಯಲ್ಲಿ ಸಿಕ್ಕಿಬಿದ್ದ 38 ಜನರ ಗುಂಪಿನಲ್ಲಿ 30 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಆದರೆ ಗಡಿ ಭಾಗದಲ್ಲೇ ಇವರನ್ನು ತಡೆದ ಕರ್ನಾಟಕ ಪೊಲೀಸರಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ.
ದೆಹಲಿಯ ನಿಜಾಮುದ್ದಿನ್ ಜಮಾತ್ ಮರ್ಕಜ್ ದಿಂದ ನೇರವಾಗಿ ಅಜ್ಮೀರ ದರ್ಗಾಕ್ಕೆ ಹೋಗಿದ್ದ ಈ 38 ಜನರು ಬಸ್ ಮೂಲಕ ಪಾಸ್ ಸಹಾಯದಿಂದ ಕೊಲ್ಲಾಪುರವರೆಗೆ ಬಂದಿದ್ದಾರೆ. ಅಲ್ಲಿಂದ ಮಹಾರಾಷ್ಟ್ರ ಗಡಿ ದಾಟಿ ಬರುವಾಗ ಪೊಲೀಸರು ತಡೆ ಹಿಡಿದು ವಾಪಸ್ಸು ಕಳುಹಿಸಿದ್ದಾರೆ. ಒಂದೆರಡು ದಿನ ತಡೆದು ಅಲ್ಲಿಯೇ ಕಾಲ ಕಳೆದು ಕಾಲ್ನಡಿಗೆ ಮೂಲಕ ಬರುವಾಗ ನಿಪ್ಪಾಣಿ ಬಳಿ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಕೂಡಲೇ ಈ ಎಲ್ಲರನ್ನೂ ನಿಪ್ಪಾಣಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ತಪಾಸಣೆ ನಡೆಸಿದಾಗ ಇದರಲ್ಲಿ 30 ಜನರಿಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿಯ 22 ಮತ್ತು ಬಾಗಲಕೋಟೆಯ 8 ಜನರಿಗೆ ಸೋಂಕು ದೃಢವಾಗಿದೆ.
ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಎಲ್ಲರೂ ಅವರವರ ಮನೆಗೆ ಹೋಗಿದ್ದರೆ ಮುಂದೆ ಮಹಾ ಮಾರಿ ಕೋವಿಡ್-19 ಸೋಂಕು ಎಲ್ಲ ಕಡೆಯೂ ಪಸರಿಸುವ ಸಾಧ್ಯತೆ ಇತ್ತು. ಪೊಲೀಸರು ಜಾಣ್ಮೆ ವಹಿಸಿ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದರಿಂದ ಸಾರ್ವಜನಿಕರಿಗೆ ಹಾಗೂ ಕುಟುಂಬಸ್ಥರಿಗೆ ತಗುಲುತ್ತಿದ್ದ ಸೋಂಕು ಹತೋಟಿಗೆ ತಂದಂತಾಗಿದೆ. ಮುಂದಿನ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ