ಚಿಕ್ಕೋಡಿ: 13 ನಾಮಪತ್ರ ಕ್ರಮಬದ್ಧ ಬೆಳಗಾವಿ: ಎರಡು ತಿರಸ್ಕೃತ
Team Udayavani, Apr 7, 2019, 6:35 AM IST
ಬೆಳಗಾವಿ: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆದಿದ್ದು, ಒಟ್ಟಾರೆ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಬಿಜೆಪಿಯಿಂದ ಪಕ್ಷದಿಂದ ಅಣ್ಣಾಸಾಹೇಬ ಶಂಕರ ಜೊಲ್ಲೆ, ಕಾಂಗ್ರೆಸ್ದಿಂದ ಪ್ರಕಾಶ ಬಾಬಣ್ಣಾ ಹುಕ್ಕೇರಿ ಹಾಗೂ ಬಹುಜನ ಸಮಾಜ ಪಕ್ಷದಿಂದ ಮಚ್ಚೇಂದ್ರ ದವಲು ಕಾಡಾಪುರೆ, ಭಾರಿಫ್ ಬಹುಜನ ಮಹಾಸಂಘ ಪಕ್ಷದಿಂದ
ಅಪ್ಪಾಸಾಹೇಬ ಕುರಣೆ, ಉತ್ತಮ ಪ್ರಜಾಕೀಯ ಪಕ್ಷದಿಂದ ಬಾಳಿಗಟ್ಟಿ ಪ್ರವೀಣಕುಮಾರ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷದಿಂದ ಮುಗದುಮ್ ಇಸ್ಮಾಯಿಲ್ ಮಗದುಮ್, ಕಲ್ಲಪ್ಪ ಅಡಿವೆಪ್ಪ ಗುಡಸಿ, ಜಿತೇಂದ್ರ ಸುಭಾಷ. ನೇರ್ಲೆ, ಮಲ್ಲಪ್ಪಾ ಮಾರುತಿ ಖಟಾಂವೆ, ಮೋಹನ ಗುರಪ್ಪಾ ಮೋಟನ್ನವರ, ವಿಶ್ವನಾಥ ವಾಜಂತ್ರಿ, ಶೈಲಾ ಸುರೇಶ ಕೋಳಿ ಹಾಗೂ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದ್ದಾರೆ
ನಾಮಪತ್ರ ತಿರಸ್ಕೃತ: ನ್ಯಾಯಾಲಯದ ಮೊರೆ
ಕಾರವಾರ: ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದೆ. ಹತ್ತು ಸೂಚಕರು ಇರಲಿಲ್ಲ ಎಂಬ ಕಾರಣದಿಂದ ನಾಮಪತ್ರ ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾ ಶಾಖೆ ನೀಡಿತ್ತು. ಆದರೆ ಹತ್ತು ಸೂಚಕರ ಬಗ್ಗೆ ಅದರಲ್ಲಿ ತಿಳಿಸಿರಲಿಲ್ಲ ಎಂದು ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದ ಖಾನಾಪುರದ ಕೃಷ್ಣಾಜೀ ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವಾಗ ನನಗೆ ಹತ್ತು ಸೂಚಕರ ಬಗ್ಗೆ ಮಾಹಿತಿ ಇರಲಿಲ್ಲ. ಚುನಾವಣಾಧಿ ಕಾರಿಗಳು ಹೇಳಿರಲಿಲ್ಲ ಎಂದು ದೂರಿದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೃಷ್ಣಾಜೀ ಪಾಟೀಲ ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ