ಜನಮನ ಸೆಳೆದ ಜಾನಪದ ಮೆರವಣಿಗೆ
Team Udayavani, Mar 22, 2022, 2:51 PM IST
ರಾಮದುರ್ಗ: ಪಟ್ಟಣದಲ್ಲಿ ಮಾ. 21 ರಿಂದ 23 ರವರೆಗೆ ನಡೆಯಲಿರುವ ಶಿವರಾತ್ರಿ ಶಿವಜಾತ್ರಿ ರಾಜ್ಯ ಮಟ್ಟದ 7 ನೇ ಜಾನಪದ ಮಹಾಸಮ್ಮೇಳನದ ಜಾನಪದ ಕಲಾ ಮೆರವಣಿಗೆಯನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಶರಣು ತಳ್ಳಿಗೇರಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ತಾಲೂಕಿನ ಅವರಾದಿ ಶಿವಪೇಟೆಯ ಓಂ ಶಿವ ಮೇಳದ ಆಶ್ರಯದಲ್ಲಿ ನಡೆಯುತ್ತಿರುವ ಜಾನಪದ ಮಹಾಸಮ್ಮೇಳನ ಮೆರವಣಿಗೆ ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಿಂದ ಹೊರಟು, ಜುನಿಪೇಟ ಮಾರ್ಗವಾಗಿ ಹಳೆ ಪೊಲೀಸ್ ಠಾಣೆ, ತೇರ ಬಝಾರ್, ನೇಕಾರ ಪೇಟೆ, ರಾಧಾಪೂರ ಪೇಟೆಯಿಂದ ಮಾರ್ಕೆಟ್ ಗೇಟ್ ಮೂಲಕ ಹಾಯ್ದು ವಿದ್ಯಾ ಚೇತನ ಶಾಲೆಯಲ್ಲಿ ಕೊನೆಗೊಂಡಿತು.
ಮೆರವಣಿಗೆಯಲ್ಲಿ ಮಹಿಳೆಯರ ಕುಂಭ ಮೇಳ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ಹೆಜ್ಜೆ ಮೇಳ, ಕಹಳೆ ಓಲಗ, ಖಣಿ ಸಂಬಾಳ, ಜಗ್ಗಲಿಗೆ ಮೇಳ, ಪುರವಂತಿಕೆ ನೃತ್ಯ, ಜೋಗತಿ ನೃತ್ಯ ಹೀಗೆ 15ಕ್ಕೂ ಹೆಚ್ಚು ಜಾನಪದ ತಂಡಗಳು ಬೆಳಗಾವಿ, ವಿಜಯನಗರ, ವಿಜಯಪುರ, ಬಳ್ಳಾರಿ, ಹಾವೇರಿ, ದಾವಣಗೇರಿ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದವು.
ಓಂ ಶಿವ ಮೇಳದ ಸಂಸ್ಥಾಪಕ ಜಾನಪದ ಕಲಾವಿದ ಸಿದ್ದು ಮೋಟೆ, ನಿವೃತ್ತ ಯೋಧ ಪುಂಡಲೀಕ ನಡಗಡ್ಡಿ ಮತ್ತು ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಾ. 22 ರಂದು ಮಂಗಳವಾರ ಬಸಲಿಂಗಯ್ಯ ಹಾಗೂ ಕೌಜಲಗಿ ವಿಠ್ಠಲ ವೇದಿಕೆಯಲ್ಲಿ ಜರುಗುವ ಜಾನಪದ ಶಿವರಾತ್ರಿ ಸಮಾರಂಭದ ಸಾನಿಧ್ಯವನ್ನು ರಬಕವಿ ಬ್ರಹ್ಮಾನಂದ ಆಶ್ರಮದ ಗುರು ಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದು, ಮಾಜಿ ಶಾಸಕ ಅಶೋಕ ಪಟ್ಟಣ ಅಧ್ಯಕ್ಷತೆ ವಹಿಸುವರು. ಉದ್ಯಮಿ ವಿಜಯ ಶೆಟ್ಟಿ, ಪ್ರದೀಪ ಪಟ್ಟಣ, ರಾಜೇಶ್ವರಿ ಮೆಟಗುಡ್ಡ, ಮುತ್ತುರಾಜ ಕೊಂಡಾ, ಮುಖ್ಯಾಕಾರಿ ರವಿ ಬಾಗಲಕೋಟೆ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಆಗಮಿಸುವರು. ಬೆಂಬಳಗಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರಕಾಶ ತೆಗ್ಗಿಹಳ್ಳಿ ಉಪನ್ಯಾಸ ನೀಡುವರು. ಡಾ| ಎಂ.ಎನ್. ಸಿದ್ಧಗಿರಿ ಪ್ರಾಸ್ತಾವಿಕ ಮಾತನಾಡುವರು.
ಇದೇ ಸಂದರ್ಭದಲ್ಲಿ ಜಾನಪದ ಶಿವಶ್ರೀ ಪ್ರಶಸ್ತಿ ಪ್ರದಾನ, ಜಾನಪದ ಕಲಾ ಪ್ರೋತ್ಸಾಹಿಗಳ ಸಮ್ಮಾನ, ಸಮ್ಮೇಳನಕ್ಕೆ ಸಹಾಯ ನೀಡಿದ ಸನ್ಮಾನ್ಯರ ಸತ್ಕಾರ ನಡೆಯುವದು. ನಂತರ ಜಾನಪದ ಕಲಾ ಸಂಭ್ರಮ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ