ಶಾಲೆಯೇ ಚುಕುಬುಕು ರೈಲು!
Team Udayavani, Apr 26, 2019, 3:40 PM IST
ಬೆಟಗೇರಿ: ರೈಲು ಡಬ್ಬಿಯಲ್ಲಿ ಪಾಠ ಹೇಳುವ ಮೇಷ್ಟ್ರು, ರೈಲಿನಲ್ಲಿ ಕುಳಿತು ಪಾಠ ಕೇಳುವ ಮಕ್ಕಳು, ಆಟದೊಂದಿಗೆ ಪಾಠಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಇದು ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯ ಹೂಲಿಕಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ. ಇಲ್ಲಿ ಶಾಲಾ ಕೊಠಡಿಗಳಿಗೆ ರೈಲು ಚಿತ್ರ ಬಿಡಿಸಿ ಥೇಟ್ ರೈಲು ಗಾಡಿಯಂತೆಯೇ ಮಾಡಿದ್ದಾರೆ.
ಸರ್ಕಾರ ಹತ್ತು ಹಲವು ಯೋಜನೆಗಳ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತಿದೆ. ಆದರೆ ಈ ಶಾಲೆಗೆ ವಿಶಿಷ್ಟ ರೀತಿಯ ಬಣ್ಣ ಬಳಿದು, ರೈಲು ಚಿತ್ರ ಬಿಡಿಸಿ, ಶಾಲೆಯ ಚಿತ್ರಣವನ್ನು ಬದಲಿಸಿ ಆಕರ್ಷಣಿಯವಾಗಿ ಕಾಣುವಂತೆ ಮಾಡಿ, ಶಾಲಾ ವಂಚಿತ ಮಕ್ಕಳನ್ನು ಸಹ ಶಾಲೆಯತ್ತ ಸೆಳೆಯಲು ಶಿಕ್ಷಕರು ಹಾಗೂ ಸ್ಥಳೀಯ ಶಿಕ್ಷಣಪ್ರೇಮಿಗಳು ಪ್ರಯತ್ನ ನಡೆಸಿದ್ದಾರೆ.
ಇಂದಿನ ಖಾಸಗಿ ಶಾಲೆಗಳಿಗಳಿಗಿಂತ ತಾವೇನೂ ಕಡಿಮೇ ಇಲ್ಲ ಎನ್ನುವಂತೆ ಈ ಸರಕಾರಿ ಕನ್ನಡ ಶಾಲೆ ಇಂದು ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ. ತುಸು ದೂರದಲ್ಲಿಯೇ ಎರಡ್ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದರೂ ಈ ಶಾಲೆಯಲ್ಲಿ 1-7ನೇ ತರಗತಿವರೆಗೆ ಒಟ್ಟು 75 ಜನ ವಿದ್ಯಾರ್ಥಿಗಳಿದ್ದು, ನಾಲ್ಕು ಶಾಲಾ ಕೊಠಡಿಗಳಿವೆ, ಮೂವರು ಶಿಕ್ಷಕರಿದ್ದಾರೆ. ಆಟದ ಮೈದಾನವೂ ಚಿಕ್ಕದಿದೆ. ಆದರೂ ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸಲು ಆಗಾಗ ಸಿಹಿ ಸಿಹಿಯಾದ ವಿವಿಧ ಖಾದ್ಯಗಳನ್ನು ಮಾಡಿ ತರತರಹದ ಬಿಸಿಯೂಟ ನೀಡುತ್ತಿದ್ದು, ಜೊತೆಗೆ ಶಾಲೆಯ ನಲಿಕಲಿ ತರಗತಿಯ ಕೊಠಡಿಯಲ್ಲಿ ವಿಶಿಷ್ಟವಾಗಿ ಪಠ್ಯದ ವಿವಿಧ ಕಲಿಕಾ ಚಿತ್ರ ಬಿಡಿಸಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ.
ಶಾಲೆಯ ಶಿಕ್ಷಕರಾದ ಎಸ್.ಕೆ.ಮಲ್ಲೇಶ, ಪಿ.ಎಂ.ಬಡ್ಲಿ, ಅತಿಥಿ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹಾದಿಮನಿ ಮತ್ತು ಸದಸ್ಯರು, ಪಾಲಕರು, ಸ್ಥಳೀಯ ಶಿಕ್ಷಣಪ್ರೇಮಿಗಳ ನಿರ್ಧಾರ, ಹಾಗೂ ಅವರ ಸಹಾಯ, ಸಹಕಾರದ ಕೊಡುಗೆಯಿಂದ ಶಾಲೆಗೆ ಹೊಸ ಬಣ್ಣ ಬಳಿದು ಶಾಲೆಯ ಕೊಠಡಿಗಳ ಮುಂಭಾಗದ ಚಿತ್ರಣವನ್ನು ಒಂದು ರೈಲು ಬೋಗಿಯಂತೆ ಚಿತ್ರಿಸಿ ಬಣ್ಣ ಬಳಿಯಲಾಗಿದೆ. ಶಾಲೆಯನ್ನು ಆಕರ್ಷಕ ರೈಲಿನಂತೆ ಮಾಡುವುದರಿಂದ ಶಾಲೆಯ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ. ಅಲ್ಲದೇ ಮಕ್ಕಳು ಹೊಸ ಹುರುಪಿನಿಂದ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಶಾಲೆಗೆ ಹೊಸತೊಂದನ್ನು ಮಾಡಬೇಕೆಂದು ಆಲೊಚಿಸಿ ರೈಲು ಇಂಜಿನ್ ಮತ್ತು ಡಬ್ಬಿಗಳ ತರಹ ಚಿತ್ರ ಬಿಡಿಸಿದ್ದೆವೆ. ಈಗ ನಿತ್ಯ ಮಕ್ಕಳು ರೈಲು ಹತ್ತಿ ಇಳಿದಂತೆ ಖುಷಿ ಪಡುತ್ತಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಎಸ್.ಎಲ್.ಗುಂಡಕಲ್ಲಿ ಅವರು ಹೇಳುತ್ತಾರೆ.
ಇಲ್ಲಿಯ ಹೂಲಿಕಟ್ಟಿ ತೋಟದ ಶಾಲೆಯ ಸಮಗ್ರ ಅಭಿವೃದ್ಧಿಗೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ-ಸದಸ್ಯರು, ಪಾಲಕರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ನೀಡುತ್ತಿರುವ ಸಹಾಯ, ಸಹಕಾರ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ. ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಶಾಲೆಯ ಸಮಗ್ರ ಪ್ರಗತಿ, ಮಕ್ಕಳ ದಾಖಲಾತಿಯೂ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ ಅಂಬುವುದು ಶಿಕ್ಷಣ ಪ್ರೇಮಿಗಳ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ