ನೇಕಾರರಿಗೆ ನೆರವಾದೀತೇ ಅಲ್ಪ ಪರಿಹಾರ?


Team Udayavani, Jun 19, 2020, 11:58 AM IST

ನೇಕಾರರಿಗೆ ನೆರವಾದೀತೇ ಅಲ್ಪ ಪರಿಹಾರ?

ಬೆಳಗಾವಿ: ಮಾರುಕಟ್ಟೆ ಸಮಸ್ಯೆ, ಪ್ರಕೃತಿ ವಿಕೋಪ ಹಾಗೂ ಪ್ರವಾಹದ ಸುಳಿಗೆ ಸಿಲುಕಿ ನಲುಗಿದ್ದ ನೇಕಾರ ಸಮುದಾಯಕ್ಕೆ ಈಗ ಕೋವಿಡ್ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಘೋಷಿಸಿರುವ 2000 ರೂ. ಪರಿಹಾರ ಸಕಾಲಕ್ಕೆ ನಿಜವಾದ ನೇಕಾರರಿಗೆ ತಲುಪಲಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಪರಿಹಾರ ಘೋಷಣೆ ಮಾಡಿದ ನಂತರ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಸರ್ಕಾರದ ನಿರ್ದೇಶನದಂತೆ ನೇಕಾರರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭ ಮಾಡಿದೆ. ಆದರೆ ಅರ್ಜಿ ಸಲ್ಲಿಸಿದ ನೇಕಾರರು ಈ ಎರಡು ಸಾವಿರ ರೂ. ಪರಿಹಾರ ಹಣ ಪಡೆಯುವ ಮಾರ್ಗ ಸರಳವಾಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅದರ ಪರಿಶೀಲನೆಗಾಗಿ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಮತ್ತೆ ಪರಿಶೀಲನೆಯಾಗಿ ಹಣ ಬಿಡುಗಡೆಯಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆಗೆ ನೇಕಾರರು ಹರಸಾಹಸ ಪಡಬೇಕು. ಅಂದರೆ ಹಣ ಖಾತೆಗೆ ಜಮಾ ಆಗಲು ಸಾಕಷ್ಟು ಸಮಯ ಬೇಕು. ಅಲ್ಲದೇ ಸರ್ಕಾರ ಕೊಡುವ ಎರಡು ಸಾವಿರ ಹಣ ಒಂದು ತಿಂಗಳೂ ಸಾಲುವುದಿಲ್ಲ ಎಂಬುದು ನೇಕಾರರ ಆತಂಕ.

ಕ್ಷೌರಿಕರಿಗೆ ಹಾಗೂ ಅಟೋ ರಿಕ್ಷಾ ಚಾಲಕರಿಗೆ ಪರಿಹಾರವಾಗಿ ಐದು ಸಾವಿರ ಘೋಷಣೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ನೇಕಾರರಿಗೆ ಕೇವಲ ಎರಡು ಸಾವಿರ ಪರಿಹಾರ ಘೋಷಿಸಲಾಗಿದೆ. ಏಕೆ ತಾರತಮ್ಯ ಎಂಬುದು ರಾಜ್ಯದ ನೇಕಾರರ ಪ್ರಶ್ನೆ. ರಾಜ್ಯದಲ್ಲಿ ಸುಮಾರು 1.25 ಲಕ್ಷ ವಿದ್ಯುತ್‌ ಮಗ್ಗಗಳಿವೆ. ಇದರ ಮೇಲೆ ಅವಲಂಬಿತರಾದ ಐದು ಲಕ್ಷಕ್ಕೂ ಹೆಚ್ಚು ನೇಕಾರರ ಕುಟುಂಬಗಳಿವೆ. ಆದರೆ ಸರ್ಕಾರ ಕೇವಲ ಮಗ್ಗಗಳನ್ನು ಹೊಂದಿರುವ ಅಂದರೆ 1.25 ಲಕ್ಷ ನೇಕಾರರನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸಿದೆ ಎಂಬುದು ನೇಕಾರರ ಅಸಮಾಧಾನ.

ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಇಲಾಖೆ ಈಗಾಗಲೇ 5550 ಕೈ ಮಗ್ಗಗಳ ನೇಕಾರರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇದರಲ್ಲಿ ಸವದತ್ತಿ, ರಾಮದುರ್ಗ ತಾಲೂಕುಗಳಲ್ಲಿ ಕಂಬಳಿ ನೇಯುವ ಮೂರು ಸಾವಿರ ಕುರುಬ ಸಮಾಜದ ನೇಕಾರರೂ ಸೇರಿದ್ದಾರೆ. ಖಾದಿ ಗ್ರಾಮೋದ್ಯೋಗದಡಿ ಎರಡು ಸಾವಿರ ಕೈ ಮಗ್ಗಗಳಿವೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಡಿಯಲ್ಲಿ 550 ಮಗ್ಗಗಳಿವೆ. ಕೈ ಮಗ್ಗಗಳ ನೇಕಾರರಿಂದ ಪರಿಹಾರ ಕೋರಿ ಇದುವರೆಗೆ ಬಂದ 3000ಕ್ಕೂ ಹೆಚ್ಚು ಅರ್ಜಿಗಳನ್ನು ಜವಳಿ ಇಲಾಖೆ ಬೆಂಗಳೂರಿಗೆ ಕಳಿಸಿಕೊಟ್ಟಿದೆ. ಪರಿಸ್ಥಿತಿ ಗಂಭೀರ: ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಜನರ ಸ್ಥಿತಿ ಗಂಭೀರವಾಗಿದೆ. ಲಾಕ್‌ಡೌನ್‌ ಕಾರಣ ಕಳೆದ ಮೂರು ತಿಂಗಳಿನಿಂದ ಲಕ್ಷಾಂತರ ನೇಕಾರರು ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ. ವಿದ್ಯುತ್‌ ಮಗ್ಗಗಳಲ್ಲಿ ತಯಾರಾಗಿ ಮಾರಾಟವಾಗದೇ ಉಳಿದಿರುವ ಲಕ್ಷ ಲಕ್ಷ ಸೀರೆಗಳು ಅವಲಂಬಿತರನ್ನು ದಿಕ್ಕೆಡಿಸಿವೆ.

ಸರ್ಕಾರ ಸೀರೆ ಖರೀದಿಸಲು ಸಾಧ್ಯವೇ? :  ಅಂಕಿ-ಅಂಶಗಳ ಪ್ರಕಾರ ರಾಜ್ಯದ ವಿದ್ಯುತ್‌ ಮಗ್ಗಗಳ ಮಾಲಿಕರು ಉತ್ಪಾದಿಸಿದ ಸುಮಾರು 50 ಲಕ್ಷ ಸೀರೆ ಸರ್ಕಾರ ಖರೀದಿಸಿದರೆ ಮಾತ್ರ ಈ ನೇಕಾರರ ಬದುಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ಸೀರೆಗಳು ಮಾರಾಟವಾಗದ ಕಾರಣ ಮಾಲೀಕರು ಕಾರ್ಮಿಕರಿಗೆ ಹಣ ಕೊಡುತ್ತಿಲ್ಲ. ಇದು ಕಾರ್ಮಿಕರು-ಮಾಲೀಕರ ನಡುವೆ ಸಂಘರ್ಷ ಉಂಟಾಗುವ ಆತಂಕ ಸೃಷ್ಟಿಸಿದೆ.

ಅನಾಹುತಕ್ಕೆ ಹಾದಿ :  ಸಾಮಾನ್ಯವಾಗಿ ಫೆಬ್ರವರಿಯಿಂದ ಮೇವರೆಗೆ ಸೀರೆಗಳ ವ್ಯಾಪಾರ ಬಹಳ ಜೋರು. ಆಗ ಯಾವ ನೇಕಾರರ ಬಳಿಯೂ ಸೀರೆ ಉಳಿಯುವದಿಲ್ಲ. ಆದರೆ ಈ ವರ್ಷ ಲಾಕ್‌ಡೌನ್‌ ಕಾರಣ ಎಲ್ಲ ಸೀರೆ ಹಾಗೇ ಉಳಿದಿವೆ. ಮದುವೆ ದಿನಗಳು ಸಹ ಮುಗಿದು ಹೋದವು. ಈಗ ನವೆಂಬರ್‌ ತಿಂಗಳವರೆಗೆ ಕಾಯಬೇಕು. ಸೀರೆಗಳು ಮಾರಾಟವಾಗದೆ ಸಾಲದ ಒತ್ತಡದಿಂದ ಅನೇಕರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂಬುದು ನೇಕಾರರ ನೋವು.

ಪರಿಹಾರಕ್ಕಾಗಿ ಈಗ ಕೈಮಗ್ಗ ನೇಕಾರರ ಅರ್ಜಿ ಪಡೆಯಲಾಗುತ್ತಿದೆ. ನಂತರ ಜಿಲ್ಲೆಯಲ್ಲಿರುವ ಒಟ್ಟು 25270 ವಿದ್ಯುತ್‌ ಮಗ್ಗಗಳ ನೇಕಾರರ ಸಮೀಕ್ಷೆ ಕೆಲಸ ಆರಂಭವಾಗಲಿದೆ. ಪರಿಹಾರ ಪಡೆಯಲು ಆನ್‌ಲೈನ್‌ ಮೂಲಕವೇ ಅರ್ಜಿ ಹಾಕಬೇಕು. ನೇಕಾರರಿಗೆ ನೆರವಾಗಲು ಜಿಲ್ಲೆಯ ವಿವಿಧ ಕಡೆಗಳಲ್ಲಿ 40 ಆನ್‌ಲೈನ್‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ. -ಕೀರ್ತೆಪ್ಪ ಗೋಟೂರ, ಜವಳಿ ಇಲಾಖೆ ಉಪನಿರ್ದೇಶಕ

ಸರ್ಕಾರ ನೀಡುವ 2000 ರೂ. ಪರಿಹಾರ ಯಾವುದಕ್ಕೂ ಸಾಲದು. ಇದೂ ಸಹ ಸರಳವಾಗಿ ಬರುವದಿಲ್ಲ. ಅದರ ಬದಲು ನೇಕಾರರಲ್ಲಿರುವ ಸೀರೆಗಳನ್ನು ಖರೀದಿ ಮಾಡಬೇಕು. ಇದರಿಂದ ಮಗ್ಗಗಳು ಮತ್ತೆ ಆರಂಭವಾಗುತ್ತವೆ. ನೇಕಾರರ ಜೀವನ ನಡೆಯುತ್ತದೆ. -ಪ್ರಭಾಕರ ಬಲಕುಂದಿ, ನೇಕಾರ ಮುಖಂಡ, ರಾಮದುರ್ಗ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾರಾಟವಾಗದೆ ಉಳಿದಿರುವ 50 ಲಕ್ಷಕ್ಕೂ ಅಧಿಕ ಸೀರೆಗಳನ್ನು ಸರ್ಕಾರ ಜವಳಿ ಇಲಾಖೆ ಮೂಲಕ ಖರೀದಿಸಬೇಕು. ಇಲ್ಲವೇ ಸೀರೆಗಳ ದಾಸ್ತಾನಿನ ಮೇಲೆ ಬಡ್ಡಿ ರಹಿತ ಸಾಲವನ್ನಾದರೂ ಕೊಡಬೇಕು. ಇಂತಹ ಕ್ರಮಗಳು ಮಾತ್ರ ನೇಕಾರರನ್ನು ಬದುಕಿಸಬಲ್ಲವೇ ಹೊರತು ತಾತ್ಕಾಲಿಕವಾದ ಪರಿಹಾರ ನೆರವಿಗೆ ಬರಲಾರದು. -ಅಶೋಕ ಚಂದರಗಿ, ಸಮಾಜ ಸೇವಕ

 

-ಕೇಶವ ಆದಿ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.