ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಕೆ.ಕೆ. ಕೊಪ್ಪದಲ್ಲಿ ಮಹಿಳೆಯರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ; ಗ್ರಾಮಸ್ಥರ ಅಹವಾಲು ಆಲಿಸಿದ ಪಿಡಿಒ ಶ್ರೀದೇವಿ ಹಿರೇಮಠ
Team Udayavani, Jun 12, 2022, 4:10 PM IST
ಹಿರೇಬಾಗೇವಾಡಿ: ಸಮೀಪದ ಗ್ರಾಮದ ಕೆ.ಕೆ. ಕೊಪ್ಪದಲ್ಲಿ ಮಹಿಳೆಯರ ನೇತೃತ್ವದಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
8-10 ದಿನಕ್ಕೊಮ್ಮೆ ಮಾತ್ರ ನಮ್ಮ ಭಾಗದಲ್ಲಿ ನೀರು ಬರುತ್ತಿದ್ದು, ನೀರಿನ ಆಭಾವದಿಂದ ಸಮಸ್ಯೆ ಆಗುತ್ತಿದೆ. ಆದರೆ ಈ ಬಗ್ಗೆ ಗ್ರಾಪಂ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ವಾರ್ಡ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಸಮಸ್ಯೆಯೇ ಪರಿಹಾರಕ್ಕೆ ಆಗ್ರಹಿಸಿದರು.
ಗ್ರಾಮದಲ್ಲಿ ನಿಧಾನವಾಗಿ ಶಂಕಿತ ಡೆಂಘೀ ರೋಗ ಹರಡುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚರ ವಹಿಸಿ ಜನರಲ್ಲಿ ಜಾಗೃತಿ ಮಾಡಿಸುತ್ತಿದೆ. ನೀರು ಬಹುದಿನಗಳವರಗೆ ಶೇಖರಣಿ ಮಾಡಿ ಕುಡಿದರೆ ಅದರಿಂದ ಆರೋಗ್ಯದ ಮೇಲೆ ಆಗುವಂತಹ ದುಷ್ಟರಿಣಾಮಗಳ ಬಗ್ಗೆ ಜನರಿಗೆ ತಿಳಿ ಹೇಳುತ್ತಿದೆ. ಆದರೆ ನೀವು 8-10 ದಿನಗಳವರಗೆ ನೀರು ಬಿಟ್ಟರೆ ಜನ ಹಾಗೂ ಜಾನುವಾರುಗಳ ಗತಿ ಏನು? ನಿಮಗೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲವೆ. ಫಿಲ್ಟರ್ ನೀರು ಇಲ್ಲ, ಕೆಸರು ಮಿಶ್ರಿತ ನೀರು ಕುಡಿದರೆ ಮೆಳೆಗಾಲದ ಆರಂಭದ ಈ ದಿನಮಾನದಲ್ಲಿ ಗ್ರಾಮಸ್ಥರು ಪರಿಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ ಮಾತನಾಡಿ, ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಪಂ ಸದಸ್ಯ ಈರಪ್ಪ ನಾವಲಗಿ, ಹಾಲಪ್ಪ ಡೊಂಗರಗಾವಿ, ಶಿವಪ್ಪ ಕಲಬಾವಿ, ಗಂಗಪ್ಪ ಬೆಂಡಿಗೇರಿ, ಯಮನಪ್ಪ ತಳವಾರ, ಚಂಬಯ್ಯ ಹಿರೇಮಠ, ಮಹಾಂತೇಶ ಕಲಬಾವಿ, ಬಸವರಾಜ ಡೊಂಗರಗಾವಿ, ಸೋಮಪ್ಪ ಕಲಬಾವಿ, ಯಶೋದಾ ಮುದ್ದಿನ, ಸುರೇಖಾ ಕಲಬಾವಿ, ಅನಸೂಯಾ ದನದಮನಿ, ಮಾಲಾ ಡೊಂಗರಗಾವಿ, ಗಂಗವ್ವ ಕಲಬಾವಿ, ಯಲ್ಲವ್ವ ಸಂಬರಗಿ, ನಿರ್ಮಲಾ ಪಗಾದ, ಬಸವ್ವ ಕಲಬಾವಿ ಸೇರಿದಂತೆ ಇನ್ನೂ ಅನೇಕ ಜನರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ