ವಿಷಯಾಧಾರಿತಕ್ಕಿಂತ ಟೀಕೆಗಳಿಗೇ ಹೆಚ್ಚಿನ ಮಣೆ


Team Udayavani, Apr 22, 2019, 1:21 PM IST

bel-1

ಬೆಳಗಾವಿ: ಲೋಕಸಭೆಗೆ ಅದರದೇ ಆದ ಘನತೆ ಗೌರವ ಇದೆ. ಇದಕ್ಕೆ ಗೌರವದ ಆವರಣ ಇರಬೇಕಿತ್ತು. ಆದರೆ ಈ ಆವರಣವೇ ಕುಸಿದಿದೆ. ಪ್ರಮುಖ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಬಳಸಿದ ಶಬ್ದ, ಮಾಡಿದ ಟೀಕೆಗಳು ಸಾಮಾನ್ಯ ಜನರಿಗೆ ಜಿಗುಪ್ಸೆ ಬರುವಂತೆ ಮಾಡಿವೆ.

ಇದು ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯದ ಬಗ್ಗೆ ಗಡಿನಾಡು ಬೆಳಗಾವಿ ಜಿಲ್ಲೆಯ ಚಿಂತಕರು, ಸಾಹಿತಿಗಳು, ಲೇಖಕರು, ವಿರ್ಮಶಕರು ವ್ಯಕ್ತಪಡಿಸಿದ ಅಭಿಪ್ರಾಯ. ಲೋಕಸಭೆ ಚುನಾವಣೆಯ ಪ್ರಚಾರ ವೈಖರಿ ಹೇಗಿತ್ತು ಎಂದು ಪ್ರಶ್ನೆ ಮಾಡಿದಾಗ ಬೇಸರದ ಅಭಿಪ್ರಾಯಗಳೇ ವ್ಯಕ್ತವಾದವು.

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗಮನ ಸೆಳೆದಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಭರಾಟೆ ಮುಗಿದಿದೆ. ಮತದಾನಕ್ಕೆ ವೇದಿಕೆ ಸಹ ಸಜ್ಜಾಗಿದೆ. ಮತದಾರರು ನಿರೀಕ್ಷೆ ಮಾಡಿದಂತೆ ವಿಷಯಾಧಾರಿತ ಪ್ರಚಾರ ಎರಡೂ ಕ್ಷೇತ್ರಗಳಲ್ಲಿ ಕಾಣಲಿಲ್ಲ. ವಿಷಯಕ್ಕಿಂತ ವೈಯಕ್ತಿಕ ಟೀಕೆಗಳೇ ಹೆಚ್ಚು ಪ್ರಾಮುಖ್ಯತೆ ಪಡೆದವು. ಅಭ್ಯರ್ಥಿಗಳು ಹಾಗೂ ನಾಯಕರು ಪರಸ್ಪರ ಟೀಕೆ ಮಾಡುವಾಗ ಮಹಿಳೆ, ಜಾತಿ, ಧರ್ಮ, ಸಂಸ್ಕೃತಿ ಯಾವುದನ್ನೂ ನೋಡಲಿಲ್ಲ ಎಂಬ ಅಭಿಪ್ರಾಯ ಮೂಡಿಬಂದವು.

ಹಿಂದಿನ ಕಾಲದ ಚುನಾವಣೆಗೂ ಈಗಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಈಗ ಮತ್ತೂಮ್ಮೆ ಗೊತ್ತಾಯಿತು. ನೆಹರು ಕಾಲದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಲೋಹಿಯಾ ಅವರು ಸೋತಾಗ ಅಚ್ಚರಿಗೊಂಡಿದ್ದ ಜವಾಹರ ಲಾಲ ನೆಹರು ಅವರು ಸ್ವತಃ ಲೋಕಸಭೆಯಲ್ಲಿ ಲೋಹಿಯಾ ಅವರು ಇರಬೇಕಿತ್ತು. ನಾನು ಅವರ ಮಾತುಗಳನ್ನು ಕೇಳಲು ಬಹಳ ಉತ್ಸುಕನಾಗಿದ್ದೆ. ಆದರೆ ಜನರು ಅವರನ್ನು ಹೇಗೆ ಸೋಲಿಸಿದರು ಎಂದು ಅಚ್ಚರಿಯಿಂದ ಕೇಳಿದ್ದರು. ಆದರೆ ಈಗ ಎಲ್ಲವೂ ತದ್ವಿರುದ್ಧ. ಈ ಬಾರಿಯಂತೂ ಜನರು ಮುಜುಗುರಪಡುವಷ್ಟು ವೈಯಕ್ತಿಕ ಟೀಕೆಗಳು ಕೇಳಿಬಂದವು. ಮೌಲ್ಯಗಳು ಮೂಲೆಗುಂಪಾಗಿದ್ದವು ಎಂದು ಹಿರಿಯ ಸಾಹಿತಿ ಡಾ| ಸರಜೂ ಕಾಟ್ಕರ್‌ ಹೇಳಿದರು.

ಲೋಕಸಭೆಗೆ ನಾಯಕರಾದವರು ಘನತೆಯ ಗೋಡೆ ಕಟ್ಟಬೇಕು. ಗೌರವದ ಆವರಣ ನಿರ್ಮಾಣ ಮಾಡಬೇಕು. ಆದರೆ ಈಗ ಎರಡೂ ಕುಸಿದಿದೆ. ಪೈಪೋಟಿಯ ಮೇಲೆ ಜಾತಿ ಹಾಗೂ ಧರ್ಮದ ನಿಂದನೆ ಮಾಡಿದ್ದಾರೆ. ಇದರಲ್ಲಿ ಹಿರಿ-ಕಿರಿ ಎಂಬ ಬೇಧ-ಭಾವ ಕಂಡಿಲ್ಲ. ವಿಷಯಾಧಾರಿತ ಪ್ರಚಾರಕ್ಕೆ ಇಲ್ಲಿ ಅವಕಾಶವೇ ಇರಲಿಲ್ಲ ಎಂದು ಅವರು ನೋವಿನಿಂದ ಹೇಳಿದರು.

ಈಗಷ್ಟೆ ಮುಗಿದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ವಿಷಯಾಧಾರಕ್ಕಿಂತ ಟೀಕೆ ಗಳಿಗೆ, ವೈಯಕ್ತಿಕ ನಿಂದನೆ, ಸಿದ್ಧಾಂತಗಳ ನಿಂದನೆ, ವಂಶದ ಹಿಂದಿನ ವಿಷಯಗಳನ್ನು ಕಿಚಾಯಿಸುವುದಕ್ಕೆ ಸಿಂಹಪಾಲು ಸಿಕ್ಕಿದೆ. ಇದು ಬಹಳ ನೋವಿನ ಸಂಗತಿ. ಆಚಾರವಿಲ್ಲದ ನಾಲಗೆ ಎಂಬ ದಾಸರ ಪದ ಮತ್ತೆ ಮತ್ತೆ ನೆನಪಾಯಿತು. ಎರಡೂ ಪಕ್ಷಗಳ ನಾಯಕರು ಪರಸ್ಪರ ಜನ್ಮಜಾಲಾಡಿ ಮತದಾರರ ಮನಸ್ಸು ಕಲುಷಿತವಾಗುವಂತೆ ಮಾಡಿದರು ಎಂದು ಶಿಕ್ಷಣ ತಜ್ಞ ಡಾ| ಬಸವರಾಜ ಜಗಜಂಪಿ ಬಹಳ ಬೇಸರದಿಂದ ಹೇಳಿದರು. ಪ್ರಚಾರ ಕಾರ್ಯ ವಿಷಯಾಧಾರಿತವಾಗಬೇಕಿತ್ತು. ನಾವು ಏನು ಮಾಡಿದ್ದೇವೆ. ಮುಂದೆ ಏನು ಮಾಡುತ್ತೇವೆ ಎಂಬುದರ ಬಗ್ಗೆ ನಾಯಕರು ಪ್ರಸ್ತಾಪ ಮಾಡಬೇಕಾಗಿತ್ತು. ಕೆಲಸದ ಸಾಧನೆಯನ್ನು ಸೌಮ್ಯವಾಗಿ ಹೇಳಬೇಕಿತ್ತು. ಕೆಲವರ ಪ್ರಬುದ್ಧತೆ ಇತರರಿಗೆ ಮಾದರಿಯಾಗಬೇಕಾಗಿತ್ತು. ಆದರೆ ದುರ್ದೈವ. ಈ ಬಾರಿಯ ಪ್ರಚಾರ ಕೀಳುಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಯಿತು ಎಂಬುದು ಪ್ರಚಾರವನ್ನು ಬಹಳ ಸೂಕ್ಷ,ವಾಗಿ ಅವಲೋಕಿಸಿದ ಚಿಂತಕರ ಅಭಿಪ್ರಾಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಏನು ಅನುಕೂಲ ಮಾಡುತ್ತೇವೆ ಎಂಬುದನ್ನು ಯಾವ ಅಭ್ಯರ್ಥಿಯೂ ಹೇಳಲಿಲ್ಲ. ಬದಲಾಗಿ ಕೆಳಮಟ್ಟದ ವೈಯಕ್ತಿಕ ಟೀಕೆಗಳೇ ಹೆಚ್ಚಾದವು. ಈ ರೀತಿಯಾದರೆ ಮತದಾನದ ಪ್ರಮಾಣ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ದುಡ್ಡು ಪಡೆದವರು ಅನಿವಾರ್ಯವಾಗಿ ಮತ ಹಾಕಲು ಹೋಗುತ್ತಾರೆ. ಉಳಿದವರು ಆಸಕ್ತಿಯಿಂದ ಹೋಗಲು ಮನಸ್ಸು ಬಿಡುವದಿಲ್ಲ. ಪ್ರಜ್ಞಾವಂತರು ಹೇಗೂ ನೋಟಾ ಕಾಲಂ ಇದೆ ಎಂಬ ಕಾರಣಕ್ಕೆ ಮತದಾನಕ್ಕೆ ಹೋಗಬೇಕಾಗಿದೆ ಎಂಬುದು ಹಿರಿಯ ಸಾಹಿತಿ ಜ್ಯೋತಿ ಹೊಸೂರ ವಿಷಾದದ ನುಡಿ.

ಲೋಕಸಭೆ ಚುನಾವಣೆಗೆ ಅದರದೇ ಆದ ಘನತೆ ಇದೆ. ಆದರೆ ಈ ಬಾರಿಯ ಚುನಾವಣೆ ಪ್ರಚಾರ ಸ್ಥಳೀಯ ಮಟ್ಟದ ಚುನಾವಣೆಗಿಂತ ಕೆಳಮಟ್ಟಕ್ಕೆ ಇಳಿದಿತ್ತು. ಜ್ವಲಂತ ಸಮಸ್ಯೆಗಳನ್ನು ಬಿಟ್ಟು ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಮಹತ್ವ ಸಿಕ್ಕಿತು. ಸಾಮಾಜಿಕ ಜಾಲತಾಣಗಳ ದುರುಪಯೋಗವಾಯಿತು. ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲೇ ಇಲ್ಲ. ವಾಸ್ತವಿಕವಾಗಿ ಜನರಿಗೆ ಏನು ಸಿಗಬೇಕಿತ್ತೋ ಅದು ಚರ್ಚೆಗೆ ಬರಲೇ ಇಲ್ಲ. ಇದು ನಮ್ಮ ದುರ್ದೈವ ಎಂದು ಹಿರಿಯ ಇತಿಹಾಸ ಸಂಶೋಧಕ ಯ.ರು. ಪಾಟೀಲ ಹೇಳಿದರು.

ಚುನಾವಣೆ ಎಂದರೆ ಸಹಜವಾಗಿಯೇ ಜನರಲ್ಲಿ ನಮಗೆ ಯಾವುದಾದರೂ ಹೊಸ ಯೋಜನೆಗಳ ಬಗ್ಗೆ ಭರವಸೆ ಕೇಳುತ್ತದೆ. ನಮ್ಮ ಅಭ್ಯರ್ಥಿಗಳು ಆಸೆ ಹುಟ್ಟಿಸುವ ಭರವಸೆ ನೀಡುತ್ತ ಬರುತ್ತಾರೆ. ಮುಂದೆ ಅವುಗಳು ಕಾರ್ಯರೂಪಕ್ಕೆ ಬರುವುದು ಬೇರೆ ಮಾತು. ಆದರೆ ಈ ಚುನಾವಣೆ ಪ್ರಚಾರದಲ್ಲಿ ಅಂತಹ ಯಾವುದೂ ಕೇಳಲಿಲ್ಲ. ಬದಲಾಗಿ ಎಲ್ಲರೂ ವೈಯಕ್ತಿಕ ಟೀಕೆಗಳನ್ನು ಮಾಡುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. ಇದು ಬಹಳ ಬೇಸರದ ಸಂಗತಿ ಎಂಬುದು ಹಿರಿಯ ಲೇಖಕಿ ಜ್ಯೋತಿ ಬದಾಮಿ ಅನಿಸಿಕೆ.

ಲೋಕಸಭೆ ಚುನಾವಣೆಯ ಪ್ರಚಾರ ವೈಖರಿ ಸಂಪೂರ್ಣ ಹಳಿತಪ್ಪಿದೆ. ಬರುವ ಚುನಾವಣೆಗಳಲ್ಲಿ ಪಕ್ಷಗಳ ಅಧ್ಯಕ್ಷರು ಹಾಗೂ ನಾಯಕರು ಹಾಗೂ ಕಿರಿಯರು ಚುನಾವಣೆ ಪ್ರಚಾರ ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು. ವೈಯಕ್ತಿಕ ನಿಂದನೆ ಹಾಗೂ ಚಾರಿತ್ರಿಕ ವಧೆ ಮಾಡಬಾರದು ಎಂಬುದಕ್ಕೆ ಬದ್ಧರಾಗಿರಬೇಕು. ಇದಕ್ಕೆ ಪ್ರಾಮಾಣಿಕ ಇಚ್ಛಾಶಕ್ತಿ ತೋರಿಸಬೇಕು ಎಂಬುದು ಪ್ರತಿಯೊಬ್ಬರ ಅಭಿಮತ.

ಇದು ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯದ ಬಗ್ಗೆ ಗಡಿನಾಡು ಬೆಳಗಾವಿ ಜಿಲ್ಲೆಯ ಚಿಂತಕರು, ಸಾಹಿತಿಗಳು, ಲೇಖಕರು, ವಿರ್ಮಶಕರು ವ್ಯಕ್ತಪಡಿಸಿದ ಅಭಿಪ್ರಾಯ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.