ಆಸ್ಪತ್ರೆಯಲ್ಲಿ ಸತ್ತ ಮಹಿಳೆ ಮನೆಗೆ ತಂದಾಗ ಜೀವಂತ!
ವಿಚಿತ್ರವಾದರೂ ಇದು ಸತ್ಯ ಘಟನೆ
Team Udayavani, Jan 8, 2020, 11:43 PM IST
ಬೆಳಗಾವಿ: ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ ಎಂದು ತಿಳಿದು ಮನೆಗೆ ತಂದು ಸಂಬಂಧಿಕರಿಗೆಲ್ಲ ಹೇಳಿ ಅಂತ್ಯಕ್ರಿಯೆಯ ತಯಾರಿ ನಡೆಸುತ್ತಿರುವಾಗಲೇ ಮಹಿಳೆ ಜೀವಂತವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ತಾಲೂಕಿನ ಮುಚ್ಚಂಡಿ ಗ್ರಾಮದ ಮಾಲು ಯಲ್ಲಪ್ಪ ಚೌಗಲೆ(55) ಎಂಬ ಮಹಿಳೆ ಮತ್ತೆ ಜೀವಂತ ಆಗಿದ್ದು, ಸದ್ಯ ಮಹಿಳೆ ಊಟ ಮಾಡಿ ಆರೋಗ್ಯವಾಗಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ಮಹಿಳೆಯ ರಸ್ತೆ ಅಪಘಾತವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆಗಾಗ ತಲೆ ನೋವು ಬರುತ್ತಿತ್ತು. ತಲೆಗೆ ಜ್ವರ ಬಂದು ಅಸ್ವಸ್ಥಳಾಗುತ್ತಿದ್ದಳು. ಕಳೆದ ಒಂದು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಮಂಗಳವಾರ ರಾತ್ರಿ ವಿಪರೀತ ಜ್ವರ ಬಂದಾಗ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಕೃತಕ ಉಸಿರಾಟದಲ್ಲಿ ಇಡಲಾಗಿತ್ತು. ಆಕ್ಸಿಜನ್ ತೆಗೆದರೆ ಮಹಿಳೆ ಬದುಕುಳಿಯುವುದಿಲ್ಲ ಎಂಬ ವೈದ್ಯರ ಸಲಹೆಯಂತೆ ಸ್ವಲ್ಪ ಹೊತ್ತಿನ ಬಳಿಕ ಮಹಿಳೆಯ ಹೃದಯ ಬಡಿತ ನಿಂತು ಹೋಗಿದೆ. ಆಗ ವೈದ್ಯರು ತಪಾಸಣೆ ನಡೆಸಿದಾಗ ನೋ ಗ್ಯಾರಂಟಿ ಎಂದು ಹೇಳಿ ವಾಪಸ್ಸು ಕಳುಹಿಸಿ ಕೊಟ್ಟಿದ್ದರು ಎಂದು ಮಾಲು ಅವರ ಪುತ್ರ ತಿಳಿಸಿದ್ದಾರೆ.
ಮಹಿಳೆಯ ಈ ಸುದ್ದಿಯಿಂದ ಆಘಾತಗೊಂಡ ಪತಿ ಹಾಗೂ ಕುಟುಂಬಸ್ಥರು ದಿಕ್ಕು ತೋಚದೇ ಬುಧವಾರ ಮನೆಗೆ ತಂದಿದ್ದಾರೆ. ನಂತರ ಮಹಿಳೆಯ ತವರು ಮನೆ ತಾಲೂಕಿನ ಹಲಗಾ ಗ್ರಾಮಕ್ಕೆ ವಿಷಯ ತಿಳಿಸಿದಾಗ ಅಲ್ಲಿಂದ ಟೆಂಪೋ ತುಂಬಿಕೊಡು ಜನ ಬಂದಿದ್ದಾರೆ. ಸವದತ್ತಿ ಶ್ರೀ ಯಲ್ಲಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮುಚ್ಚಂಡಿ ಗ್ರಾಮಸ್ಥರು ಜಾತ್ರೆಗೆ ಹೋಗಿದ್ದರು. ಇವರ ಕುಟುಂಬಸ್ಥರೂ ವಿಷಯ ತಿಳಿದು ಜಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ಸು ಮರಳಿದ್ದಾರೆ. ಇನ್ನೇನು ಅಂತ್ಯಕ್ರಿಯೆಯ ತಯಾರಿ ನಡೆಸಬೇಕು ಎನ್ನುವಷ್ಟರಲ್ಲಿ ಮಹಿಳೆ ಜೀವಂತವಾಗಿ ಎದ್ದು ಕುಳಿತಿದ್ದಾಳೆ. ಇದನ್ನು ಕಂಡು ಜನ ಮೂಕವಿಸ್ಮಯರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ