ಸಚಿವ ಸಂಪುಟ ವಿಸ್ತರಣೆಗೆ ಸೂತ್ರ ಸಿದ್ಧ


Team Udayavani, Dec 19, 2018, 10:01 AM IST

12.jpg

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದ್ದು ಜಾತಿವಾರು, ಪ್ರಾದೇಶಿಕವಾರು ಅಸಮಾಧಾನ ಸ್ಫೋಟವಾಗದಂತೆ ಎಚ್ಚರವಹಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಂದಾಗಿವೆ. ಸಮ್ಮಿಶ್ರ ಸರ್ಕಾರವಾದ್ದರಿಂದ ಕಾಂಗ್ರೆಸ್‌ ಹಾಗೂ
ಜೆಡಿಎಸ್‌ ಎರಡೂ ಪಕ್ಷಗಳಿಂದ ಸಮುದಾಯವಾರು -ಪ್ರಾದೇಶಿಕವಾರು ಲೆಕ್ಕಾಚಾರದಲ್ಲಿ ಅವಕಾಶ ಕಲ್ಪಿಸಲು  ತೀರ್ಮಾನಿಸಲಾಗಿದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷರೂ ಆದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಮಾಲೋಚಿಸಿಯೇ ಸೂತ್ರ ರಚಿಸಿದ್ದಾರೆ.

ಮುಖ್ಯಮಂತ್ರಿ ಸೇರಿ 34 ಸದಸ್ಯ ಬಲದ ಸಂಪುಟದಲ್ಲಿ ಪ್ರಸ್ತುತ ಕಾಂಗ್ರೆಸ್‌ನ 16, ಜೆಡಿಎಸ್‌ನ 10 ಮಂದಿ ಸಂಪುಟದಲ್ಲಿದ್ದಾರೆ. ವಿಸ್ತರಣೆಯಾದರೆ ಕಾಂಗ್ರೆಸ್‌-6, ಜೆಡಿಎಸ್‌-2 ಸ್ಥಾನ ತುಂಬಬೇಕಿದೆ. ಪ್ರಸ್ತುತ ಒಕ್ಕಲಿಗ ಸಮುದಾಯಕ್ಕೆ ಸಂಪುಟದಲ್ಲಿ ಹೆಚ್ಚು (ಕಾಂಗ್ರೆಸ್‌-ಜೆಡಿಎಸ್‌ ಸೇರಿ 9 ಮಂದಿ) ಅವಕಾಶ ಸಿಕ್ಕಿದೆ. ಲಿಂಗಾಯತ-4, ಕುರುಬ ಸಮುದಾಯ-2, ಮುಸ್ಲಿಂ -2 ದಲಿತ (ಬಲಗೈ)- 2 , ಕ್ರಿಶ್ಚಿಯನ್‌-1, ಉಪ್ಪಾರ-1, ಈಡಿಗ-1 ಬ್ರಾಹ್ಮಣ-1, ಬೋವಿ-1, ಎಸ್‌ಟಿ-1 ರೆಡ್ಡಿ-1 ಅವಕಾಶ ಸಿಕ್ಕಿದೆ. ಜೆಡಿಎಸ್‌ನ ಎರಡು ಕೋಟಾದಡಿ ಒಂದು ಮುಸ್ಲಿಂ, ಮತ್ತೂಂದು ಪರಿಶಿಷ್ಟ ಜಾತಿಗೆ ಅವಕಾಶ ಕಲ್ಪಿಸಲು ಜೆಡಿಎಸ್‌ ತೀರ್ಮಾನಿಸಿದೆ. ಆ ಪೈಕಿ ಬಿ.ಎಂ.ಫರೂಕ್‌, ಎಚ್‌.ಕೆ.ಕುಮಾರಸ್ವಾಮಿ, ಅನ್ನದಾನಿ , ಶ್ರೀನಿವಾಸಮೂರ್ತಿ ರೇಸ್‌ನಲ್ಲಿದ್ದಾರೆ. ಜತೆಗೆ ಮಾಜಿ ಸಚಿವ ಎನ್‌.ಮಹೇಶ್‌ ಮತ್ತೆ ಬಿಎಸ್‌ಪಿ ಕೋಟಾದಡಿ ಸಚಿವರಾಗಲು ಬಯಸಿದ್ದು ಪಕ್ಷದ ಅಧ್ಯಕ್ಷೆ ಮಾಯಾವತಿ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್‌ನ ಆರು ಸ್ಥಾನಗಳಲ್ಲಿ ರೆಡ್ಡಿ, ಕುರುಬ, ಲಿಂಗಾಯತ, ಮುಸ್ಲಿಂ, ದಲಿತ ಎಡಗೈ, ಎಸ್‌ಟಿ ಸಮುದಾಯಕ್ಕೆ ತಲಾ ಒಂದೊಂದು ಸ್ಥಾನ ನೀಡುವ ಲೆಕ್ಕಾಚಾರ ಹಾಕಲಾಗಿದೆ. ರೆಡ್ಡಿ ಸಮುದಾಯದಲ್ಲಿ ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಲಿಂಗಾಯತ ಸಮುದಾಯಲ್ಲಿ ಎಂ.ಬಿ.ಪಾಟೀಲ್‌, ಬಿ.ಸಿ.ಪಾಟೀಲ್‌, ಸಂಗಮೇಶ್‌, ಅಮರೇಗೌಡ ಬಯ್ನಾಪುರ, ಮುಸ್ಲಿಂ ಸಮುದಾಯದಲ್ಲಿ ರಹೀಂ ಖಾನ್‌, ತನ್ವೀರ್‌ ಸೇs…, ದಲಿತ ಎಡಗೈ ಸಮುದಾಯದಲ್ಲಿ ರೂಪಾ ಶಶಿಧರ್‌, ಆರ್‌.ಬಿ. ತಿಮ್ಮಾಪುರ್‌, ಧರ್ಮಸೇನಾ, ಕುರುಬ ಸಮುದಾಯದಲ್ಲಿ ಸಿ.ಎಸ್‌.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್‌, ಎಸ್‌ಟಿ ಸಮುದಾಯದಲ್ಲಿ ತುಕಾರಾಂ, ನಾಗೇಂದ್ರ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆಗ ಒಟ್ಟಾರೆ ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ-10, ಲಿಂಗಾಯತ-5, ಕುರುಬ-3, ಮುಸ್ಲಿಂ-3, ದಲಿತ
ಬಲಗೈ-3, ಎಡಗೈ-1, ಕ್ರಿಶ್ಚಿಯನ್‌-1, ಉಪ್ಪಾರ-1, ಬ್ರಾಹ್ಮಣ-1, ಈಡಿಗ-1, ಎಸ್‌ಟಿ-2, ಬೋವಿ-1, ರೆಡ್ಡಿ-2 ಆಗಲಿದೆ.

ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್‌ನಲ್ಲಿ ಕೊಡಬೇಕೇ? ಬೇಡವೇ? ಈಗಾಗಲೇ ಸಂಪುಟದಲ್ಲಿ ದಲಿತ ಬಲಗೈ ಪಂಗಡಕ್ಕೆ 2 ಸ್ಥಾನ ನೀಡಲಾಗಿದ್ದು ಮತ್ತೆ ಜೆಡಿಎಸ್‌ನಿಂದಲೂ ಬಲಗೈ ಪಂಗಡಕ್ಕೆ ಕೊಡಬೇಕೇ? ಎಂಬ ಚರ್ಚೆಯೂ ಇದೆ. ಕರಾವಳಿ ಭಾಗಕ್ಕೆ ಸಂಪುಟದಲ್ಲಿ ಯು.ಟಿ.ಖಾದರ್‌, ಜಯಮಾಲಾ ಹೊರತುಪಡಿಸಿ ಬೇರೆ ಅವಕಾಶ ಕಲ್ಪಿಸಲಾಗಿಲ್ಲ ಎಂಬ ಕಾರಣಕ್ಕೆ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನ ಕಲ್ಪಿಸಲಾಯಿತು. ಜೆಡಿಎಸ್‌ನಿಂದ ಆ ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು
ಬಿ.ಎಂ. ಫರೂಕ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಉತ್ತರ ಕರ್ನಾಟಕ, ಕರಾವಳಿ, ಹಳೇ ಮೈಸೂರು ಎಲ್ಲ ಭಾಗಕ್ಕೂ ಒಟ್ಟಾರೆ ಸಂಪುಟದಲ್ಲಿ ಸಮಾನ ಅವಕಾಶ ಕಲ್ಪಿಸಿದಂತಾಗಿದೆ ಎಂಬುದು ಕಾಂಗ್ರೆಸ್‌ನ ವಾದ. 

ಉತ್ತರ ಕರ್ನಾಟಕಕ್ಕೆ 34 ರಲ್ಲಿ 10 
ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ನಿಂದ ಪ್ರಸ್ತುತ ರಮೇಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಶಿವಾನಂದ ಪಾಟೀಲ್‌, ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಜೆಡಿಎಸ್‌ನಿಂದ ಬಂಡೆಪ್ಪ ಖಾಶೆಂಪೂರ್‌, ಎಂ.ಸಿ.ಮನಗೂಳಿ ಹಾಗೂ ವೆಂಕಟರಾವ್‌ ನಾಡಗೌಡ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಂ, ಲಿಂಗಾಯತ , ಕುರುಬ, ಎಸ್‌ಟಿ ಸಮುದಾಯದಿಂದ
ಕನಿಷ್ಠ ಮೂವರು ಸಂಪುಟಕ್ಕೆ ಸೇರಲಿದ್ದಾರೆ. ಆಗ ಒಟ್ಟಾರೆ ಸಂಪುಟದಲ್ಲಿ 10 ಸ್ಥಾನ ಸಿಕ್ಕಂತಾಗುತ್ತದೆ. ಒಂದೊಮ್ಮೆ ಸಂಪುಟ ಪುನಾರಚನೆ ಆದರೂ 10 ಸಂಖ್ಯೆಗೆ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಆಗ ಯಾವುದೇ ರೀತಿಯ ಅಸಮಾಧಾನ ಬಾರದು ಎಂಬ ಲೆಕ್ಕಾಚಾರ ಕಾಂಗ್ರೆಸ್‌-ಜೆಡಿಎಸ್‌ನದು.

ಸಿಎಂಗೆ ಕಾಂಗ್ರೆಸ್‌ ಒತ್ತಡ
ನಿಗಮ ಮಂಡಳಿಗಳಲ್ಲಿ 20 ಕಾಂಗ್ರೆಸ್‌, 10 ಜೆಡಿಎಸ್‌ ಸ್ಥಾನ ತುಂಬಲಿದ್ದು, 10 ಸಂಸದೀಯ ಕಾರ್ಯದರ್ಶಿಗಳಲ್ಲಿ 7 ಕಾಂಗ್ರೆಸ್‌, 3 ಜೆಡಿಎಸ್‌ ತುಂಬಲಿದ್ದು ಅಲ್ಲಿ ಸಂಪುಟ ವಂಚಿತರು ಹಾಗೂ ಸಂಪುಟದಲ್ಲಿ ಕಡಿಮೆ ಅವಕಾಶ ದೊರೆಯುವ ಸಮುದಾಯಗಳಿಗೆ ಹೆಚ್ಚಾಗಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಲು ಲೆಕ್ಕಾಚಾರ ಹಾಕಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ತಮ್ಮ ಪಕ್ಷದವರನ್ನು ನೇಮಿಸಲು ಕಾಂಗ್ರೆಸ್‌ ಒತ್ತಡ ಹಾಕುತ್ತಿದೆ. ಆದರೆ, ಆ ಸ್ಥಾನಕ್ಕೆ ಕುಮಾರಸ್ವಾಮಿಯವರು ಮಧು ಬಂಗಾರಪ್ಪ ಅವರನ್ನು ನೇಮಿಸಿಕೊಳ್ಳುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.