ಬೆಳಗಾವಿ ಅಧಿವೇಶನ ಬಂದಾಗ “ಕುಂದಾ’ಗೆ ಎಲ್ಲಿಲ್ಲದ ಬೇಡಿಕೆ​​​​​​​


Team Udayavani, Dec 1, 2018, 6:00 AM IST

ban01121807medn.jpg

ಬೆಳಗಾವಿ: ಸುವರ್ಣ ವಿಧಾನಸೌಧ ಮತ್ತೂಮ್ಮೆ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗುತ್ತಿದೆ. ಕಲಾಪ ನಡೆಯುವ ಎರಡು ವಾರಗಳ ಕಾಲ ನಗರದಲ್ಲಿ ಸಿಹಿತಿಂಡಿಗಳು, ವಿಶೇಷವಾಗಿ “ಕುಂದಾ’ಗೆ ಎಲ್ಲಿಲ್ಲದ ಬೇಡಿಕೆ.

ಬೆಳಗಾವಿ ಅಧಿವೇಶನದಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಅಲ್ಲಿನ ಜನರಿಗೆ ಎಷ್ಟು ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ, ಕುಂದಾ ತಯಾರಿಸಿ ಮಾರಾಟ ಮಾಡುವವರಿಗೆ ವ್ಯಾಪಾರದ ಬಾಗಿಲನ್ನು ತೆರೆದು ಕೊಟ್ಟಿದೆ. ಅದರಲ್ಲೂ, ಅಧಿವೇಶನದ ಕೊನೆಯ ಮೂರು ದಿನಗಳ ಅವಧಿಯಲ್ಲಿ ನಡೆಯುವ ಭರ್ಜರಿ ವ್ಯಾಪಾರ, ಕುಂದಾ ಮಾರಾಟಗಾರರಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿದೆ.ಅಧಿವೇಶನದಲ್ಲಿ ಭಾಗವಹಿಸುವ ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಇದೇ ಸಂದರ್ಭ ಪ್ರತಿಭಟನೆ ನಡೆಸಲು ಬರುವ ಸಂಘಟನೆಗಳ ಕಾರ್ಯಕರ್ತರು ಕುಂದಾ ಅಂಗಡಿಗಳಿಗೆ ಮುಗಿ ಬೀಳುವುದೇ ಇದಕ್ಕೆ ಸಾಕ್ಷಿ. ಹೀಗಾಗಿ, ಅಧಿವೇಶನದ ಸಮಯದಲ್ಲಿ ಸ್ವೀಟ್‌ ಮಾರ್ಟ್‌ಗಳಲ್ಲಿ ಸಾವಿರದ ಬದಲು ಲಕ್ಷ ರೂ.ಗಳಲ್ಲಿ ವ್ಯಾಪಾರ ನಡೆಯುತ್ತದೆ.

ದಾಖಲೆಯ ವಹಿವಾಟು:
ಬೆಳಗಾವಿಯಲ್ಲಿ ಸುಮಾರು 250 ಸ್ವೀಟ್‌ ಮಾರ್ಟ್‌ಗಳಿವೆ. ಅದರಲ್ಲಿ ರಾಜಸ್ತಾನಿ ಸಮಾಜದವರ 200 ಅಂಗಡಿಗಳಿವೆ. ಈ 250 ಅಂಗಡಿಗಳಲ್ಲಿ ಪ್ರತಿನಿತ್ಯ ಸುಮಾರು 1,000 ಕೆ.ಜಿ.(1 ಟನ್‌) ಕುಂದಾ ತಯಾರಾಗುತ್ತದೆ. ಮಾರಾಟವಾಗದೆ ಉಳಿಯುವ ಪ್ರಮಾಣ ಬಹಳ ಕಡಿಮೆ. ಆದರೆ, ಅಧಿವೇಶನದ ಸಮಯದಲ್ಲಿ ಈ ಎಲ್ಲ ಮಿಠಾಯಿ ಅಂಗಡಿಕಾರರಿಗೆ ಶುಕ್ರದೆಸೆ. ಉಳಿದೆಲ್ಲ ಸಿಹಿ ತಿಂಡಿಗಳಿಗಿಂತ ಕುಂದಾಕ್ಕೆ ಎಂದೂ ಕಾಣದ ಬೇಡಿಕೆ. ಪ್ರತಿದಿನ 1000 ಕೆ.ಜಿ. ಪ್ರಮಾಣದಲ್ಲಿ ತಯಾರಾಗುವ ಕುಂದಾದ ಬೇಡಿಕೆ ಅಧಿವೇಶನದ ಅವಧಿಯಲ್ಲಿ 3,000 ಕೆ.ಜಿ. (3 ಟನ್‌) ತಲುಪಿರುತ್ತದೆ.  ಕೆಲ ಸ್ವೀಟ್‌ ಮಾರ್ಟ್‌ಗಳಲ್ಲಿ ಸುಮಾರು 500 ಕೆಜಿವರೆಗೆ ಕುಂದಾ ತಯಾರಾಗಿ ಮಾರಾಟವಾಗುತ್ತದೆ.

ಅಧಿವೇಶನದ ದಿನಗಳು ಹತ್ತಿರ ಬರುತ್ತಿದ್ದಂತೆ ಸಿಹಿತಿಂಡಿಗಳ ಮಾರಾಟದ ಅಂಗಡಿಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಕುಂದಾ ಸಿಹಿಯನ್ನು ವಿಭಿನ್ನ ಬಗೆಯಲ್ಲಿ ನೀಡಲು ತಯಾರಿ ನಡೆದಿದೆ. ಬಹಳ ದಿನಗಳ ಕಾಲ ಬಾಳಿಕೆಗೆ ಬರುವಂತೆ ಟಿನ್‌ಗಳಲ್ಲಿ ಕುಂದಾ ಪ್ಯಾಕ್‌ ಮಾಡಿ ಇಡಲಾಗುತ್ತದೆ. ಇದರ ಜೊತೆಗೆ, ಆನ್‌ಲೈನ್‌ನಲ್ಲಿ ಸಹ ಬುಕ್‌ ಮಾಡಿ ಕುಂದಾ ಪಡೆಯಬಹುದು ಎಂಬುದನ್ನು ಗ್ರಾಹಕರಿಗೆ ಪರಿಚಯಿಸಲು ವ್ಯಾಪಾರಸ್ಥರು ಯೋಚಿಸಿದ್ದಾರೆ.

ಅಧಿವೇಶನದ ಕೊನೆಯ ಮೂರು ದಿನಗಳ ಅವಧಿಯಲ್ಲಿ ಒಂದು ರೀತಿ ಕುಂದಾ ಹಬ್ಬವೇ ನಡೆದಂತೆ ಕಾಣುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಅಧಿಕಾರಿಗಳು, ರಾಜಕಾರಣಿಗಳು, ಸಿಬ್ಬಂದಿ ಮೊದಲೇ ಹಣ ನೀಡಿ ಕುಂದಾ ಕಾಯ್ದಿರಿಸುತ್ತಾರೆ. ಹೀಗಾಗಿ, ಕಡೆಯ ಮೂರು ದಿನ 3000 ಕೆ.ಜಿ.ಯಿಂದ 6,000 ಕೆ.ಜಿ.ವರೆಗೆ ಕುಂದಾ ತಯಾರಾಗುತ್ತದೆ. ಇದು ದಾಖಲೆಯೇ ಸರಿ ಎನ್ನುತ್ತಾರೆ ಬೆಳಗಾವಿ ಮಿಠಾಯಿಗಾರರ ಸಂಘದ ಕಾರ್ಯದರ್ಶಿ ಬಾಬುಲಾಲ ರಾಜಪುರೋಹಿತ್‌. ಅಧಿವೇಶನದ ಎರಡು ವಾರಗಳ ಅವಧಿಯಲ್ಲಿ ಕಡಿಮೆ ಎಂದರೂ ಒಂದೂವರೆ ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರಲ್ಲಿ ಬಹುತೇಕ ವ್ಯಾಪಾರ ಆಗುವದು ಕಡೆಯ ಮೂರು ದಿನ ಎಂಬುದು ಅವರ ಹೇಳಿಕೆ.

ಪ್ರತಿ ಕೆ.ಜಿ.ಕುಂದಾಕ್ಕೆ 320 ರೂ.ನಿಂದ 400 ರೂ.ವರೆಗೆ ದರ ಇದೆ. ಬೆಲೆ ಹೆಚ್ಚು ಎನಿಸಿದರೂ, ಜನರ ಬೇಡಿಕೆ ಕಡಿಮೆಯಾಗಿಲ್ಲ. ಸಾಮಾನ್ಯ ದಿನಗಳಲ್ಲಿ ಒಂದು ಅಂಗಡಿಯಲ್ಲಿ 100 ಕೆ.ಜಿ.ವರೆಗೆ ಮಾರಾಟವಾಗುವ ಕುಂದಾ ಅಧಿವೇಶನದ ಸಮಯದಲ್ಲಿ 300 ಕೆ.ಜಿ. ದಾಟುತ್ತದೆ.
– ಪವನ್‌ ಓಝಾ, ಕುಂದಾ ವ್ಯಾಪಾರಿ.

ಸಾಮಾನ್ಯ ದಿನಗಳಲ್ಲಿ ನಮಗೆ ಕುಂದಾ ತಯಾರಿಕೆಯ ಪ್ರಮಾಣ ಗೊತ್ತಾಗುತ್ತದೆ. ಆದರೆ, ಅಧಿವೇಶನದ ಸಮಯದಲ್ಲಿ ಭಾರೀ ಬೇಡಿಕೆ ಇರುವುದರಿಂದ ಸಹಜವಾಗಿಯೇ ನಾವು ಉಳಿದ ದಿನಗಳಿಗಿಂತ ಹೆಚ್ಚು ತಯಾರು ಮಾಡುತ್ತೇವೆ. ನಮ್ಮದು ಬೆಳಗಾವಿಯ ಮೊದಲ ಹಾಗೂ ಅತ್ಯಂತ ಹಳೆಯ ಅಂಗಡಿಯಾಗಿರುವುದರಿಂದ ಜನರು ಹೆಸರು ಕೇಳಿಕೊಂಡು ಬರುತ್ತಾರೆ.
– ಕಮಲ್‌ ಕಿಶೋರ, ಗಜಾನನ ಮಿಠಾಯಿವಾಲಾ ಅಂಗಡಿ.

– ಕೇಶವ ಆದಿ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.