ಈ ಕುಟುಂಬಕ್ಕೆ ನೆರೆಯವರದ್ದೇ ನೆರವು

•ಅಂಗವಿಕಲ ಮಗ-ನಿಶ್ಶಕ್ತ ಪತ್ನಿ, ಅತ್ತೆ ಸಾಕುವ ಜವಾಬ್ದಾರಿ ಯಜಮಾನನದು•ಬೇಕು ಸರ್ಕಾರದ ಸಹಾಯ ಹಸ್ತ

Team Udayavani, Jul 31, 2019, 11:43 AM IST

bg-tdy-1

ಪಾಲಭಾವಿ: ಸಪ್ತಪದಿ ತುಳಿದು ಕೈ ಹಿಡಿದ ಹೆಂಡತಿಗೆ ನಡೆಯಲು ಬರುತ್ತಿಲ್ಲ, 21 ವರ್ಷದ ಅಂಗವಿಕಲ ಮಗನ ಆರೈಕೆ, ವಯಸ್ಸಾದ ಅತ್ತೆಯ ಜೋಪಾನ, ಮನೆಯ ಯಜಮಾನನಿಗೆ ದುಡಿಯಲು ಶಕ್ತಿಯಿಲ್ಲದ ಸ್ಥಿತಿ.

ಇದು ರಾಯಬಾಗ ತಾಲೂಕು ಕುಡಚಿ ಮತಕ್ಷೇತ್ರದಲ್ಲಿ ಪೂರ್ವಭಾಗದ ಕಪ್ಪಲಗುದ್ದಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸುಲ್ತಾನಪುರ ಗ್ರಾಮದ ನಿವಾಸಿ ಶಿವಲಿಂಗಪ್ಪ ಖಾನಗೌಡ ಎಂಬುವರ ಕುಟುಂಬದ ದುಸ್ಥಿತಿ.

ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಪತ್ನಿ ನೀಲವ್ವ ಖಾನಗೌಡ ಅವರಿಗೆ ಕಾಲು ನೋವು ಕಾಣಿಸಿಕೊಂಡದ್ದೇ ನೆಪ. ಅಂದಿನಿಂದ ಒಂದು ಹೆಜ್ಜೆ ಮುಂದಿಡಲು ಆಗುತ್ತಿಲ್ಲ. ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಹೆಚ್ಚಿನ ಚಿಕಿತ್ಸೆ ಕೊಡಿಸಿ ಕಾಲುಗಳಲ್ಲಿ ಮತ್ತೆ ಚೈತನ್ಯ ತುಂಬಬೇಕೆಂದರೆ ಕೈಯಲ್ಲಿ ಹಣವಿಲ್ಲದಿರುವುದು ಒಂದೆಡೆಯಾದರೆ, ಕುಟುಂಬದ ಜವಾಬ್ದಾರಿ ಹೊರಬೇಕಾದ 21 ವರ್ಷದ ಮಗ ರಮೇಶ ಖಾನಗೌಡ ಅಂಗವೈಕಲ್ಯ ಇನ್ನೊಂದೆಡೆ. ಇವೆಲ್ಲದರ ಮಧ್ಯೆ ವಯಸ್ಸಾದ ಅತ್ತೆ. ಇವರನ್ನೆಲ್ಲ ಕಟ್ಟಿಕೊಂಡು ದಿನವಿಡೀ ಸಂಸಾರ ಬಂಡಿ ನೂಕುತ್ತ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಸುಲ್ತಾನಪುರದ ಶಿವಲಿಂಗಪ್ಪ.

ಕಬ್ಬಿನ ಸದೆಯಲ್ಲಿ ಗುಡಿಸಲು: ಕಳೆದ 2014ರಲ್ಲಿ ಸುಲ್ತಾನಪುರದಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಶಾಸಕ ಪಿ.ರಾಜೀವ್‌ ಗ್ರಾಮದ ಆಸ್ತಿ ನಂಬರ್‌ 71ರಲ್ಲಿ 23X15 ಚದರ ಅಡಿಯ ನಿವೇಶನವನ್ನು ಈ ಕುಟುಂಬಕ್ಕೆ ನೀಡಿದ್ದಾರೆ. ಆದರೆ ಮನೆ ಮಂಜೂರಾಗಿಲ್ಲ. ಕಟ್ಟಿಗೆ ಕಟ್ಟಿಕೊಂಡು ಕಬ್ಬಿನ ಸದೆಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎನ್ನುತ್ತಾರೆ ಶಿವಲಿಂಗಪ್ಪ.

ಮಗನ ಚಿಕಿತ್ಸೆಗೆ ಒಂದು ಎಕರೆ ಜಮೀನು: ಹಿರಿಯರು ಗಳಿಸಿದ ಒಂದು ಎಕರೆ ಜಮೀನು ಮಗನ ಚಿಕಿತ್ಸೆ ಖರ್ಚಿಗಾಗಿ ಕೈಬಿಟ್ಟಿತು. ಆತನಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು ಹೀಗೆ ಕಂಡ ಕಂಡಲೆಲ್ಲ ಅಲೆದಿದ್ದೇನೆ. ಆದರೆ ಮಗ ಮಾತ್ರ ಇನ್ನೂ ಗುಣವಾಗಲೇ ಇಲ್ಲ. ಇದರಿಂದ ಇದ್ದ ಒಂದು ಎಕರೆ ಜಮೀನು ಕೂಡ ಕಳೆದುಕೊಂಡೆ. ನನಗೂ ವಯಸ್ಸಾಯಿತು, ಕಣ್ಣುಗಳು ಕಾಣುತ್ತಿಲ್ಲ, ಜೊತೆಗೆ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಪತ್ನಿ, ನನ್ನ ಆಶ್ರಯದಲ್ಲಿರುವ ಇಳಿ ವಯಸ್ಸಿನ ಅತ್ತೆ ಎಲ್ಲರನ್ನು ಸಾಕುವುದು ದೊಡ್ಡ ಪರೀಕ್ಷೆಯಾಗಿದೆ ಎಂದು ನೊಂದು ನುಡಿಯುತ್ತಾರೆ ಶಿವಲಿಂಗಪ್ಪ.

ಸಿಗದ ಮಾಸಾಶನ: ಅಂಗವಿಕಲ ಮಗನಿಗಾಗಿ ಅಲ್ಲಲ್ಲಿ ಸಾಲ ಮಾಡಿದ್ದೇನೆ. ಮಗನ ಹೆಸರಿನಲ್ಲಿ ಮಾಸಾಶನ ಮಾಡಿಸಬೇಕೆಂದು ರಾಯಬಾಗ, ಕುಡಚಿ ಸರಕಾರಿ ಅಧಿಕಾರಿಗಳಿಗೆ ನನ್ನ ಪರಿಸ್ಥಿತಿ ತೋಡಿಕೊಂಡಿದ್ದೇನೆ. 21 ವರ್ಷಗಳಿಂದ ಮಗನಿಗೆ ಮಾಸಾಶನವಿಲ್ಲ ಎಂದು ಹೇಳುವ ಶಿವಲಿಂಗಪ್ಪನ ಕತೆ ಕೇಳುತ್ತ ಹೋದರೆ ಎಲ್ಲರ ಕಣ್ಣಂಚು ಒದ್ದೆಯಾಗುತ್ತದೆ.

ಬಸಲಿಂಗಪ್ಪ ಖಾನಗೌಡ ಕುಟುಂಬ ತುಂಬ ಕಷ್ಟದಲ್ಲಿದೆ. ವಯಸ್ಸಾದ ಬಸಲಿಂಗಪ್ಪ, ಪತ್ನಿ ನೀಲವ್ವ, ಅಂಗವಿಕಲ ಮಗ ರಮೇಶ, ವಯಸ್ಸಾದ ಅತ್ತೆ ಚಪ್ಪರದಲ್ಲಿರುವ ವಾಸವಿರುವ ವಿಷಯ ತಿಳಿದು ಬಂದಿದೆ. ನಮ್ಮ ಸಹಾಯಕರಿಂದ ಮಾಹಿತಿ ಪಡೆದು ನಾಲ್ವರಿಗೂ ಮಾಸಾಶನ ಮಂಜೂರು ಮಾಡುತ್ತೇನೆ. •ಅಣ್ಣಾಸಾಹೇಬ ಜೊಲ್ಲೆಚಿಕ್ಕೋಡಿ, ಸಂಸದರು.

ಉಳುಮೆ ಮಾಡಲು ಜಮೀನು ಇಲ್ಲ, ಸ್ವಂತ ಮನೆ ಇಲ್ಲ, ದುಡಿಯಲು ಶಕ್ತಿಯಿಲ್ಲ. ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಪತ್ನಿ, ಪ್ರಪಂಚ ಜ್ಞಾನವಿಲ್ಲದ ಅಂಗವಿಕಲ ಮಗ, ವಯಸ್ಸಾದ ಅತ್ತೆಯನ್ನು ಸಾಕುವುದೇ ನನಗೆ ದೊಡ್ಡ ಸವಾಲು.•ಶಿವಲಿಂಗಪ್ಪ ಖಾನಗೌಡ
ಈ ಜೀವನವೇ ಬೇಸರವಾಗಿದೆ. ನಮ್ಮ ಮನೆಯವರಿಗೆ ದುಡಿಯುವ ಶಕ್ತಿಯಿಲ್ಲ. ನಾವು ಮೂರು ಜನ ಕುಳಿತು ತಿನ್ನುವವರು. ನೆರೆ-ಹೊರೆಯವರು, ಅಕ್ಕಿ, ಹಿಟ್ಟು, ಬೇಳೆ, ದಿನಸಿ ಕೊಡುತ್ತಾರೆ. ಎಷ್ಟು ದಿನ ಹೀಗೆ ಕಾಲ ಕಳೆಯುವುದು ಎನ್ನುವ ಚಿಂತೆ ಕಾಡುತ್ತಿದೆ. •ನೀಲವ್ವ ಖಾನಗೌಡ, ಪತ್ನಿ
ಕುಟುಂಬಕ್ಕೆ ನೆರವಾಗಿ:
ಶಿವಲಿಂಗಪ್ಪ ಸಿದ್ದಗಿರೆಪ್ಪ ಖಾನಗೌಡ

ಖಾತೆ ನಂಬರ್‌: 89045776321

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಂದಿಗುಂದ ಶಾಖೆ

ಐಎಫ್‌ಸಿ ಕೋಡ್‌: ಕೆವಿಜಿಬಿ-0002703,

ವಿಳಾಸ: ಶಿವಲಿಂಗಪ್ಪ ಖಾನಗೌಡ

ಪೋಸ್ಟ್‌-ಸುಲ್ತಾನಪುರ,

ತಾ| ರಾಯಬಾಗ, ಜಿ| ಬೆಳಗಾವಿ

ಮೊ.ನಂ: 9591171065

•ಶಿವಾಜಿ ಮೇತ್ರಿ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.