ಒಡೆದ 1,200 ಜಾತಿಗಳ ಒಗ್ಗಟ್ಟಿಗೆ ಯತ್ನ
Team Udayavani, Jul 14, 2019, 3:56 PM IST
ಅಥಣಿ: ಚರ್ಮ ಕುಶಲ ಕರ್ಮಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಆಗ್ರಹಿಸಿ ರಾಷ್ಟ್ರೀಯ ಚರ್ಮಕಾರ ಸಮಾಜದ ಅಧ್ಯಕ್ಷ ಬಬನರಾವ್ ಗೋಲಪ ಅವರಿಗೆ ಮನವಿ ಸಲ್ಲಿಸಲಾಯಿತು.
ಅಥಣಿ: ದೇಶದಲ್ಲಿ ಚರ್ಮೊದ್ಯೋಗ ಮಾಡುತ್ತಿರುವ ಮತ್ತು ಒಡೆದು ಹೋದ 1,200 ಜಾತಿಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಒಂದು ಬೃಹತ್ ಶಕ್ತಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುಲಾಗುತ್ತಿದೆ ಎಂದು ರಾಷ್ಟ್ರೀಯ ಚರ್ಮಕಾರರ ಸಂಘದ ಅಧ್ಯಕ್ಷ ಬಬನರಾವ್ ಗೋಲಪ ಹೇಳಿದರು.
ಇಲ್ಲಿನ ಹರಳಯ್ಯ ಸಮಾಜದ ಲೀಡ್ಕರ್ ಕಾಲೋನಿಗೆ ಭೇಟಿ ನೀಡಿ ಚರ್ಮಕುಶಲ ಕರ್ಮಿಗಳ ಕುಶಲೋಪರಿ ವಿಚಾರಿಸಿದ ಅವರು, ಅಥಣಿಯಲ್ಲಿ ಅತಿ ಹೆಚ್ಚಿನ ರೀತಿ ಕೊಲ್ಲಾಪುರಿ ಚಪ್ಪಲಿಗಳನ್ನು ಚರ್ಮಕಾರರು ಕೈಯಿಂದ ನಿರ್ಮಿಸುತ್ತಿರುವುದು ನಮಗೆ ಈಚೆಗೆ ಗಮನಕ್ಕೆ ಬಂದಿದೆ. ಇಂತಹ ಕುಶಲ ಕರ್ಮಿಗಳಿಗೆ ಇನ್ನಷ್ಟು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಸೌಕರ್ಯಗಳನ್ನು ನೀಡಬೇಕು. ಅದೇ ರೀತಿ ಇಲ್ಲಿಯ ಚರ್ಮ ಕುಶಲ ಕರ್ಮಿಗಳು ತಯಾರಿಸುವ ಚಪ್ಪಲಿಗಳ ಮೇಲಿನ ಪ್ರತಿಶತ 5 ರಿಂದ 12ರಷ್ಟು ಜಿಎಸ್ಟಿಯನ್ನು ಸಂಪೂರ್ಣ ತೆಗೆದು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಶರಣ ಹರಳಯ್ಯ ದಲಿತ ವೇದಿಕೆ ಅಧ್ಯಕ್ಷ ಅನಿಲ ಸೌಧಾಗರ ಮಾತನಾಡಿ, ಚರ್ಮದ ಕಚ್ಚಾ ವಸ್ತುವಿನ ಬೆಲೆ ದಿನದಿಂದ-ದಿನಕ್ಕೆ ಹೆಚ್ಚುತ್ತಿರುವುದರಿಂದ ಇಲ್ಲಿಯ ಚರ್ಮ ಕಶಲ ಕರ್ಮಿಗಳ ಸ್ಥಿತಿ ಚಿಂತಾ ಜನಕವಾಗಿದೆ. ಇವರು ಕೈಯಿಂದ ಮಾಡಲಾದ ಚಪ್ಪಲಿಗಳ ಮೇಲೆ ಜಿಎಸ್ಟಿ ಹಾಕಿರುವುದರಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ದಲೀಪ ಕಾಂಬಳೆ, ನಾರಾಯಣ ಹೋನಕಾಂಡೆ, ಬಿ.ಎಸ್. ಸಿಂಧೆ, ಶಿವಾನಂದ ಸೌದಾಗರ, ಶಂಕರ ಸಿಂಧೆ, ಅಮರ ಸಾಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
Belgavi; ಪ್ರಯಾಣಿಕರ ಲಗೇಜನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದ ವಿಮಾನ!
Belgavi;ಗೋ ಸಾಗಾಟ ಲಾರಿ ತಡೆದ ಹಿಂದೂ ಕಾರ್ಯಕರ್ತರು: ಬಿಗುವಿನ ವಾತಾವರಣ
Belagavi; ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ದಂಪತಿ ಬಂಧನ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ