ಸಂಜೆಯವರೆಗೆ ಕಾದು ನೋಡೋಣ, ವರಿಷ್ಠರ ಮೇಲೆ ನನಗೆ ವಿಶ್ವಾಸವಿದೆ: ಯಡಿಯೂರಪ್ಪ
Team Udayavani, Jul 25, 2021, 10:33 AM IST
ಬೆಳಗಾವಿ: ಪಕ್ಷದ ವರಿಷ್ಠರ ಮೇಲೆ ನನಗೆ ವಿಶ್ವಾಸ ಇದೆ. ಹೀಗಾಗಿ ನನ್ನ ಪರವಾಗಿ ಸ್ವಾಮೀಜಿಗಳು ಸಭೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೈಕಮಾಂಡ್ ಏನು ಸಂದೇಶ ಕೊಡುತ್ತದೆ ನೋಡೋಣ ಎಂದರು.
ಇದನ್ನೂ ಓದಿ:ಏನೇ ಬಂದರೂ ಯಡಿಯೂರಪ್ಪ ಜನಪರ ಕೆಲಸ ನಿಲ್ಲಿಸಿಲ್ಲ: ಆರ್.ಅಶೋಕ್
ಹೊಸ ಮುಖ್ಯಮಂತ್ರಿ ನಿರ್ಧಾರ ನನ್ನದಲ್ಲ. ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನನಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಮೇಲೆ ವಿಶ್ವಾಸ ಇದೆ. ಆದ್ದರಿಂದ ಸಂಜೆಯವರೆಗೆ ಕಾದು ನೋಡೋಣ. ಆದರೆ ನನ್ನ ಪರವಾಗಿ ಸ್ವಾಮೀಜಿಗಳು ಸಭೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದರು