ಬಳ್ಳಾರಿ ಸಂಸದರ ಪರ ನಿಲ್ಲುತ್ತಿದ್ದ ಸುಷ್ಮಾ

ಸುಷ್ಮಾ ಸ್ವರಾಜ್‌ ಅವರೊಂದಿಗಿನ ಒಡನಾಟ ಮೆಲುಕು ಹಾಕಿದ ಮಾಜಿ ಸಂಸದೆ ಜೆ.ಶಾಂತಾ

Team Udayavani, Aug 8, 2019, 10:54 AM IST

8–Agust-12

ಬಳ್ಳಾರಿ: ವಿದೇಶಾಂಗ ಖಾತೆ ಮಾಜಿ ಸಚಿವೆ ಸುಷ್ಮಾಸ್ವರಾಜ್‌ ಅವರು ಬಳ್ಳಾರಿಯಲ್ಲಿ ವರಮಹಾಲಕ್ಷಿ ್ಮೕ ಪೂಜೆ ಮಾಡುವಾಗ ಮಾಜಿ ಸಂಸದೆ ಜೆ.ಶಾಂತಾ ಅವರಿದ್ದ ಸಂದರ್ಭ.

ಬಳ್ಳಾರಿ: ಸಾಮೂಹಿಕ ವಿವಾಹ, ವರಮಹಾಲಕ್ಷ್ಮೀಪೂಜೆಗೆಂದು ಪ್ರತಿವರ್ಷ ಬಳ್ಳಾರಿಗೆ ಆಗಮಿಸುತ್ತಿದ್ದ ಮಾಜಿ ವಿದೇಶಾಂಗ ಸಚಿವೆ ದಿ.ಸುಷ್ಮಾಸ್ವರಾಜ್‌, ಜಿಲ್ಲೆಯಲ್ಲಿ ಬಳ್ಳಾರಿಯ ಮಗಳೆಂದೇ ಗುರುತಿಸಿಕೊಂಡಿದ್ದರು. ಬಳ್ಳಾರಿಯೊಂದಿಗೆ ಅವಿನಾಭಾವ ಸಂಬಂಧಹೊಂದಿದ್ದ ಅವರು, ಲೋಕಸಭೆಯಲ್ಲೂ ಬಳ್ಳಾರಿ ಸಂಸದರಿಗೆ ಅಷ್ಟೇ ಬೆಂಬಲಕ್ಕೆ ನಿಲ್ಲುತ್ತಿದ್ದರು.

ದಶಕದ ಕಾಲ ಸಾಮೂಹಿಕ ವಿವಾಹ, ವರಮಹಾಲಕ್ಷ್ಮೀ ಪೂಜೆಗೆಂದು ಬಳ್ಳಾರಿಗೆ ಆಗಮಿಸುತ್ತಿದ್ದ ಸುಷ್ಮಾಸ್ವರಾಜ್‌ ಅವರು, ಇಲ್ಲಿನ ರಾಜಕೀಯ ಮಂದಿ, ಜನರಿಗೆ ಚಿರಪರಿಚಿತರಾಗಿದ್ದರು. ಬಳ್ಳಾರಿಯೊಂದಿಗೆ ಅಷ್ಟೊಂದು ನಂಟು ಹೊಂದಿದ್ದ ಸುಷ್ಮಾಸ್ವರಾಜ್‌ ಅವರು, ಲೋಕಸಭೆಯಲ್ಲಿ ಬಳ್ಳಾರಿ ಸಂಸದರ ಬೆಂಬಲಕ್ಕೂ ನಿಲ್ಲುತ್ತಿದ್ದರು. ಮಾಜಿ ಸಂಸದೆ ಶಾಂತಾ ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಅಪಹಾಸ್ಯ ಮಾಡಿದ್ದ ಸಂಸದರ ವಿರುದ್ಧ ಕ್ರಮಕೈಗೊಳ್ಳುವಂತೆ ಅಂದಿನ ಸ್ಪೀಕರ್‌ ಅವರಿಗೆ ಮನವಿ ಮಾಡಿಕೊಳ್ಳುವ ಮೂಲಕ ಅವರನ್ನು ಸ್ಪೀಕರ್‌ ಮೂಲಕ ಲೋಕಸಭೆಯಿಂದ ತಾತ್ಕಾಲಿಕವಾಗಿ ಅಮಾನತಾಗುವಂತೆ ಕ್ರಮಕೈಗೊಂಡಿದ್ದರು.

ಹಿನ್ನೆಲೆ: ಅದು 2011-2012ರ ಮಧ್ಯಾವ. ಅಕ್ರಮ ಗಣಿಗಾರಿಕೆ ಆರೋಪದಿಂದ ಮಾಜಿ ಸಚಿವ ಜನಾರ್ದನರೆಡ್ಡಿಯವರು ಸಿಬಿಐ ಬಂಧನಕ್ಕೊಳಗಾಗಿರುತ್ತಾರೆ. ಅಂತಹ ಸಮಯದಲ್ಲಿ ಅಂದಿನ ಬಳ್ಳಾರಿ ಸಂಸದೆಯಾಗಿದ್ದ ಶಾಸಕ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರು, ಲೋಕಸಭೆ ಅವೇಶನದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದರು. ಮಾತೃಭಾಷೆಯಲ್ಲದ ಹಿಂದಿಯಲ್ಲಿ ಅಷ್ಟಾಗಿ ಸ್ಪಷ್ಟವಾಗಿ ಮಾತನಾಡಲು ಬಾರದ ಜೆ.ಶಾಂತಾ ಅವರು, ಕೆಲವೊದು ವಿಷಯಗಳನ್ನು ಪ್ರಸ್ತಾಪಿಸುವಾಗ ಸ್ವಲ್ಪ ಗಾಬರಿಗೊಂಡರು. ಇದನ್ನೇ ಉತ್ತರ ಭಾರತದ ಕಾಂಗ್ರೆಸ್‌ ಸಂಸದ ಸುರೇಶ್‌ ಎನ್ನುವವರು ಅಪಹಾಸ್ಯ ಮಾಡಿ ಅಸಂವಿಧಾನಿಕ ಶಬ್ದಗಳನ್ನು ಬಳಸಿದ್ದರು. ಸಂಸದರ ಆ ಮಾತುಗಳು ಶಾಂತಾ ಅವರನ್ನು ಬಾಸಿತ್ತು. ಗ್ರಾಮೀಣ ಭಾಗದಿಂದ ಬಂದಂತಹ ನಮಗೆ ಅವರ ಅಸಂವಿಧಾನಿಕ ಮಾತುಗಳನ್ನು ಕೇಳಿ ದುಃಖವಾಯಿತು. ಆಗ ಹತ್ತಿರಕ್ಕೆ ಬಂದ ಸುಷ್ಮಾಸ್ವರಾಜ್‌ ಅವರು, ಗ್ರಾಮೀಣ ಭಾಗದಿಂದ ಬಂದಿರುವ ನಿಮಗೆ ಇದೆಲ್ಲ ತಿಳಿದಿರಲ್ಲ. ಇದೆಲ್ಲ ಸಹಜ. ಏನೂ ಆಗಲ್ಲ. ನಾನಿದ್ದೇನೆ ಎಂದು ಬೆಂಬಲಿಸಿದ್ದರು. ಅವರ ಮಾತುಗಳನ್ನು ಕೇಳಿದಾಕ್ಷಣ ನನಗೆ ಕಣ್ಣೀರು ತಡೆಯಲಾಗಲಿಲ್ಲ ಎಂದು ಮಾಜಿ ಸಂಸದೆ ಜೆ.ಶಾಂತಾ ಸ್ಮರಿಸಿದರು.

ಘಟನೆಯಾದ ಮರುದಿನ ಸುಷ್ಮಾಸ್ವರಾಜ್‌ ಅವರು, ಪುನಃ ನನ್ನನ್ನು ಅಂದಿನ ಸ್ಪೀಕರ್‌ ಆಗಿದ್ದ ಮೀರಾಕುಮಾರ್‌ ಅವರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಹಿಂದಿನ ದಿನ ಲೋಕಸಭೆಯಲ್ಲಿ ನಡೆದಿದ್ದ ಘಟನೆಯ ಬಗ್ಗೆ ಅವರೇ ವಿವರಿಸಿದರು. ಶಾಂತಾಗೆ ಏನು ಗೊತ್ತಿಲ್ಲ ಅಮಾಯಕರು. ಗ್ರಾಮೀಣ ಭಾಗದಿಂದ ಬಂದವರು. ಅವರಿಗೆ ಇಲ್ಲಿ ಯಾರು ಇಲ್ಲ ಎಂದು ಕಾಂಗ್ರೆಸ್‌ ಸಂಸದರು ಈ ರೀತಿ ಅಪಹಾಸ್ಯ ಮಾಡಿ ಅಸಾಂವಿಧಾನಿಕ ಶಬ್ದಗಳನ್ನು ಬಳಿಸಿದ್ದಾರೆ. ಶಾಂತಾರಿಗೆ ನಾನಿದ್ದೇನೆ ಎಂದು ಬೆಂಬಲಕ್ಕೆ ನಿಂತಿದ್ದರು. ಬಳಿಕ ಸ್ಪೀಕರ್‌ ಮೀರಾ ಕುಮಾರ್‌ ಅವರು, ಅವೇಶನದಲ್ಲಿ ಶಾಂತಾ ಅವರು ಮಾತನಾಡುವಾಗ ಸಂಸದರು ಅಪಹಾಸ್ಯ ಮಾಡುವಾಗ ಸ್ಪೀಕರ್‌ ಸ್ಥಾನದಲ್ಲಿ ಇದ್ದವರು ಏನು ಮಾಡುತ್ತಿದ್ದರು ಎಂದು ಆಗ ಸ್ಪೀಕರ್‌ ಸ್ಥಾನದಲ್ಲಿದ್ದ ಕೇರಳದ ಎಂಪಿ ಅವರನ್ನು 15 ದಿನಗಳ ಕಾಲ ಸ್ಪೀಕರ್‌ ಸ್ಥಾನದಲ್ಲಿ ಕೂಡದಂತೆ ಅಮಾನತು ಮಾಡಿದ್ದರು. ನಂತರ ಅಪಹಾಸ್ಯ ಮಾಡಿದ್ದ ಸಂಸದ ಸುರೇಶ್‌ ಅವರ ಮೇಲೂ ಕ್ರಮಕೈಗೊಳ್ಳಲಾಯಿತು ಎಂದು ಲೋಕಸಭೆಯಲ್ಲಿ ಸುಷ್ಮಾಸ್ವರಾಜ್‌ ಅವರು ನೀಡಿದ್ದ ಸಹಕಾರ, ಬೆಂಬಲದ ಬಗ್ಗೆ ಮೆಲುಕು ಹಾಕಿದರು.

ಸುಷ್ಮಾಸ್ವರಾಜ್‌ ಅವರು ಕೇವಲ ಈ ವಿಷಯದಲ್ಲಿ ಮಾತ್ರವಲ್ಲ. ಎಲ್ಲ ವಿಷಯದಲ್ಲೂ ಸಹಕಾರ ನೀಡುತ್ತಿದ್ದರು. ಬಳ್ಳಾರಿ ಲೋಕಸಭೆ ಸದಸ್ಯೆಯಾಗಿ ದೆಹಲಿಗೆ ಹೋದಾಕ್ಷಣ ಅಲ್ಲಿ ನನಗೆ ಯಾರೊಬ್ಬರ ಪರಿಚಯ ಇರಲಿಲ್ಲ. ಎಲ್ಲರೂ ಅಪರಿಚಿತರು. ಆಗ ಸುಷ್ಮಾಸ್ವರಾಜ್‌ ಒಬ್ಬರೇ ನನಗೆ ಪರಿಚಿತರು. ನಾನು ಲೋಕಸಭೆಗೆ ಹೋದಾಗ ಒಬ್ಬ ತಾಯಿಯಾತಿ ನನ್ನನ್ನು ಮುನ್ನಡೆಸುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ನನಗೆ ಅವರೇ ಮಾರ್ಗದರ್ಶಕರಾಗಿದ್ದರು. ಇಂದು ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳು ಆಗುತ್ತಿಲ್ಲ. ಸ್ವಂತ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ ಎಂದು ಬಳ್ಳಾರಿ ಮತ್ತು ದೆಹಲಿಯಲ್ಲಿ ಸುಷ್ಮಾಸ್ವರಾಜ್‌ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ಬಳ್ಳಾರಿಯಿಂದ ಸಂಸದರಾಗಿ ದೆಹಲಿಗೆ ಹೋದಾಗ ನನಗೆ ಸುಷ್ಮಾಸ್ವರಾಜ್‌ ಒಬ್ಬರೇ ಪರಿಚಿತರಾಗಿದ್ದರು. ಪ್ರತಿಯೊಂದು ವಿಷಯದಲ್ಲೂ ನನಗೆ ಅವರು ಮಾರ್ಗದರ್ಶಕರಾಗಿದ್ದರು. ಇಂದು ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಒಬ್ಬ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ.
ಜೆ.ಶಾಂತಾ,
ಮಾಜಿ ಸಂಸದೆ, ಬಳ್ಳಾರಿ.

ಟಾಪ್ ನ್ಯೂಸ್

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.