ಹಿಂದೂ ಧರ್ಮ ನಾಶ ಮಾಡಲು ಎಲ್ಲೆಡೆ ಪ್ರಯತ್ನ
ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತದ ಸಂಯೋಜಕ ಜಗದೀಶ್ ಕಾರಂತ್ ಅಭಿಮತ
Team Udayavani, Dec 16, 2019, 5:03 PM IST
ಬಳ್ಳಾರಿ: ದೇಶದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ನಾಶ ಮಾಡಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತದ ಸಂಯೋಜಕ ಜಗದೀಶ್ ಕಾರಂತ್ ಹೇಳಿದರು.
ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಸಾರೇ ಜಹಾಸೆ ಅಚ್ಛಾ ಹಿಂದೂ ಸಿತಾ ಹಮಾರ ಎಂದು ಹೇಳಿದ್ದು ಹಿಂದು ಕವಿಗಳಲ್ಲ. ಮುಸ್ಲಿಂ ಕವಿಗಳು. ಹಿಂದೂಸ್ತಾನದ ಮೇಲೆ ಮುಸ್ಲಿಂ, ಕ್ರೈಸ್ತ ರಾಜರು, ವಿದೇಶಿಗರು ಆಕ್ರಮಣ ಮಾಡಿದಾಗ ಅವರಿಂದ ಹಿಂದೂ ಧರ್ಮವನ್ನು ಕಾಪಾಡಿದ ಕೊಡುಗೆ ಛತ್ರಪತಿ ಶಿವಾಜಿಗೆ ಸಲ್ಲುತ್ತದೆ. ಈ ಎಲ್ಲರೂ ದೇಶಕ್ಕೆ ಬಂದಿದ್ದು, ಆಡಳಿತ ಮಾಡಲು ಅಲ್ಲ. ದೇಶವನ್ನು ಲೂಟಿ ಮಾಡಲು. ಆದರೆ, ಹಿಂದೂಗಳ ದೌರ್ಬಲ್ಯದಿಂದ ದೇಶವನ್ನು ಆಡಳಿತ ನಡೆಸಿದರು ಹೊರತು, ಅವರ ಪ್ರಭಾವದಿಂದ ಮಾತ್ರ ಅಲ್ಲ ಎಂದವರು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಮೇಲೆ ಬಾಬರಿ ಮಸೀದಿ ಕಟ್ಟಿದರು. ಆದರೂ ಸಹ ಹಿಂದೂ ವಿರೋಧಿ ಗಳು ಶ್ರೀರಾಮನ ಹೆಸರಿನ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ನಡೆಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾರಂತ್ ಅವರು, ಮಹಾತ್ಮಗಾಂಧಿ, ಜವಾಹರ ಲಾಲ್ ನೆಹರು ಭಾರತ ದೇಶವನ್ನು ವಿಭಜನೆ ಮಾಡಿದರು.
ಇಸ್ಲಾಂ ಧರ್ಮವನ್ನು ಒಪ್ಪದ ಪ್ರದೇಶದಲ್ಲಿ ಯುದ್ಧ ಮಾಡುತ್ತೇವೆ ಎಂದು ಹಲವು ಸಂಘಟನೆಗಳು ರಕ್ತಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಎಸ್ಎಸ್ ವಿರುದ್ಧ ಅಪಪ್ರಚಾರ ಮಾಡಿದ ನಾಯಿಗಳು ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಬುದ್ಧಿಬಂದಿಲ್ಲ. ಜಮ್ಮಕಾಶ್ಮೀರದ 370ನೇ ವಿ ಧಿಯನ್ನು ರದ್ದು ಮಾಡಿದರೆ ದೇಶದಲ್ಲಿ ದಂಗೆ ಏಳುತ್ತದೆ ಎಂದರು, ಆದರೆ ದೆಹಲಿಯಲ್ಲಿ ಅಲ್ಲ. ಕಾಶ್ಮೀರದಲ್ಲೂ ಏನೂ ಆಗಲಿಲ್ಲ. ಅಯೋಧ್ಯೆ ರಾಮಮಂದಿರ ಪರ ತೀರ್ಪು ಬಂದರೆ ದಂಗೆ ಏಳುತ್ತದೆ ಎಂದು ಸೆಕ್ಯುಲರ್ ಹೆಸರಿನ ನಾಯಿಗಳು ಬೊಳಗುತ್ತಿದ್ದಾರೆ. ಬಾಂಗ್ಲಾದೇಶದ ಜನರಿಗೆ ದೇಶದಲ್ಲಿ ನಾಗರಿಕತೆ ನೀಡಬೇಕು ಎಂದು ಹೇಳಿ ದೇಶವನ್ನು ಹಾಳು ಮಾಡುತ್ತಿದ್ದಾರೆ.
ನಿರುದ್ಯೋಗಿಗಳು ಕೆಲಸ ಮಾಡುವುದೇ ಬೇಡ. ಸ್ಲಂಗಳಲ್ಲಿ ಬೋಧನೆ ಮಾಡಿ ಮತಾಂತರ ಮಾಡಲು ಹೊರಟಿದ್ದಾರೆ. ಈಶಾನ್ಯ ರಾಷ್ಟ್ರಗಳಲ್ಲಿ ಭಾರತದ ಧ್ವಜ ಹಾರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ತಿಳಿಸಿದರು.
ಮಾತೃಶಕ್ತಿ ರಕ್ಷಣೆ ಪ್ರಮುಖ ಶಿವಾನಂದ ಮಾತನಾಡಿದರು. ಇದಕ್ಕೂ ಮುನ್ನ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಇಲ್ಲಿನ ಕಮ್ಮ ಭವನದಿಂದ ಆರಂಭವಾದ ಶೋಭಾಯಾತ್ರೆಯು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ಮೋತಿವೃತ್ತ, ರಾಮೇಶ್ವರ ಹೊಟೇಲ್, ಕಾಳಮ್ಮ ರಸ್ತೆ, ವಡ್ಡರಬಂಡೆ, ರೂಪನಗುಡಿ ರಸ್ತೆ, ರಾಘವೇಂದ್ರ ಚಿತ್ರಮಂದಿರ, ಸಂಗಮ್ ವೃತ್ತ ಮೂಲಕ ಮುನಿಸಿಪಲ್ ಮೈದಾನ ತಲುಪಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾ ತಂಡಗಳು, ರಾಜ, ಮಹಾರಾಜರ ಪೋಷಾಕು ಧರಿಸಿದ್ದ ಮಕ್ಕಳು ಗಮನಸೆಳೆದರು. ಮೆರವಣಿಗೆಯಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಬಹಿರಂಗ ಸಮಾವೇಶದಲ್ಲಿ ಕೊಟ್ಟೂರು ಸಂಸ್ಥಾನಮಠದ ಡಾ| ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖೀಲ ಭಾರತೀಯ ಸಂಯೋಜಕ ಅಶೋಕ ಪ್ರಭಾಕರ್ ಜೀ, ಪ್ರಧಾನ ಕಾರ್ಯದರ್ಶಿ ಕೆ. ಶ್ರೀರಾಮುಲು, ಪ್ರಾಂತ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಹೇರೂರು, ಮುಖಂಡರಟದ ವೈ.ಎಂ. ಸತೀಶ, ಸ್ವಾಗತ ಸಮಿತಿ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ, ರಾಮಚಂದ್ರ ಜಿ.ಮಟ್ಟಿ ಸೇರಿದಂತೆ ಹಲವಾರು ಕಾರ್ಯಕರ್ತರು, ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್