ಶಿಕ್ಷಣದಷ್ಟೇ ಸಂಸ್ಕೃತಿ-ಕೌಶಲ್ಯವೂ ಅಗತ್ಯ: ಜಗದೀಶ್
ballari news
Team Udayavani, Nov 5, 2021, 12:56 PM IST
ಬಳ್ಳಾರಿ: ಉದ್ಯೋಗ ಪಡೆಯಲು ಸಂಸ್ಕೃತಿಮತ್ತು ಕೌಶಲ್ಯಗಳು ಶಿಕ್ಷಣದಷ್ಟೆ ಅಗತ್ಯಎಂದು ರಂಗನಿರ್ದೇಶಕ, ಅಭಿನಯ ಕಲಾಕೇಂದ್ರದ ಅಧ್ಯಕ್ಷ ಕೆ.ಜಗದೀಶ ಹೇಳಿದರು.ನಗರದ ಎಸ್.ಜಿ.ಟಿ ಕಾಲೇಜಿನಲ್ಲಿಬುಧವಾರ ಆಯೋಜಿಸಿದ್ದ ನಿಯೋ ಫೆಸ್ಟ್ಕಾರ್ಯಕ್ರಮ ಉದ್ಘಾಟಿಸಿ (ನೂತನ ಪಿ.ಯುವಿದ್ಯಾರ್ಥಿಗಳ ಸ್ವಾಗತ) ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಬಹಳ ಪ್ರಭಾವಶಾಲಿಯಾಗಿವೆ. ವಿದ್ಯಾರ್ಥಿಗಳನ್ನುಯಾವುದೇ ಮಾರ್ಗಕ್ಕೆ ತಳ್ಳಿ ಬಿಡುವಂತಹವಾಗಿವೆ. ಸೌಲಭ್ಯಗಳು ಕೂಡ ಹೆಚ್ಚಾಗಿವೆ.ಅದುದರಿಂದ ವಿದ್ಯಾರ್ಥಿಗಳು ವಿವೇಚನಾಶಕ್ತಿ ಬೆಳೆಸಿಕೊಂಡು ತಮ್ಮದೇ ಜೀವನನಿರೂಪಿಸಿಕೊಳ್ಳಬೇಕಾಗಿದೆ. ಕೆಲಸ ಗಿಟ್ಟಿಸಿಕೊಳ್ಳುವಾಗ ಮತ್ತು ಕೆಲಸಕ್ಕೆ ಸೇರಿದಾಗದೇಹದ ಭಾಷೆ ಮತ್ತು ಮಾತಿನ ಸ್ಪಷ್ಟತೆಅಗತ್ಯವಾಗಿರುತ್ತದೆ ಎಂದರು.
ಪಿ.ಯು ಕಾಲೇಜಿನ ಪ್ರಾಚಾರ್ಯಜಿ.ತಿಪ್ಪೇರುದ್ರ ಮಾತನಾಡಿ, ಈ ಕಾಲೇಜಿನಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯರ್ಯಾಂಕುಗಳನ್ನು ಮತ್ತು ಮೆಡಿಕಲ್ ಸೀಟ್ಪಡೆಯುವಲ್ಲಿ ದಾಖಲೆ ಮಾಡಿ ಕಾಲೇಜಿಗೆಹೆಸರು ತಂದಿದ್ದಾರೆ ಎಂದು ತಿಳಿಸಿದರು.
ಪದವಿ ಕಾಲೇಜಿನ ಪ್ರಾಚಾರ್ಯ, ಎಸ್ಜಿಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಜಿ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಜೀವನದಲ್ಲಿ ಪಿ.ಯು.ಸಿ ಅತ್ಯಂತ ಮುಖ್ಯಘಟ್ಟವಾಗಿದೆ.
ಈ ಸಂದರ್ಭದಲ್ಲಿಯೇಮುಖ್ಯವಾದ ಗುರಿಗಳನ್ನು ಇಟ್ಟುಕೊಂಡುಅದರ ಸಾಧನೆಯಲ್ಲಿ ತೊಡಗಬೇಕು.ಟಿ.ವಿ ಮೊಬೈಲ್ಗಳು ಹಾಗೂ ಮುಂತಾದಸಾಮಾಜಿಕ ಜಾಲತಾಣಗಳು ಕೆಟ್ಟದಾರಿಗಳಿಗೆ ಸೆಳೆದು ಕೊಳ್ಳುವ ಅಪಾಯಗಳುಬಹಳ ಇರುವುದರಿಂದ ನೂರಕ್ಕೆ ನೂರುಜಾರದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥಎಸ್.ಎನ್.ರುದ್ರಪ್ಪ ಮಾತನಾಡಿ, ಪುನೀತ್ರಾಜ್ಕುಮಾರ್ ಹೇಗೆ ತಮ್ಮ ಪ್ರತಿಭೆಯನ್ನುಪ್ರಪಂಚ ಆದರಿಸುವಂತೆ ಬೆಳೆಸಿಕೊಂಡರುಹಾಗೆಯೇ ತಮ್ಮಲ್ಲಿನ ಸುಪ್ತ ಪ್ರತಿಭೆಗಳನ್ನುಗುರುತಿಸಿ ಹೊರ ತಂದುಕೊಳ್ಳಬೇಕುಎಂದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳುಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ