ಮನಸೆಳೆವ ರಂಗಭಾರತಿ ಉದ್ಯಾನವನ
Team Udayavani, Jan 15, 2021, 3:20 PM IST
ಹೂವಿನಹಡಗಲಿ: “ಮನೆಗೊಂದು ಮರ, ಊರಿಗೊಂದು ವನ’ ಎನ್ನುವ ನಾಣ್ಣುಡಿಯಂತೆ ಪಟ್ಟಣಕ್ಕೊಂದು ಉದ್ಯಾನ ವನ ಇದ್ದರೆ ಜನರ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ಹಡಗಲಿಯ ರಂಗಭಾರತಿ ಉದ್ಯಾನವನ ದಣಿದ ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತಿದೆ.
ಹಡಗಲಿ ಪುರಸಭೆಯಿಂದ ಈಚೆಗೆ ಹರಪನಹಳ್ಳಿ ರಸ್ತೆಯಲ್ಲಿರುವ ರಂಗಭಾರತಿ ಉದ್ಯಾನವನವನ್ನು ಅಭಿವೃದ್ಧಿ ಪಡಿಸಿದ್ದು, ಇದಕ್ಕಾಗಿ ಸರ್ಕಾರದ ಸುಮಾರು 47 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಈ ಮುಂಚಿತವಾಗಿ ರಂಗಭಾರತಿ ಉದ್ಯಾನವನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದವರು ಪಾರ್ಕ್ ನಿರ್ವಹಣೆ ಮಾಡುತ್ತಿದ್ದು, 2008ರಲ್ಲಿ ಇದನ್ನು ಪುರಸಭೆಗೆ ಹಸ್ತಾಂತರಿಸಿದರು. ಮೊದಲು ಅಂದಾಜು 2 ಲಕ್ಷ ರೂ.ಗಳ ವೆಚ್ಚದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿದರೂ ಜನತೆಗೆ ಸಮರ್ಪಕವಾಗಿ ಬಳಕೆ ಆಗಿರಲಿಲ್ಲ. ಈಚೆಗೆ 14ನೇ ಹಣಕಾಸು ಹಾಗೂ ಪುರಸಭೆ ನಿಧಿ ಯಿಂದ ಒಟ್ಟು 47 ಲಕ್ಷ ರೂ.ಗಳಲ್ಲಿ ಪಾರ್ಕ್ ಅನ್ನು ಪುನಶ್ಚೇತನ ಗೊಳಿಸಿರುವುದರಿಂದ ಸಾರ್ವಜನಿಕರಿಗೆ ಇದರ ಸದುಪಯೋಗವಾಗಿದೆ.
ವಿಸ್ತ್ರೀರ್ಣ: ಹರಪನಹಳ್ಳಿ ರಸ್ತೆಯ ಜಿಪಂ ಉಪ ವಿಭಾಗದ ಕಚೇರಿ ಮುಂದಿನ 100/25 ವಿಸ್ತ್ರರ್ಣ ಜಗದಲ್ಲಿ ನಿರ್ಮಾಣಗೊಂಡಿರುವ ಈ ರಂಗಭಾರತಿ ಪಾರ್ಕ್ ಮಕ್ಕಳಿಗೆ ಆಟಿಕೆ ಸಾಮಾನುಗಳು,
ಮನರಂಜನೆಗಾಗಿ ಕಾರಂಜಿ, ಯುವಕರಿಗೆ ವಾಕಿಂಗ್ ಟ್ರ್ಯಾಕ್, ಯೋಗ ಕಟ್ಟೆ, ದೈಹಿಕ ಸಾಮರ್ಥ ಹೆಚ್ಚಿಸುವ ಸಲಕರಣೆಗಳು ಹೀಗೆ ಪಾರ್ಕ್ನಲ್ಲಿ ಸಾರ್ವಜನಿಕರ ಉತ್ತಮ ಆರೋಗ್ಯ ಗಮನದಲ್ಲಿಟ್ಟುಕೊಂಡು ಅನುಕೂಲತೆ ಕಲ್ಪಿಸಲಾಗಿದೆ.
ಇದನ್ನೂ ಓದಿ:ಯತ್ನಾಳ ಬಿಜೆಪಿ ಸೇರ್ಪಡೆ ಬೇಡ ಎಂದರೂ ಯಡಿಯೂರಪ್ಪ ಕೇಳಲಿಲ್ಲ: ಜಿಗಜಿಣಗಿ
ಸಮರ್ಪಕ ನಿರ್ವಹಣೆ: ಸಾರ್ವಜನಿಕ ಹಣದಲ್ಲಿ ನಿರ್ಮಾಣಗೊಂಡಿರುವ ಈ ರಂಗಭಾರತಿ ಪಾರ್ಕ್ಅನ್ನು ಉತ್ತಮ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಮೇಲಿದ್ದು, ಇದಕ್ಕಾಗಿ ಸಮಯ ನಿಗದಿ ಹಾಗೂ ಪಾರ್ಕಿನಲ್ಲಿರುವ ಯಾವುದೇ ಸಲಕರಣೆ ಹಾಳಾಗದಂತೆಹೆಚ್ಚಿನ ಮುತುವರ್ಜಿ ವಹಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಪಟ್ಟಣಕ್ಕೆ ಹತ್ತಿರವಿರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಮೊದಲಗಟ್ಟೆ ರಸ್ತೆಯಲ್ಲಿರುವ ಪಾರ್ಕಿನಂತೆ, ಸೋಗಿ ಹಾಗೂ ತಿಪ್ಪಾಪುರ ರಸ್ತೆಯಲ್ಲಿ ಪಾರ್ಕ್ ನಿರ್ಮಾಣ ಮಾಡಿದಲ್ಲಿ ಆ ಭಾಗದ ಜನತೆಗೂ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ.
ವಿಶ್ವನಾಥ ಹಳ್ಳಿಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು