ಬಾಕಿಯಿರುವ ಕೋವಿಡ್ ಭತ್ಯೆ ನೀಡಿ
Team Udayavani, Jun 28, 2022, 4:57 PM IST
ಬಳ್ಳಾರಿ: ವಿಮ್ಸ್ನ ಗುತ್ತಿಗೆ ನೌಕರರಿಗೆ ಬಾಕಿಯಿರುವಕೋವಿಡ್ ಭತ್ಯೆ ನೀಡುವಂತೆ ಆಗ್ರಹಿಸಿ ನಗರದ ಡಿಸಿಕಚೇರಿ ಆವರಣದಲ್ಲಿ ಎಐಯುಟಿಯುಸಿ ಸಂಯೋಜಿತವಿಮ್ಸ್ ಗುತ್ತಿಗೆ ನೌಕರರ ಸಂಘದಿಂದ ಸೋಮವಾರಪ್ರತಿಭಟನೆ ನಡೆಸಲಾಯಿತು.
ವಿಮ್ಸ್ನಲ್ಲಿ ಗುತ್ತಿಗೆ ಆಧಾರಿತ ನೌಕರರು,ಮಹಮ್ಮಾರಿ ಕೋವಿಡ್ ಸಂದರ್ಭದಲ್ಲೂ ತಮ್ಮಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ.ಕೋವಿಡ್ ಸಂದರ್ಭದಲ್ಲಿ ದುಡಿದ, ಒಂದು ಭಾಗದಷ್ಟುಗುತ್ತಿಗೆ ನೌಕರರಿಗೆ ಕೋವಿಡ್ ಭತ್ಯೆ ನೀಡಿರುವುದುಸಮಾಧಾನಕರ ಅಂಶವಾಗಿದ್ದರೂ, ಇನ್ನು ಸಾಕಷ್ಟುಗುತ್ತಿಗೆ ನೌಕರರಿಗೆ ಕೋವಿಡ್ ಭತ್ಯೆ ಈವರೆಗೂನೀಡಿಲ್ಲ. ಕಳೆದ 5-6 ತಿಂಗಳುಗಳಿಂದ ಒಂದಲ್ಲಾಒಂದು ಕಾರಣಗಳನ್ನು ಹೇಳುತ್ತಾ, ವಿಮ್ಸ್ ಆಡಳಿತಕೋವಿಡ್ ಭತ್ಯೆ ನೀಡುವುದನ್ನು ಮುಂದೂಡುತ್ತಲೇಇದೆ. ರಾಜ್ಯ ಸರ್ಕಾರ ಭತ್ಯೆಯ ಹಣ ಇನ್ನು ಕಳುಹಿಸಿಲ್ಲ.ಕೋವಿಡ್ ಭತ್ಯೆ ಪಡೆಯಬೇಕಾದವರ ಪಟ್ಟಿಯನ್ನುಸಹ ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬಸಿದ್ಧ ಉತ್ತರ ವಿಮ್ಸ್ ಆಡಳಿತದಿಂದ ಬರುತ್ತಿದೆ ಎಂದುಪ್ರತಿಭಟನಾಕಾರರು ದೂರಿದ್ದಾರೆ.
ತಮ್ಮ ಪ್ರಾಣಪಣಕ್ಕಿಟ್ಟು ದುಡಿದ ಗುತ್ತಿಗೆ ನೌಕರರನ್ನು ವಿಮ್ಸ್ಆಡಳಿತ ಈ ರೀತಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂಖಂಡನೀಯ. ಕೋವಿಡ್ ಭತ್ಯೆ ನೀಡುವ ಬೇಡಿಕೆಯನ್ನುಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಗಳು, ವೈದ್ಯಕೀಯಶಿಕ್ಷಣ ಸಚಿವರು ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿಗಳು ಮಧ್ಯಪ್ರವೇಶ ಮಾಡಬೇಕಾಗಿ ಈಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ಸಮಸ್ಯೆಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕುಟುಂಬಸಮೇತ ವಿಮ್ಸ್ ಆವರಣದಲ್ಲಿ ಪ್ರತಿಭಟನಾ ಧರಣಿನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಬಳಿಕ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಡಿಸಿ ಪವನ್ಕುಮಾರ್ಮಾಲಪಾಟಿ, ಕೋವಿಡ್ ಭತ್ಯೆ ನೀಡುವಂತೆ ಸಚಿವರಿಗೆ,ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರಬರೆಯುವುದಾಗಿ ಹಾಗೂ ವಿಮ್ಸ್ ನಿರ್ದೇಶಕರೊಂದಿಗೆಮಾತನಾಡುವುದಾಗಿ ಭರವಸೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಕಾರ್ಯದರ್ಶಿ ಎ.ದೇವದಾಸ್, ಮುಖಂಡರಾದ ಡಾ|ಎನ್. ಪ್ರಮೋದ್, ಶಾಂತಾ, ಸುರೇಶ್, ಗುತ್ತಿಗೆ ನೌಕರರಸಂಘದ ಚಿಟ್ಟೆಮ್ಮ, ದುರ್ಗಮ್ಮ, ನಾಗಮ್ಮ, ಅಂಜಲಿ,ಜಯರಾಜ್, ಅಂಜಿನಿ, ನೌಕರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್