ಸೋಲಿನ ಹೊಣೆ ಸಾಮೂಹಿಕವಾಗಿ ವಹಿಸಿಕೊಳ್ಳುತ್ತೇವೆ
Team Udayavani, Nov 3, 2021, 5:02 PM IST
ಬಳ್ಳಾರಿ: ಉಪಚುನಾವಣೆ ನಡೆದ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಮುಖ್ಯಮಂತ್ರಿಗಳೊಬ್ಬರೇ ಕಾರಣರಲ್ಲ.ಸೋಲಿನ ಹೊಣೆಯನ್ನು ಬಿಜೆಪಿಸಾಮೂಹಿಕವಾಗಿ ವಹಿಸಿಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಹಾನಗಲ್, ಸಿಂ ದಗಿ ಎರಡೂಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳುಗೆಲ್ಲಬೇಕಿತ್ತು. ಆದರೆ ಸಿಂದ ಗಿಯಲ್ಲಿ ಗೆದ್ದು,ಹಾನಗಲ್ಲದಲ್ಲಿ ಸೋಲಾಗಿದೆ.
ಬಸವರಾಜಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕಮೊದಲ ಉಪಚುನಾವಣೆಯಾಗಿದ್ದುಮುಖ್ಯಮಂತ್ರಿಗಳು ಸಹ ಕ್ಷೇತ್ರದ ಪ್ರತಿಗ್ರಾಮಕ್ಕೂ ಹೋಗಿ ಪ್ರಚಾರ ಮಾಡಿದ್ದಾರೆ.ಆದರೆ ಸಿಂದ ಗಿ ಕ್ಷೇತ್ರದಲ್ಲಿ ನಿರೀಕ್ಷೆಗೂಮೀರಿ ಫಲಿತಾಂಶ ಬಂದಿದ್ದು, ಹಾನಗಲ್ಲ ಕ್ಷೇತ್ರದಲ್ಲಿ ದೊಡ್ಡ ಹಿನ್ನಡೆಯಾಗಿದೆ.
ಎಲ್ಲಿ ಲೋಪದೋಷವಾಗಿದೆಎಂಬುದನ್ನು ಪರಿಶೀಲಿಸಲಾಗುವುದು. ಏಕೆಹಿನ್ನಡೆಯಾಯಿತು ಎಂಬ ಬಗ್ಗೆಪರಾಮರ್ಶೆ ಮಾಡಲಾಗುವುದುಎಂದರು.ಹಾನಗಲ್, ಸಿಂದ ಗಿಉಪಚುನಾವಣೆಗಳ ಫಲಿತಾಂಶಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂಪಕ್ಷಗಳಿಗೂ ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ನವರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಎಂದಿದ್ದರು. ಸಿಂದ ಗಿಯಲ್ಲಿ ಮಾಜಿಶಾಸಕರ ಮಗನನ್ನೇ ಕಣಕ್ಕೆ ಇಳಿಸಿದರು.
ಜೆಡಿಎಸ್ನವರು ಅಲ್ಪಸಂಖ್ಯಾತರನ್ನುಕಣಕ್ಕಿಳಿಸಿ ತಾವು ಜಾತ್ಯತೀತ ಎನ್ನುವುದನ್ನುತೋರಿಸಲು ಪ್ರಯತ್ನಿಸಿದರು. ಆದರೆಉಪಚುನಾವಣೆಯಲ್ಲಿ ಜನ ಕಾಂಗ್ರೆಸ್ನ್ನು,ಜಾತಿ ರಾಜಕಾರಣವನ್ನು ತಿರಸ್ಕರಿಸಿದ್ದಾರೆ.
ಸಿಂದ ಗಿ ಕ್ಷೇತ್ರದಲ್ಲಿ ಜಾತಿ ವಿಷಬೀಜ ಬಿತ್ತಿ ಗೆಲ್ಲಲುಯತ್ನಿಸಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡಿತುಎಂದು ದೂರಿದರು.ಸೋಲಿಗೆ ನೂರು ಕಾರಣ ಹುಡುಕಬಹುದು.ಗೆಲುವಿಗೆ ನಾನೇ ಕಾರಣ ಎನ್ನುವುದುಸಹಜ. ಆದರೂ, ಸೋಲು ಸೋಲೇ. ಎಲ್ಲಿತಪ್ಪಾಗಿದೆ ಎಂಬುದನ್ನು ಹುಡುಕಲಾಗುವುದು.
ಕಾಂಗ್ರೆಸ್ಗೆ ಜಾತಿ-ಧರ್ಮ ಬಿಟ್ಟು ಬೇರೆರಾಜಕೀಯ ಗೊತ್ತಿಲ್ಲ. ಉಪಚುನಾವಣೆಯಫಲಿತಾಂಶ ಮುಂದಿನ ಚುನಾವಣೆಯದಿಕ್ಸೂಚಿಯಲ್ಲ. ಈ ಉಪಚುನಾವಣೆಸೇರಿ ಈ ಹಿಂದೆ 17 ಉಪಚುನಾವಣೆಗಳಲ್ಲಿಬಿಜೆಪಿ ಗೆದ್ದಿದೆ. ಉಪಚುನಾವಣೆಫಲಿತಾಂಶ ಮುಂದಿನ ದಿಕ್ಸೂಚಿ ಎಂಬುದನ್ನುಕಾಂಗ್ರೆಸ್ನವರು ಒಪ್ಪುತ್ತಾರೋ ಎಂದುಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್