ಪಾಲಿಕೆ ಚುಕಾಣಿ ಹಿಡಿಯಲು ಕಾಂಗ್ರೆಸ್ಗೆ ನಿರಾಸಕ್ತಿ?
Team Udayavani, Feb 3, 2022, 6:17 PM IST
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿಬಹುಮತ ಪಡೆದು ಅಧಿಕಾರ ಹಿಡಿಯಬೇಕಿದ್ದಕಾಂಗ್ರೆಸ್ಗೆ ಹಿಡಿದಿರುವ ಗ್ರಹಣ ಬಿಟ್ಟಂತಿಲ್ಲ.ಮೇಯರ್ ಆಕಾಂಕ್ಷಿಗಳು ರಾಜ್ಯ ನಾಯಕರನ್ನುಭೇಟಿಯಾಗುತ್ತಿದ್ದು, ಮೇಯರ್-ಉಪಮೇಯರ್ಚುನಾವಣೆ ನಡೆಸುವಂತೆ ಸರ್ಕಾರ, ಪ್ರಾದೇಶಿಕಆಯುಕ್ತರ ಮೇಲೂ ಒತ್ತಡ ಹೇರಲು ಜಿಲ್ಲೆಯಜನಪ್ರತಿನಿಧಿಗಳು, ಮುಖಂಡರು ಆಸಕ್ತಿತೋರದಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆನಡೆದು 9 ತಿಂಗಳು ಕಳೆದಿವೆ. ಪಾಲಿಕೆಯ 39 ಸದಸ್ಯಸ್ಥಾನಗಳ ಪೈಕಿ ಕಾಂಗ್ರೆಸ್ 21, ಕಾಂಗ್ರೆಸ್ ಬಂಡಾಯದಪಕ್ಷೇತರರು 5, ಬಿಜೆಪಿ 13 ಸ್ಥಾನಗಳಲ್ಲಿ ಜಯಗಳಿಸಿದೆ.ಬಹುಮತ ಪಡೆದುಕೊಂಡಿರುವ ಪಕ್ಷ ಅಧಿಕಾರದಚುಕ್ಕಾಣಿ ಹಿಡಿದು ಜನಸಾಮಾನ್ಯರು ಇವರ ಮೇಲಿಟ್ಟಿದ್ದನಂಬಿಕೆ ಉಳಿಸಿಕೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್ಮಾತ್ರ, ಮೇಯರ್ ಚುನಾವಣೆ ಕುರಿತು ಖುದ್ದು,ನಿರಾಸಕ್ತಿ ಹೊಂದಿದಂತಿದೆ.
ಚುನಾವಣೆ ಫಲಿತಾಂಶಹೊರಬಿದ್ದು, 9 ತಿಂಗಳಾಗಿವೆ. ಈ ನಡುವೆ, ವಿಧಾನಪರಿಷತ್, ಪಪಂ, ಹೊಸಪೇಟೆ ನಗರಸಭೆ ಸಾರ್ವತ್ರಿಕಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರು ಸಹಆಯ್ಕೆಯಾಗಿದ್ದಾರೆ. ಇಲ್ಲಿಲ್ಲೆಲ್ಲೂ ಕಾಣದ ಕೋವಿಡ್ಸೋಂಕು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ನಡೆಸಲು ಮಾತ್ರಕಂಟಕವಾಗಿ ಪರಿಣಮಿಸಿದಂತಿದ್ದು, ರಾಜ್ಯ ಸರ್ಕಾರಒಂದಲ್ಲ ಒಂದು ನೆಪಹೇಳಿ ಕಾಲಹರಣ ಮಾಡುತ್ತಿದೆಎಂದು ಮೇಯರ್ ಆಕಾಂಕ್ಷಿಗಳು,
ಸದಸ್ಯರುಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಇನ್ನೂ ಮುಹೂರ್ತಕೂಡಿಬಂದಿಲ್ಲ. ಸ್ಪಷ್ಟ ಬಹುಮತ ಹೊಂದಿರುವಕಾಂಗ್ರೆಸ್ ನಾಯಕರು, ಸರ್ಕಾರದ ಮೇಲೆ ಒತ್ತಡಹೇರಿ, ಮೇಯರ್-ಉಪಮೇಯರ್ ಚುನಾವಣೆನಡೆಸುವಂತೆ ಆಗ್ರಹಿಸಬೇಕಿತ್ತು.
ಆದರೆ, ಈವರೆಗೂಒಬ್ಬೇ ಒಬ್ಬ ನಾಯಕರು, ಜನಪ್ರತಿನಿಧಿಗಳು ಮೇಯರ್ಚುನಾವಣೆ ಕುರಿತು ಮಾತನಾಡುತ್ತಿಲ್ಲ. ಅಲ್ಲದೇ,ಪ್ರತಿಭಟನೆ ನಡೆಸಿ ಒತ್ತಡ ಹೇರೋಣವೆಂದರೂ,ಯಾವೊಬ್ಬ ಜನಪ್ರತಿನಿಧಿಗಳು ಆಸಕ್ತಿ ತೋರದೆಮೌನ ವಹಿಸಿರುವ ಕಾಂಗ್ರೆಸ್ ನಾಯಕರ ಬಗ್ಗೆಇದೀಗ ಜನರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ