16ರಂದು ಗ್ರಾಮ ವಾಸ್ತವ್ಯ
Team Udayavani, Oct 15, 2021, 7:13 PM IST
ಬಳ್ಳಾರಿ: ಕೆಲ ತಿಂಗಳುಗಳಿಂದತಾತ್ಕಾಲಿಕವಾಗಿ ಸ್ಥಗಿತವಾಗಿದ್ದಜಿಲ್ಲಾ ಧಿಕಾರಿಗಳ ಗ್ರಾಮ ವಾಸ್ತವ್ಯಇದೀಗ ಪುನಃ ಆರಂಭವಾಗಲಿದ್ದು,ಅ. 16ರಂದು ಜಿಲ್ಲಾ ಮಟ್ಟದಲ್ಲಿಜಿಲ್ಲಾ ಧಿಕಾರಿಗಳು, ತಾಲೂಕುಮಟ್ಟದಲ್ಲಿ ಆಯಾ ಕಂದಾಯ ಇಲಾಖೆಅಧಿ ಕಾರಿಗಳು ಸೂಚಿಸಿದ ಗ್ರಾಮಗಳಿಗೆಭೇಟಿ ನೀಡಿ ವಾಸ್ತವ್ಯ ಹೂಡಲಿದ್ದಾರೆ.
ಜನರಕುಂದುಕೊರತೆಗಳನ್ನು ಆಲಿಸಿ ಸಾಧ್ಯವಾದಲ್ಲಿಸ್ಥಳದಲ್ಲೇ ಪರಿಷ್ಕರಿಸಲಿದ್ದಾರೆ. ಬಳ್ಳಾರಿ ಜಿಲ್ಲಾಧಿ ಕಾರಿ ಪವನ್ಕುಮಾರ್ಮಾಲಪಾಟಿ, ಸಹಾಯಕ ಆಯುಕ್ತರು,ತಹಶೀಲ್ದಾರ್ರು ಅ. 16ರಂದು ಬೆಳಗ್ಗೆ10 ಗಂಟೆಗೆ ತಾಲೂಕಿನ ರೂಪನಗುಡಿ,ಶಿಡಿಗಿನಮೊಳ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಅದೇ ದಿನ ಸಂಡೂರುತಹಶೀಲ್ದಾರ್ ತೋರಣಗಲ್ಲು, ಮೆಟ್ರಿಕಿ,ಕುರುಗೋಡು ತಹಸೀಲ್ದಾರ್ ಕುರುಗೋಡು,ತಿಮ್ಮಲಾಪುರ, ಕಂಪ್ಲಿ ತಹಶೀಲ್ದಾರ್ಕಂಪ್ಲಿ, ನಂ.10 ಮುದ್ದಾಪುರ,ಸಿರುಗುಪ್ಪ ತಹಶೀಲ್ದಾರ್ಹಚ್ಚೊಳ್ಳಿ, ಬಿ.ಎಂ. ಸೂಗೂರುಗ್ರಾಮಗಳಿಗೆ ಭೇಟಿ ನೀಡಿ,ಜನರ ಕುಂದುಕೊರತೆಗಳನ್ನುಆಲಿಸಲಿದ್ದಾರೆ.
ಆಲಿಸುವ ಸಮಸ್ಯೆಗಳು; ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಭೇಟಿನೀಡುವ ಗ್ರಾಮಗಳಲ್ಲಿ ಎಲ್ಲ ಪಹಣಿಯಲ್ಲಿನಲೋಪದೋಷಗಳು, ಪಹಣಿ ಕಾಲಂ 3ಮತ್ತು ಆಕಾರ ಬಂದ್ ತಾಳೆ ಹೊಂದಿರುವಬಗ್ಗೆ ಖಚಿತಪಡಿಸಿಕೊಳ್ಳುವುದು.ಲೋಪಗಳು ಕಂಡುಬಂದಿರುವಪ್ರಕರಣಗಳನ್ನು ಗುರುತಿಸಿ ವಿಲೇ ಮಾಡಲುಆದೇಶ ಹೊರಡಿಸಿ ನಿಯಮಾನುಸಾರಕ್ರಮ ಕೈಗೊಳ್ಳಲಾಗುವುದು.
ಗ್ರಾಮಳಲ್ಲಿನಪಹಣಿಗಳನ್ನು ಪರಿಶೀಲಿಸಿ ಪೌತಿಪ್ರಕರಣಗಳನ್ನು ಗುರುತಿಸಿ ನೈಜವಾರಸುದಾರರ ಹೆಸರುಗಳಿಗೆ ಖಾತೆಬದಲಾವಣೆ ಮಾಡುವ ಬಗ್ಗೆ ಪೌತಿಆದೇಶಗಳನ್ನು ಸಿದ್ಧತೆಯಲ್ಲಿಟ್ಟುಕೊಳ್ಳುವುದು.ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳಿಗೆಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆಖಚಿತಪಡಿಸಿಕೊಂಡು ಪಹಣಿ ಸೌಲಭ್ಯಪಡೆಯದೆ ಇರುವವರಿಂದ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಅರ್ಹಪ್ರಕರಣಗಳಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳ ಸಮಕ್ಷಮ ಆದೇಶ ನೀಡಲುಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ಗ್ರಾಮದಲ್ಲಿಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಪರಿಶೀಲಿಸುವುದು, ಒಂದು ವೇಳೆ ಸ್ಮಶಾನಕ್ಕೆಜಮೀನು ಅಗತ್ಯವಿದ್ದಲ್ಲಿ ಮೊದಲಿಗೆಸರ್ಕಾರಿ ಜಮೀನನ್ನು ಗುರುತಿಸುವುದುಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿಖಾಸಗಿ ಜಹಮೀನನ್ನು ಗುರುತಿಸಿಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆಇದ್ದಲ್ಲಿ ಲಭ್ಯ ಜಮೀನನ್ನು ಗುರುತಿಸಿಕಾಯ್ದಿರುವುದು, ಸರ್ಕಾರಿ ಜಮೀನುಹಾಗೂ ಸಾರ್ವಜನಿಕ ಉದ್ದೇಶಗಳಿಗೆಕಾಯ್ದಿರಿಸಿರುವ ಜಮೀನುಳನ್ನುಅಕ್ರಮವಾಗಿ ಒತ್ತುವರಿಯಾಗಿದ್ದಲ್ಲಿ ಅಂಥಜಮೀನುಗಳನ್ನು ಗುರುತಿಸಿ ತೆರವುಗೊಳಿಸಲುಕ್ರಮ ಕೈಗೊಳ್ಳಲಾಗುವುದು.
ಮತದಾರರ ಪಟ್ಟಿಯಲ್ಲಿ ಹೆಸರುಸೇರಿಸಲು ಅರ್ಜಿ ಸ್ವೀಕರಿಸುವುದು,ಬರ/ಪ್ರವಾಹ ಇದ್ದಲ್ಲಿ ಕುಡಿವ ನೀರುಸೌಲಭ್ಯ ಒದಗಿಸುವುದು, ಹದ್ದು ಬಸ್ತು,ಪೋಡಿ, ಪೋಡಿ ಮುಕ್ತಗ್ರಾಮ, ದರಕಾಸ್ತುಪೋಡಿ, ಕಂದಾಯ ಗ್ರಾಮಗಳ ರಚನೆಸೇರಿದಂತೆ ಇನ್ನಿತರೆ ಹಲವು ಸಮಸ್ಯೆಗಳನ್ನುಅ ಧಿಕಾರಿಗಳು ಆಲಿಸಿ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನರಕುಂದುಕೊರತೆ ಸಭೆ ನಡೆಯಲಿದ್ದು, ನಂತರಗ್ರಾಮೀಣ ಪ್ರತಿಭೆ ಮತ್ತು ಕಲೆಯನ್ನುಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್