ಹಿಜಾಬ್; ಕಾಲೇಜು ಮುಂಭಾಗ ಸಿಸಿ ಟಿವಿ ಅಳವಡಿಕೆ
Team Udayavani, Feb 20, 2022, 8:02 PM IST
ಬಳ್ಳಾರಿ: ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದನಡೆಯುತ್ತಿರುವ ಹಿಜಾಬ್ ವಿವಾದ ತಣ್ಣಗಾಗಿರುವಬೆನ್ನಲ್ಲೇ ಕೆಲ ವಿದ್ಯಾರ್ಥಿನಿಯರು ಶನಿವಾರ ಗುಂಪು ಸೇರಿವಿವಾದ ಸೃಷ್ಟಿಗೆ ವಿಫಲ ಯತ್ನನಡೆಸಿದ್ದಾರೆ.
ಇದರಿಂದಎಚ್ಚೆತ್ತ ಪ್ರಾಚಾರ್ಯರು, ಕಾಲೇಜು ಮುಂಭಾಗದಲ್ಲಿಸಿಸಿ ಟಿವಿ ಅಳವಡಿಸಿ, ವಿವಾದ ಸೃಷ್ಟಿಸಲು ಬರುವವರಪತ್ತೆಗೆ ಮುಂದಾಗಿದ್ದಾರೆ.ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದಹಿಜಾಬ್ ವಿವಾದ ನಡೆಯುತ್ತಿದೆ. ಹೈಕೋರ್ಟ್ಆದೇಶ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿಗಳುಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಇದಕ್ಕೆಒಪ್ಪಿದ ಕೆಲ ವಿದ್ಯಾರ್ಥಿನಿಯರು ಕಾಲೇಜೊಳಗೆಹೋದರೆ, ವಿರೋಧಿ ಸಿದ ಕೆಲ ವಿದ್ಯಾರ್ಥಿನಿಯರುತಮ್ಮ ಪೋಷಕರು, ಬೆಂಬಲಿತ ಯುವಕ ಸಂಘಟನೆಗಳನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಪ್ರವೇಶಿಸಿದ ಕಾಲೇಜು ಪ್ರಾಚಾರ್ಯರು, ಪೊಲೀಸರು,ಮುಸ್ಲಿಂ ಮುಖಂಡರು ಮಧ್ಯಪ್ರವೇಶಿಸಿ ವಿವಾದವಿಕೋಪಕ್ಕೆ ತಿರುಗಂತೆ ಇತ್ಯರ್ಥಪಡಿಸಿ, ಪರಿಸ್ಥಿತಿಯನ್ನುಶಾಂತಗೊಳಿಸಿದ್ದಾರೆ.ಇಷ್ಟೆಲ್ಲ ನಡೆದರೂ, ಕೆಲ ಮುಸ್ಲಿಂ ವಿದ್ಯಾರ್ಥಿನಿಯರುಶನಿವಾರ ಪುನಃ ವಿನಾಕಾರಣ ಗೊಂದಲ ಸೃಷ್ಟಿಸಲುಮುಂದಾಗಿದ್ದಾರೆ. ಪಕ್ಕದ ಮುನಿಸಿಪಲ್ ಕಾಲೇಜುಮೈದಾನದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಜಮಾಯಿಸಿ, ಹಿಜಾಬ್ ತೆಗೆಯುವಂತೆ ಲಿಖೀತರೂಪದಲ್ಲಿ ನೀಡುವಂಗೆ ಪ್ರಾಚಾರ್ಯರನ್ನು ಕೇಳಲು ಚರ್ಚಿಸಿದ್ದಾರೆ.
ಮೂವರು ವಿದ್ಯಾರ್ಥಿನಿಯರು ಹೋಗಿಪ್ರಾಚಾರ್ಯರನ್ನು ಲಿಖೀತ ರೂಪದಲ್ಲಿ ನೀಡುವಂತೆಯೂಕೇಳಿದ್ದಾರೆ. ಇದಕ್ಕೆ ಒಪ್ಪದ ಪ್ರಾಚಾರ್ಯ ಪೊÅ.ಹೇಮಣ್ಣ, ನೀಡಲಾಗದು. ಸರ್ಕಾರ, ನ್ಯಾಯಾಲಯಹೇಳಿದಂತೆ ಕೇಳುವವರು ನಾವು. ಅಷ್ಟೇ ಹೊರತು,ಲಿಖೀತ ರೂಪದಲ್ಲಿ ಕಾಲೇಜಿನ ಲೆಟರ್ ಹೆಡ್ನಲ್ಲಿಏನನ್ನೂ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿ ಪೊಲೀಸರು, ಹಿಜಾಬ್ ತೆಗೆದುಕಾಲೇಜು ಒಳಗಾದರು ಹೋಗಿ ಇಲ್ಲ ಮನೆಗಾದರೂಹೋಗಿ ಎಂದು ತಿಳಿಸಿದ್ದಾರೆ. ಇದಕ್ಕೆ ವಿರೋಧವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಹಿಜಾಬ್ ತೆಗೆಯದೆಕಾಲೇಜು ಎದುರಲ್ಲೇ ಕೂತು ಓದುತ್ತೇವೆ ಎಂದಿದ್ದಾರೆ.ಇದರಿಂದ ಎಚ್ಚೆತ್ತ ಪೊಲೀಸರು, ವಿದ್ಯಾರ್ಥಿನಿಯರನ್ನುಮನೆಗೆ ವಾಪಸ್ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ