ಪರಂಪರೆ ಬಿಂಬಿಸುವ ಕಾಫಿಟೇಬಲ್ ಬುಕ್
Team Udayavani, Jul 23, 2021, 6:13 PM IST
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ (ಸಾಮ್ರಾಜ್ಯ) ಜಿಲ್ಲೆಗಳ ಪ್ರಾಕೃತಿಕ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಕಾಫಿ ಟೇಬಲ್ ಬುಕ್ ನನ್ನು ಬಳ್ಳಾರಿ ಜಿಲ್ಲಾ ಧಿಕಾರಿ ಪವನಕುಮಾರ ಮಾಲಪಾಟಿ ಬಿಡುಗಡೆ ಮಾಡಿದರು.
ಬಳ್ಳಾರಿ ಜಿಲ್ಲಾಡಳಿತ ಮತ್ತು ಸ್ಮಯೋರ್ ಕಂಪನಿಯು ಜಂಟಿಯಾಗಿ ಸಿದ್ಧಪಡಿಸಿರುವ ಈ ಕಾಫಿ ಟೇಬಲ್ ಪುಸ್ತಕವನ್ನು ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಬಳ್ಳಾರಿ ಮತ್ತು ವಿಜಯನಗರ ಪ್ರದೇಶದ ಶ್ರೀಮಂತ ಸಂಸ್ಕೃತಿಯ ಪರಿಚಯ, ಬ್ರಿಟಿಷ್ ವಸಾಹತುಷಾಹಿ ಇತಿಹಾಸ ಮತ್ತು ಪರಂಪರೆ, ಮಧ್ಯಯುಗದ ಪರಂಪರೆಯ ಇತಿಹಾಸ, ಈ ಪ್ರದೇಶದ ಪ್ರಕೃತಿ, ಸಸ್ಯಸಂಪತ್ತು ಮತ್ತು ವಿಶಿಷ್ಟ ಪ್ರಾಣಿಸಂಕುಲಗಳ ಪರಿಚಯ, ಹಂಪಿಯ ಶಿಲ್ಪಕಲೆ ಮತ್ತು ಅವಶೇಷಗಳು, ಈ ಭಾಗದ ಜನರು ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳು ಹಾಗೂ ಅತ್ಯಾಕರ್ಷಕ ಫೋàಟೊಗುತ್ಛಗಳ ಸಂಗ್ರಹವನ್ನು ಈ ಕಾಫಿ ಈ ಪ್ರದೇಶದ ಅದ್ಭುತಗಳ ಚಿತ್ರಣ ಹಾಗೂ ಅತ್ಯಾಕರ್ಷಕ ಮಾಹಿತಿ ಇದರಲ್ಲಿದ್ದು, ಮುಖಪುಟದಲ್ಲಿ ಪ್ರಾಗೈತಿಹಾಸಿಕ ಇತಿಹಾಸ ಸಾರುವ ಸಂಗನಕಲ್ಲು ಗುಡ್ಡ ಹಾಗೂ ಹಿಂಬದಿ ಪುಟದಲ್ಲಿ ವೈಭವದ ಹಂಪಿಯ ಚಿತ್ರಣ ದಾಖಲಿಸಲಾಗಿದೆ.
ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಬಳ್ಳಾರಿ ಪ್ರದೇಶದ ಬಗ್ಗೆ ಕಾಫಿ ಟೇಬಲ್ ಪುಸ್ತಕವನ್ನು ಹೊರತರುವ ಪರಿಕಲ್ಪನೆಯನ್ನು ಹಿಂದಿನ ಡಿಸಿಯಾಗಿದ್ದ ಎಸ್.ಎಸ್.ನಕುಲ್ ಅವರು ಪ್ರಾರಂಭಿಸಿದರು ಮತ್ತು ಸಂಡೂರ್ ಮ್ಯಾಂಗನೀಸ್ ಮತ್ತು ಐರನ್ ಓರ್ ಲಿಮಿಟೆಡ್ (ಎಸ್ಎಂಐಒಆರ್ಇ) ಅವರು ಇದನ್ನು ಪ್ರಾಯೋಜಿಸಲು ಒಪ್ಪಿಕೊಂಡಿತ್ತು. ಹಾಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ಪುಸ್ತಕವು ಬಳ್ಳಾರಿ ಜನರ ಮತ್ತು ಪ್ರದೇಶದ ಇತಿಹಾಸ, ಸಂಸ್ಕ ೃತಿ ಮತ್ತು ಜೀವನ ಶೈಲಿ ತಿಳಿಸುತ್ತದೆ. ಎಂ.ವೈ.ಘೋರ್ಪಡೆ ಅವರ ಹೆಜ್ಜೆಗಳನ್ನು ಅನುಸರಿಸಿ, ಅವರ ಮೊಮ್ಮಗ ಬಹೀರ್ಜಿ ಘೋರ್ಪಡೆ ಅವರು ಸಂಡೂರು ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದು, ಸಂಡೂರು ಪ್ರದೇಶದ ಕೆಲ ಅದ್ಭುತ ಛಾಯಾಚಿತ್ರಗಳನ್ನು ನೀಡುವ ಮೂಲಕ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಸ್ಮಯೋರ್(ಎಸ್ ಎಂಐಒಆರ್ಇ) ಅಧ್ಯಕ್ಷ ಟಿ.ಆರ್.ರಘುನಂದನ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತ ಡಾ| ಆಕಾಶ್ ಶಂಕರ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಸ್ಮಯೋರ್ ವ್ಯವಸ್ಥಾಪಕ ನಿರ್ದೇಶಕ ಬಹೀರ್ಜಿ ಎ.ಘೋರ್ಪಡೆ, ಸ್ಮಯೋರ್ ನಿರ್ದೇಶಕ (ಗಣಿ) ಎಂ.ಡಿ.ಅಬ್ದುಲ್ ಸಲೀಮ್, ಖ್ಯಾತ ಛಾಯಾಗ್ರಾಹಕರು ಹಾಗೂ ವೈದ್ಯ ಡಾ| ಎಸ್.ಕೆ.ಅರುಣ, ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮತ್ತು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ