ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು : ಸಚಿವ ಬಿ. ಸಿ. ಪಾಟೀಲ್
Team Udayavani, Oct 17, 2022, 11:04 AM IST
ಕುರುಗೋಡು : ಕುರುಗೋಡು ಪಟ್ಟಣದ ಆರಾಧ್ಯ ದೈವ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ಕೃಷಿ ಸಚಿವ ಬಿ. ಸಿ. ಪಾಟೀಲ್ ಭೇಟಿ ನೀಡಿ ದರ್ಶನ ಪಡೆದು ಹರಕೆ ತೀರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಲಾಭದಾಯಕ ಗಳಿಸಲು ಸಾಧ್ಯ ಎಂದರು. ಕೇವಲ ಭತ್ತ, ಮೆಣಿಸಿನಕಾಯಿ ಬೆಳೆಗಳು ಬೆಳೆಯೋದು ಒಂದೇ ಅಲ್ಲ ಇದರ ಜೊತೆಗೆ ಮಿಶ್ರ ಬೇಸಾಯ ಪದ್ಧತಿಯನ್ನು ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು. ಭತ್ತ ಬೆಳೆದರೆ ಕೇವಲ ಹೊಟ್ಟೆ ಬಟ್ಟೆಗೆ ಮಾತ್ರ ಸಹಕಾರಿ ಯಾಗುತ್ತದೆ ಆದ್ದರಿಂದ ಕೃಷಿ ಪದ್ಧತಿ ಯಲ್ಲಿ ಅನೇಕ ಬೆಳೆಗಳು ಇವೆ ಅವುಗಳನ್ನು ಬೆಳೆಯಲು ಮುಂದಾಗಬೇಕು. ರೈತರು ವರ್ಷದಲ್ಲಿ ಭತ್ತ ಎರಡು ಬೆಳೆ ಬೆಳೆಯುತ್ತಾರೆ ಇದಕ್ಕೆ ಕ್ರಿಮಿನಾಶಕ ಔಷದಿ ಸಿಂಪರಣೆ ಮಾಡುವುದರಿಂದ ಭೂಮಿ ಡ್ರೈ ಆಗುವುದಿಲ್ಲ ಇದರಿಂದ ಉತ್ತಮ ಬೆಳೆ ಪಡೆಯಲು ಅನುಕೂಲ ಆಗುವುದಿಲ್ಲ ಎಂದರು.
ಆದ್ದರಿಂದ ರೈತರು ಜಮೀನುಗಳಿಗೆ ಕೆರೆಯ ಮಣ್ಣು, ಹಸಿರು ಎಲೆ ಗೊಬ್ಬರ, ಎರೆಹುಳ ಗೊಬ್ಬರ, ಸಗಣಿ ಗೊಬ್ಬರ ಇತರೆ ಗೊಬ್ಬರಗಳನ್ನು ಭೂಮಿಗೆ ಹಾಕಿದರೆ ಬೆಳೆಯಲ್ಲಿ ಉತ್ತಮ ಪಲವತ್ತತೆ ಪಡೆಯೋಕೆ ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.
ಅನೇಕ ರೈತರು ಕಾಲುವೆಗಳನ್ನು ಒತ್ತುವರಿ ಮಾಡಿ ಕೆಲವು ಕಡೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ ಮಳೆ ಬಂದಾಗ ಅ ಬೆಳೆಗಳಿಗೆ ನೀರು ನುಗ್ಗುತ್ತಿವೆ ಆಗ ಜನರಿಗೆ ಅರ್ಥ ಆಗುತ್ತಿದೆ ಇದರ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಎಚ್ಚರಿಸಿದರು.
ಕುರುಗೋಡು ತಾಲೂಕಾಗಿ ವರ್ಷಗಳೆ ಗತಿಸಿವೆ ಭತ್ತ ಖರೀದಿ ಕೇಂದ್ರ ಮಾತ್ರ ಇನ್ನೂ ತಗಿದಿಲ್ಲ ಎಲ್ಲ ತಾಲೂಕಲ್ಲಿ ಆಗಿವೆ. ಕುರುಗೋಡು ಭಾಗದ ರೈತರು ಮಾತ್ರ ಬೇರೆ ಬೇರೆ ಕಡೆ ಹೋಗಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿಕೊಂಡು ಬರಬೇಕಾಗಿದೆ. ಇದರ ಮದ್ಯೆ ಮಧ್ಯವರ್ಥಿಗಳಿಗೆ ಲಾಭದಾಯಕ ವಾಗುತ್ತಿದೆ ಎಂದು ಕೇಳಿದ ರೈತರ ಪ್ರೆಶ್ನೆಗೆ ಕೂಡಲೇ ಜಿಲ್ಲಾಧಿಕಾರಿಗಳ ಅತ್ತಿರ ಮಾತನಾಡಿ ಅನುಕೂಲ ಕಲ್ಪಿಸುವೆ ಎಂದು ಭರವಸೆ ನೀಡಿದರು.
ಅಲ್ಲದೆ ತಾಲೂಕಲ್ಲಿ ಸುವ್ಯವಸ್ಥಿತವಾಗಿ ಕೃಷಿ ಇಲಾಖೆಯ ಕಟ್ಟಡ ಇಲ್ಲದಾಗಿದೆ ಇದರಿಂದ ಅಧಿಕಾರಿಗಳಿಗೆ ಹಾಗೂ ರೈತರಿಗೆ ಅನುಕೂಲ ಇಲ್ಲದಾಗಿರುವುದರಿಂದ ಶೀಘ್ರದಲ್ಲಿ ಕಟ್ಟಡಕ್ಕೆ 1 ಕೋಟಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬ ರೈತರು ಬೆಳೆ ನಷ್ಟವಾದರೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಸರಕಾರ ನಿಮ್ಮ ಜೊತೆಗೆ ಇದೆ ಆತ್ಮಹತ್ಯೆ ಯು ಪರಿಹಾರ ಅಲ್ಲ ಆದ್ದರಿಂದ ಸರಕಾರ ಅಂತಹ ರೈತರಿಗೆ ಪರಿಹಾರ ನೀಡಲಿದೆ ಎಂದರು.
ಇದನ್ನೂ ಓದಿ : ದಾಸನದೊಡ್ಡಿಯ ಕೆರೆಕಟ್ಟೆಗಳ ನಿರ್ಮಾತೃ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ಇನ್ನಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ