ಸಚಿವ ಶ್ರೀರಾಮುಲುರಿಂದ ರೇಷನ್ ಕಿಟ್ ವಿತರಣೆ
Team Udayavani, Apr 27, 2020, 3:23 PM IST
ಬಳ್ಳಾರಿ: ಜೆಟಿಎಸ್ ಶಾಲಾ ಮೈದಾನದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಉಚಿತವಾಗಿ ರೇಷನ್ ಕಿಟ್ ವಿತರಿಸಿದರು.
ಬಳ್ಳಾರಿ: ನಗರದ ರೇಡಿಯೋ ಪಾರ್ಕ್ನ ಜೆಟಿಎಸ್ ಶಾಲೆ ಮೈದಾನದಲ್ಲಿ ಕೋವಿಡ್ ವೈರಸ್, ಲಾಕ್ಡೌನ್, ಬಸವ ಜಯಂತಿ ನಿಮಿತ್ತ ಬಡ ಜನರಿಗೆ ಅಗತ್ಯ ದಿನಸಿಗಳುಳ್ಳ ರೇಷನ್ ಕಿಟ್ಗಳನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಭಾನುವಾರ ಸಂಜೆ ವಿತರಿಸಿದರು.
ಸ್ಥಳೀಯ 24ನೇ ವಾರ್ಡ್ನ ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು ಏರ್ಪಡಿಸಿದ್ದ ರೇಷನ್ ವಿತರಣಾ ಕಾರ್ಯಕ್ರಮದಲ್ಲಿ ಬಡ ಜನರಿಗೆ ರೇಷನ್ ಕಿಟ್ ವಿತರಿಸಿ ಮಾತನಾಡಿದರು. ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಅವರು ಎಂಜಿಆರ್ ಹೆಸರಲ್ಲಿ ತಮ್ಮದೇ ಆದ ಯುವಕರ ಪಡೆಯನ್ನು ಕಟ್ಟಿಕೊಂಡು ಸಾಮಾಜಿಕ ಸೇವೆಯಲ್ಲಿ ಸದಾ ಮುಂದಿರುತ್ತಾರೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ಕಳೆದ 33 ದಿನಗಳಿಂದ ನಗರದ ಓಪಿಡಿಯಲ್ಲಿ ಪ್ರತಿದಿನ ಸುಮಾರು 1 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಜನರಿಗೆ ಆಪತ್ತು ಬಂದ ಪ್ರತಿಬಾರಿಯೂ ಗೋವಿಂದರಾಜುಲು ಜನಪರ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಅದರಂತೆ ಇಂದು ಸಹ ಸುಮಾರು 700ಕ್ಕೂ ಹೆಚ್ಚು ಬಡಜನರಿಗೆ, ಅಕ್ಕಿ, ಗೋದಿಹಿಟ್ಟು, ಅಡುಗೆ ಎಣ್ಣೆ, ಸೋಪು, ಸಕ್ಕರೆ ಸೇರಿ ಇನ್ನಿತರೆ ದಿನಸಿ ವಸ್ತುಗಳುಳ್ಳ ರೇಷನ್ ಕಿಟ್ಗಳನ್ನು ವಿತರಿಸಿದ್ದಾರೆ ಎಂದವರು ಹೇಳಿದರು.
ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು, ಒಟ್ಟು 5 ಸಾವಿರ ಕಿಟ್ ಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಮೇ 3ರವರೆಗೆ ಉಚಿತ ಊಟ, ಕಿಟ್ ವಿತರಣೆ ಮುಂದುವರೆಯಲಿದೆ ಎಂದವರು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಕಲ್ಯಾಣಸ್ವಾಮಿ ಮಾತನಾಡಿದರು. ಈ ವೇಳೆ ಬಿಜೆಪಿ ಮುಖಂಡ ಓಬಳೇಶ್ ಸೇರಿ ಎಂಜಿಆರ್ ತಂಡದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು