70 ಕೂಲಿ ಕಾರ್ಮಿಕರು ಆಂಧ್ರದಲ್ಲಿ ಲಾಕ್!
ಮೂರು ತಿಂಗಳ ಹಿಂದೆ ತೆರಳಿದ್ದ ಜನ ಕೆಲಸವಿಲ್ಲದೇ ಈಗ ಊಟಕ್ಕಾಗಿ ಪರದಾಟ
Team Udayavani, May 1, 2020, 2:01 PM IST
ಬಳ್ಳಾರಿ: ಆಂಧ್ರದ ಗುಂಟೂರು ಜಿಲ್ಲೆಯ ಅಬ್ರಸ್ಪಲ್ಲಿ ಗ್ರಾಮದಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ರಾವಿಹಾಳ್ ಗ್ರಾಮದ ಕೂಲಿ ಕಾರ್ಮಿಕರು
ಬಳ್ಳಾರಿ: ಮೆಣಸಿನಕಾಯಿ ಬಿಡಿಸಲೆಂದು ನೆರೆಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಗೆ ಹೋಗಿದ್ದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ನಿವಾಸಿಗಳು ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದು, ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಿಸುವಂತಾಗಿದೆ.
ಜಿಲ್ಲೆಯ ರಾವಿಹಾಳ್ ಗ್ರಾಮದ 70 ಕೂಲಿ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಕಳೆದ ಮೂರು ತಿಂಗಳ ಹಿಂದೆ ನೆರೆಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸರಸಪೇಟ ತಾಲೂಕಿನ ಸತ್ಯನಪಲ್ಲಿ ಮಂಡಲಂನ ಅಬ್ರಸ್ಪಲ್ಲಿ ಗ್ರಾಮದಲ್ಲಿ ಮೆಣಸಿನಕಾಯಿ ಬಿಡಿಸಲೆಂದು ತೆರಳಿದ್ದಾರೆ. ಇವರಲ್ಲಿ ಒಬ್ಬ ಗರ್ಭಿಣಿ, 20 ಮಕ್ಕಳು, ವೃದ್ಧರೂ ಇದ್ದಾರೆ. ಕೊರೊನಾ ವೈರಸ್
ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೆ ಬಂದು ಈಗಾಗಲೇ ತಿಂಗಳು ಕಳೆದಿದ್ದು, ಮೆಣಸಿನಕಾಯಿ ಬಿಡಿಸಿದ ಕೂಲಿ ಹಣದಲ್ಲಿ ಇಲ್ಲಿಯವರೆಗೆ ಜೀವನ ಸಾಗಿಸಿದ್ದಾರೆ.
ಗ್ರಾಮದ ಹೊಲವೊಂದರಲ್ಲಿ ಚಿಕ್ಕಚಿಕ್ಕ ಟೆಂಟ್ಗಳಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಇದೀಗ ಆಹಾರದ ಕೊರತೆ ಎದುರಾಗಿದೆ. ಹೊರ ರಾಜ್ಯದವರಾದ ಹಿನ್ನೆಲೆಯಲ್ಲಿ ಯಾವುದೇ ದಾಖಲೆಗಳು ಇರದ ಕಾರಣ ಅಲ್ಲಿನ ಸ್ಥಳೀಯ ಆಡಳಿತ ಇವರಿಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ನೀಡಲು ಹಿಂದೇಟು ಹಾಕುತ್ತಿದೆ. ಮೇಲಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆಲ್ಲೂ ಕೆಲಸವೂ ಇಲ್ಲದೇ, ವಾಪಸ್ ತಮ್ಮ ಊರಿಗೆ ಬರಲು ಸಾರಿಗೆ ವ್ಯವಸ್ಥೆಯೂ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಬಳ್ಳಾರಿ ಜಿಲ್ಲಾಡಳಿತ ಇವರ ಸಮಸ್ಯೆಗೆ ಸ್ಪಂದಿಸಿ ಬಳ್ಳಾರಿಗೆ ಕರೆತರುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಬ್ರಸ್ಪಲ್ಲಿಯಲ್ಲಿ ಸಿಲುಕಿರುವ ಸಂತ್ರಸ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.
ಅಬ್ರಸ್ಪಲ್ಲಿ ಗ್ರಾಮದ ರಸ್ತೆಯಲ್ಲಿ ತಾತ್ಕಾಲಿಕ ಟೆಂಟ್ಗಳಲ್ಲಿ ವಾಸವಾಗಿದ್ದೇವೆ. ಈಚೆಗೆ ಮಳೆಬಂದು ಅವಾಂತರ ಸೃಷ್ಟಿಸಿದೆ. ಅಡುಗೆ ಮಾಡಲು ರೇಷನ್ ಇಲ್ಲದಾಗಿದೆ. ಗರ್ಭಿಣಿಯೊಬ್ಬಳು ಇದ್ದಾರೆ. ಅವರನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಬೇಕಾಗಿದೆ. ಹೇಗಾದರು ಮಾಡಿ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಮಹಿಳೆಯೊಬ್ಬರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಕಾರ್ಯಪ್ರವೃತ್ತರಾಗಿ ಆಂಧ್ರದಲ್ಲಿ ಸಿಲುಕಿರುವವರನ್ನು ಬಳ್ಳಾರಿಗೆ ಕರೆತರಬೇಕಾಗಿದೆ.
3ರ ನಂತರ ಕ್ರಮಕ್ಕೆ ನಿರ್ಧಾರ: ಕೂಡಲಗಿ
ಸಿರುಗುಪ್ಪ: ಲಾಕ್ಡೌನ್ ಹಿನ್ನೆಲೆಯಲ್ಲಿ ಸೀಮಾಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸತ್ಯನಪಲ್ಲಿ ಗ್ರಾಮದಲ್ಲಿ ಸಿಲಿಕಿಕೊಂಡಿದ್ದ ತಾಲೂಕಿನ ರಾವಿಹಾಳ್ ಗ್ರಾಮದ 70 ಜನ ಕೂಲಿ ಕಾರ್ಮಿಕರಲ್ಲಿ ಈಗಾಗಲೇ 17 ಜನರು ಸ್ವಗ್ರಾಮಕ್ಕೆ ಮರಳಿದ್ದಾರೆ. ಉಳಿದ ಕಾರ್ಮಿಕರನ್ನು ಮೇ 3ರ ನಂತರ ಕರೆತರುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ತಹಶೀಲ್ದಾರ್ ಎಸ್.ಬಿ. ಕೂಡಲಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ