ಕವಿಗೋಷ್ಠಿಯಲ್ಲಿ ಅಮ್ಮನ ವರ್ಣನೆ
ಸಿರಿಗನ್ನಡ ವೇದಿಕೆಯಿಂದ ಅಂತರ್ಜಾಲದಲ್ಲಿ ಕಾರ್ಯಕ್ರಮ ಆಯೋಜನೆ
Team Udayavani, May 18, 2020, 4:48 PM IST
ಬಳ್ಳಾರಿ: ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ಅಂತರ್ಜಾಲ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಕವಿಗಳು ಮತ್ತು ಕವಿಯತ್ರಿಯರು
ಬಳ್ಳಾರಿ: ಜಿಲ್ಲಾ ಸಿರಿಗನ್ನಡ ವೇದಿಕೆ ಹಾಗೂ ಮಹಿಳಾ ಘಟಕ ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಕವಿಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ವಿಶ್ವ ಮಾತೃ ದಿನ ಹಾಗೂ ವಿಶ್ವ ಕುಟುಂಬ ದಿನಾಚರಣೆ ಅಂಗವಾಗಿ ನಡೆದ ಆನ್ಲೈನ್ ಕವಿಗೋಷ್ಠಿಯಲ್ಲಿ ನಾಡಿನ 18ಕ್ಕೂ ಹೆಚ್ಚು ಕವಿ-ಕವಿಯತ್ರಿಯರು ಕವಿತೆ ವಾಚಿಸಿದರು. ಅಮ್ಮನನ್ನು ಕೊಂಡಾಡುವ, ಮಾತೆಯ ತ್ಯಾಗ, ಮಮತೆ, ವಾತ್ಸಲ್ಯವನ್ನು ಹೆಚ್ಚು ಜನರು ವರ್ಣಿಸಿದರೆ ಒಬ್ಬರು ಅಪ್ಪನನ್ನು ಹೊಗಳಿ ಕವಿತೆ ವಾಚಿಸಿದ್ದು ವಿಶೇಷವಾಗಿತ್ತು. ಬಿಜಾಪುರದ ಅಶೋಕ ನಡುವಿನಮನಿ, ಸುಮಾ ಗಾಜರೆ, ಕೋಲಾರದ ಟಿ. ಸುಬ್ಬರಾಮಯ್ಯ, ಹೂವಿನ ಹಡಗಲಿಯ ನಾಗಮಂಜುಳ ಜೈನ, ಶೋಭ ಮಲ್ಕಿ ಒಡೆಯರ್, ಪೀರ್ ಸಾಹೇಬ್ ಬೀರಬ್ಬಿ, ಮಡಿಕೇರಿಯ ಹೇಮಲತಾ ಪೂರ್ಣ ಪ್ರಕಾಶ್, ಕೊಪ್ಪಳದ ಪ್ರವೀಣ ಕಿತ್ತೂರ್, ಮಹಮ್ಮದ್ ಅಲಿ ಆರ್, ಹಗರಿಬೊಮ್ಮನಹಳ್ಳಿಯ ಕೆ.
ಶಾರದಾ, ಯಾದಗಿರಿಯ ಮಶಾಕ ತಾಳಿಕೋಟೆ, ಚಿಕ್ಕಬಳ್ಳಾಪುರದ ಉದಯ್ ಕಿರಣ್ ಬಿ, ಉತ್ತರ ಕನ್ನಡದ ಡಾ| ಕವಿತಾ ಹೆಬ್ಟಾರ್, ಕೊಡಗಿನ ವೀಣಾ ಎಸ್. ರಾವ್, ದಾವಣಗೆರೆಯ ಲಲಿತಾ ಯೋಗೀಶ್, ಚಿತ್ರದುರ್ಗದ ಜೆ.ಆರ್. ಶಿವಕುಮಾರ್, ಬಳ್ಳಾರಿಯ ಸರೋಜಾ ಬ್ಯಾತನಾಳ್, ಕೆ.ನೀಲಮ್ಮ, ಎಸ್.ಕೌಸ್ತುಭ ಭಾರದ್ವಾಜ್, ರಾಯಚೂರಿನ ಕೆ.ಎಂ. ಮುರುಗೇಶ್ ಮತ್ತು ಜಮಖಂಡಿಯ ದಾಮೋದರ ಬಡಿಗೇರ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ನಗರದ ಮೇಧಾ ಸಂಗೀತ ಮಹಾವಿದ್ಯಾಲಯದ ಸಂಸ್ಥಾಪಕಿ, ವೀಣಾ ವಾದಕಿ ಸುನೀತಾ ಹರಿ ಅವರು ವೀಣಾ ವಾದನ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ ಮಾತನಾಡಿ, ಕೋವಿಡ್ ವೈರಸ್ ತಲ್ಲಣದ ನಡುವೆಯೂ ಹಲವು ಜಿಲ್ಲಾ ಘಟಕಗಳು ತಂತ್ರಜ್ಞಾನ ಬಳಸಿಕೊಂಡು ಸಾಹಿತ್ಯ ಚಟುವಟಿಕೆ ನಡೆಸುತ್ತಿವೆ. ಬಳ್ಳಾರಿ ಜಿಲ್ಲಾ ಘಟಕವು ರಾಜ್ಯಮಟ್ಟದ ಅಂತರ್ಜಾಲ ಕವಿಗೋಷ್ಠಿ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಡಾ| ವೈ. ಸುಮಾ ಸ್ವಾಗತಿಸಿದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ತಾಂತ್ರಿಕ ನಿರ್ವಹಣೆ ಹೊಣೆ ಹೊತ್ತಿದ್ದ ಯುವ ಕವಿ ಕೌಸ್ತುಭ ಭಾರದ್ವಾಜ್ ಮಾತನಾಡಿದರು. ಮೇಧಾ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ರಾಮಕಿರಣ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ