ಪಿಂಚಣಿ ಇಲ್ಲದೆ ಫಲಾನುಭವಿಗಳ ಪರದಾಟ
8 ತಿಂಗಳಿಂದ 6 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಂಕಷ್ಟ
Team Udayavani, Jun 27, 2020, 9:09 AM IST
ಸಿರುಗುಪ್ಪ: ತಾಲೂಕಿನಲ್ಲಿ ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಸುಮಾರು 28,816 ಫಲಾನುಭವಿಗಳಿದ್ದು, ತಾಲೂಕಿನಲ್ಲಿ ಕಳೆದ 8 ತಿಂಗಳಿಂದ 6 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಮಾಸಾಶನ ಬಾರದೆ ನಿತ್ಯವೂ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಖಜಾನೆ ಒಂದರ ಮೂಲಕ ಅಂಚೆ ಕಚೇರಿ ಸಿಬ್ಬಂದಿಯಿಂದ ಮಾಸಾಶನ ಪಡೆಯುತ್ತಿದ್ದ ಫಲಾನುಭವಿಗಳು ಕಡ್ಡಾಯವಾಗಿ ಕೆ-2 ಮೂಲಕ ಮಾಸಾಶನ ಪಡೆಯಬೇಕೆಂದು ಸರ್ಕಾರ ಆದೇಶ ನೀಡಿರುವುದರಿಂದ ಅಂಚೆ ಸಿಬ್ಬಂದಿ ಮೂಲಕ ಹಣ ಪಡೆಯುತ್ತಿದ್ದ ಫಲಾನುಭವಿಗಳ ಖಾತೆಗಳು ಕೆ-2ಗೆ ಬದಲಾವಣೆ ಆಗಿಲ್ಲದ ಕಾರಣ ಅವರಿಗೆ ಮಾಸಾಶನದ ಹಣ ಬಂದಿಲ್ಲ. ಅಂಚೆ ಸಿಬ್ಬಂದಿ ಮೂಲಕ ಹಣ ಪಡೆಯುತ್ತಿದ್ದ ಪ್ರತಿಯೊಬ್ಬ ಫಲಾನುಭವಿಯು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಅಂಚೆ ಕಚೇರಿಯಿಂದ ಹಣ ಪಡೆದ ರಸೀದಿ, ಆಧಾರ್ ಕಾರ್ಡ್ ದಾಖಲೆಗಳನ್ನು ತಾಲೂಕು ಕಚೇರಿಯಲ್ಲಿರುವ ಸಿಬ್ಬಂದಿಗೆ ಸಲ್ಲಿಸಬೇಕು. ಈ ದಾಖಲೆಗಳನ್ನು ಆನ್ ಲೈನ್ ಮೂಲಕ ಅಪ್ಲೋಡ್ ಮಾಡಿದ ನಂತರ ಕೆ-2 ತಂತ್ರಾಂಶಕ್ಕೆ ಬದಲಾವಣೆ ಮಾಡಲಾಗುತ್ತದೆ, ಕೆ-2 ತಂತ್ರಾಂಶಕ್ಕೆ ಬದಲಾದ ನಂತರ ಮಾಸಾಶನ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಒಂದು ಬಾರಿ ದಾಖಲೆಗಳನ್ನು ನೀಡಿದರೆ ಸಾಕು ಅದನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುತ್ತೇವೆ. ಬೆಂಗಳೂರಿನಲ್ಲಿಯೇ ಕೆ-2 ತಂತ್ರಾಂಶಕ್ಕೆ ಸೇರಿದ ನಂತರ ಅವರವರ ಖಾತೆಗೆ ಹಣ ಜಮಾ ಆಗುತ್ತದೆ. ಆದ್ದರಿಂದ ಕಚೇರಿಯಲ್ಲಿ ದಾಖಲೆಗಳು ನೀಡಿದವರು ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ ಎಂದು ತಾಲೂಕು ಕಚೇರಿ ಸಿಬ್ಬಂದಿ ಹೇಳುತ್ತಾರೆ.
ಮೊದಲು ಖಜಾನೆ ಮೂಲಕ ವಿವಿಧ ಯೋಜನೆಗಳ ಮಾಸಾಶನ ಪಡೆಯುತ್ತಿದ್ದ ಹಣ ಸಂದಾಯವಾಗುತ್ತಿತ್ತು. ಆದರೆ ಕೆ-2ತಂತ್ರಾಂಶದ ಮೂಲಕ ಹಣ ಪಡೆಯುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಬ್ಯಾಂಕ್ ಖಾತೆ ಮೂಲಕ ಹಣ ಪಡೆಯುತ್ತಿರುವ ಫಲಾನುಭವಿಗಳಿಗೆ ಈಗಲೂ ಮಾಸಾಶನ ಬರುತ್ತಿದೆ. ಆದರೆ ಕೆ-2 ತಂತ್ರಾಂಶಕ್ಕೆ ಅಳವಡಿಸಲಾಗದ ಫಲಾನುಭವಿಗಳಿಗೆ ಮಾತ್ರ ಈಗ ಮಾಸಾಶನ ಬರಲು ಸಮಸ್ಯೆಯಾಗಿದೆ. ಆದ್ದರಿಂದ ದಾಖಲೆ ನೀಡಬೇಕು. ತಂತ್ರಾಂಶದಲ್ಲಿ ಅಳವಡಿಕೆಯಾದ ನಂತರ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತದೆ. -ಎಸ್.ಬಿ.ಕೂಡಲಗಿ, ತಹಶೀಲ್ದಾರ್.
ಕಳೆದ 8 ತಿಂಗಳಿನಿಂದ ಮಗಳ ಅಂಗವಿಕಲ ವೇತನ ಬಂದಿಲ್ಲ. ತಾಲೂಕು ಕಚೇರಿ ಸಿಬ್ಬಂದಿ ಕೇಳಿದ ಅಗತ್ಯ ದಾಖಲೆಗಳನ್ನು ನೀಡಿದ್ದರೂ ಇಲ್ಲಿಯವರೆಗೆ ಮಾಸಾಶನ ಬಂದಿಲ್ಲ. ಈ ಬಗ್ಗೆ ಕೇಳಿದರೆ ಕೆ-2 ತಂತ್ರಾಂಶಕ್ಕೆ ಅಳವಡಿಕೆ ಮಾಡಲು ನಿಮ್ಮ ದಾಖಲೆಗಳನ್ನು ಬೆಂಗಳೂರಿಗೆ ಕಳುಹಿಸಿದ್ದೇವೆ. ಅಲ್ಲಿ ಮಂಜೂರು ಆಗಬೇಕೆಂದು ಹೇಳುತ್ತಿದ್ದಾರೆ. -ರಾಮರೆಡ್ಡಿ, ಅಂಗವಿಕಲೆ ತಂದೆ, ಕರೂರು ಗ್ರಾಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Mangaluru: ಏಪ್ರಿಲ್ 19 ರಂದು ಡಾ. ಎಸ್ ಜೈಶಂಕರ್ ಅವರೊಂದಿಗೆ ಸಂವಾದ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ