ಎರಡೂ ಕ್ಷೇತ್ರದಲ್ಲಿ ಮುಖ್ಯಮಂತ್ರಿಗೆ ಸೋಲು ಖಚಿತ
Team Udayavani, May 8, 2018, 4:57 PM IST
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸೋಲುವ ಭೀತಿಯಿಂದ ಚಾಮುಂಡಿ ಜೊತೆಗೆ ಬಾದಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಅವರ ವಿರುದ್ಧ ನನ್ನದೇ ಗೆಲುವು ಖಚಿತ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ಕಮಲಾಪುರ ಹಾಗೂ ನಗರದ ಮದಕರಿ ನಾಯಕ ವೃತ್ತದಲ್ಲಿ ಸೋಮವಾರ ರಾತ್ರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಸೋಲುವ ಭೀತಿ ಕಾಡುತ್ತಿದ್ದು, ಚಾಮುಂಡಿ ಹಾಗೂ ಬದಾಮಿ ಕ್ಷೇತ್ರ ಎರಡರಲ್ಲೂ ಸ್ಪರ್ಧೆ ನಡೆಸಲು ಮುಂದಾಗಿದ್ದು, ಚಾಮುಂಡಿಯ ಆಶೀರ್ವಾದ ಸಿಗಲಿಲ್ಲ ಎಂದ ಮೇಲೆ ಬಾದಮಿ ಬನಶಂಕರಿಯ ಆಶೀರ್ವಾದ ಅವರಿಗೆ ಹೇಗೆ ಸಿಗಲಿದೆ ಎಂದು ವಂಗ್ಯವಾಡಿದ ಅವರು, ಬಾದಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದ ಎರಡರಲ್ಲೂ ನನ್ನದೇ ಗೆಲವು ಖಚಿತ ಎಂದು ಭವಿಷ್ಯ ನುಡಿದರು.
ಬಾದಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರು ಗುತ್ತಿಗೆದಾರು, ಉದ್ಯಮದಾರರ ಹಣ ಬೀದಿಯಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಬಾದಮಿ ಕ್ಷೇತ್ರದ ಜನರು, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದು, ಬಾದಮಿ ಹಾಗೂ ಚಾಮುಂಡಿ ಎರಡು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಾಣಲಿದ್ದಾರೆ ಎಂದರು.
ಮುಖಂಡರಾದ ಬಿಜೆಪಿ ಅಭ್ಯರ್ಥಿ ಎಚ್.ಆರ್. ಗವಿಯಪ್ಪ, ಎಚ್.ಆರ್.ಅಜೇಯ, ಕಟಿಗಿ ರಾಮಕೃಷ್ಣ, ದೇವಮನಿ ಶ್ರೀನಿವಾಸ, ಗುಂಡಿ ರಾಘವೇಂದ್ರ, ರಾಣಿ ಸಂಯುಕ್ತ, ಚಂದ್ರಕಾಮತ್ಗೌಡ್ರ ರಾಮಣ್ಣ, ಎಸ್.ಗಾಳೆಪ್ಪ, ಗಿಂಜಿ ಮಂಜುನಾಥ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ