ಹೆತ್ತ ಮಗಳನ್ನೇ ಕೈಕಾಲು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದ ಪಾಪಿ ತಂದೆ
Team Udayavani, Feb 17, 2020, 2:56 PM IST
ಬಳ್ಳಾರಿ : ಹೆತ್ತ ಮಗಳನ್ನೇ ಕೈಕಾಲು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿ ನಗರದ ಹೊರವಲಯ ಬಂಡಿಹಟ್ಟಿಯಲ್ಲಿ ಸೋಮವಾರ ನಡೆದಿದ್ದು, ಪಾಪಿ ತಂದೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಪಲ್ಲವಿ (22) ತಂದೆ ಸೂರಿ ಅಲಿಯಾಸ್ ಆಟೊ ಸೂರಿಯಿಂದಲೇ ಕಾಲುವೆಗೆ ನೂಕಲ್ಪಟ್ಟ ನತದೃಷ್ಟ ಮಗಳು. ಮಗಳು ಪಲ್ಲವಿ ಆರೋಗ್ಯ ಸಚಿವ ಶ್ರೀರಾಮುಲು ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಮದ್ಯ ಸೇವನೆಗಾಗಿ ಹಣ ಕೇಳುತ್ತಿದ್ದ ತಂದೆಗೆ ಮಗಳು ಪಲ್ಲವಿ ಹಣ ಕೊಡಲ್ಲ ಎಂದಿದ್ದಳು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ತಂದೆ ಮಗಳ ಮಧ್ಯೆ ಜಗಳವಾಗಿತ್ತು. ಎಂದಿದ್ದ ಮಗಳು ಪಲ್ಲವಿ ಕೋಪದಲ್ಲಿ ನನ್ನ ಸಾಯಿಸಿ ಬಿಡಿ ಎಂದಿದ್ದಳು. ಈ ವೇಳೆ ಮಗಳು ಪಲ್ಲವಿ ಕೋಪದಲ್ಲಿ ನನ್ನನ್ನು ಸಾಯಿಸಿಬಿಡಿ ಎಂದಿದ್ದಳು. ಇದರಿಂದ ಮಗಳನ್ನ ಪುಸಲಾಯಿಸಿ ಕಾಲುವೆ ಬಳಿ ಕರೆತಂದಿದ್ದ ಪಾಪಿ ತಂದೆ ಸೂರಿ, ಕೈ ಕಾಲುಗಳನ್ನು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದಿದ್ದಾನೆ. ಮೂರು ವರ್ಷದ ಹಿಂದೆ ತಾಯಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸ್ಥಳಕ್ಕೆ ಕೌಲ್ ಬಜಾರ್ ಪೋಲಿಸರ ಭೇಟಿ ನೀಡಿದ್ದು, ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಯುವತಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆ ಬಳಿಕ ಆರೋಪಿ ಸೂರಿ ಪೋಲಿಸರಿಗೆ ಶರಣಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್