ಜೀತ ನಿರ್ಮೂಲನೆ ಜಾಗೃತಿಯಿಂದ ಸಾಧ್ಯ

ಹಳ್ಳಿಗಳಲ್ಲಿ ಇಂದಿಗೂ ಬಿಟ್ಟಿ ಚಾಕರಿ ಮಾಡುವುದು ಜೀತ ಪದ್ಧತಿಗಿಂತ ನಿಕೃಷ್ಟವಾಗಿದೆ

Team Udayavani, Feb 12, 2020, 4:49 PM IST

12-February-26

ದಾವಣಗೆರೆ: ಸಾಲ ತೀರುವಳಿ, ಸಂಪ್ರದಾಯ ಎನ್ನುವಂತೆ ಜೀತಪದ್ಧತಿಯನ್ನ ಜಾಗೃತಿ ಮೂಲಕ ನಿರ್ಮೂಲನೆ ಮಾಡಬೇಕು ಎಂದು ಜೀವಿಕ- ಜೀತ ವಿಮುಕ್ತಿ ಕರ್ನಾಟಕದ ಸಂಸ್ಥಾಪಕಿ ಕಿರಣ್‌ ಕಮಲ್‌ ಪ್ರಸಾದ್‌ ತಿಳಿಸಿದ್ದಾರೆ.

ಮಂಗಳವಾರ ಜೀವಿಕ- ಜೀತ ವಿಮುಕ್ತಿ ಕರ್ನಾಟಕದ ವತಿಯಿಂದ ಬಿಟ್ಟಿ ಚಾಕರಿ ಮಾಡುವವರ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಟ್ಟಿ ಚಾಕರಿ ಪದ್ಧತಿಯನ್ನೇ ಜೀತ ಎಂದು ಪರಿಗಣಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಜೀವಿಕ- ಜೀತ ವಿಮುಕ್ತಿ ಕರ್ನಾಟಕ ಸಂಸ್ಥೆ ಪ್ರಾರಂಭಿಸಲಾಗಿದೆ.

ಮಾಹಿತಿಯಂತೆ ಉತ್ತರ ಕರ್ನಾಟಕದಲ್ಲಿ 15ಸಾವಿರ ಜನ ಈಗಲೂ ಹಣ, ಏನನ್ನೂ ಪಡೆಯದೆ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಜೀತ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಕೆಲಸ ಮಾಡುವಂತಹವರಿಗೆ ಯಾವುದೇ ಜಮೀನು, ಮನೆ ಇರುವುದಿಲ್ಲ. ಸಾಲಕ್ಕಾಗಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮುಂದುವರೆಯುತ್ತಿರುವ ಜೀತ ಪದ್ಧತಿಯನ್ನ ಒಗ್ಗಟ್ಟಿನಿಂದ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಜೀತ ಪದ್ಧತಿಯಲ್ಲಿ ಕೆಲಸ ಮಾಡುವಂತಹವರಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಟ ದಿನಗೂಲಿ ದೊರೆಯುವುದಿಲ್ಲ. ಅಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಸರ್ಕಾರದಿಂದ ಪುನರ್ವಸತಿ ಹಣ ಬರುತ್ತಾದರೂ, ಶೈಕ್ಷಣಿಕವಾಗಿ ಹಿಂದುಳಿದಂತಹವರು ದಬ್ಟಾಳಿಕೆಗೆ ಹೆದರಿ ದಾನದ ಕಾಳಿಗಾಗಿ ಬಿಟ್ಟಿ ಚಾಕರಿ ಮಾಡುವುದು ಇದೆ. ಒಗ್ಗಟ್ಟಿನಿಂದ ಪ್ರತಿರೋಧ ಒಡ್ಡಿದರೆ ಮಾತ್ರವೇ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಆವರಗೊಳ್ಳ ಗ್ರಾಮ ಪಂಚಾಯತಿ ಸದಸ್ಯ ದೊಡ್ಡಪ್ಪ ಮಾತನಾಡಿ, ದೊಡ್ಡವರ ಮನೆಕೆಲಸಗಳಿಗೆ, ಹಬ್ಬ-ಜಾತ್ರೆಗಳಲ್ಲಿ ಬಿಟ್ಟಿ ಚಾಕರಿ ಮಾಡಲು ಇಂದಿಗೂ ಬಳಸಿಕೊಳ್ಳುವುದು ಜನಾಂಗದ ಅಭಿವೃದ್ಧಿಗೆ ತಡೆಗೋಡೆಯಾಗಿದೆ. ಬಿಟ್ಟಿ ಚಾಕರಿ ಮಾಡುವಂತಹವರನ್ನ ಕೀಳಾಗಿ ಕಾಣುವಂತಹವರು ಮನೆಯಲ್ಲಿನ ದನ-ಕರು ಸತ್ತರೆ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡರು.

ಹಳ್ಳಿಗಳಲ್ಲಿ ಇಂದಿಗೂ ಬಿಟ್ಟಿ ಚಾಕರಿ ಮಾಡುವುದು ಇದೆ. ಜೀತ ಪದ್ಧತಿಗಿಂತ ನಿಕೃಷ್ಟವಾಗಿದೆ. ಜಾತ್ರೆಯಲ್ಲಿ 5ರಿಂದ 6 ಜನ ಒಂದು ವಾರ ಕೆಲಸ ಮಾಡಿದರೂ 100 ರೂಪಾಯಿ ಸಿಗುವುದಿಲ್ಲ. 10-20 ರೂಪಾಯಿಗೆ ಶವದ ಕೆಲಸ ಮಾಡುತ್ತೇವೆ. ಸತ್ತ ಜಾನುವಾರುಗಳನ್ನು ಎಸೆಯಲು ಅಲೆಯಬೇಕು. ಭಯದ ವಾತಾವರಣ, ಬಡತನದಿಂದ ಚಕಾರವೆತ್ತದೆ ಎಲ್ಲವನ್ನೂ ಸಹಿಸಬೇಕಾಗಿದೆ ಎಂದರು.

ಮನವಿ ಪತ್ರ ಸ್ವೀಕರಿಸಿದ ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ಬಡತನದ ಕಾರಣಗಳಿಗಾಗಿ ಬಿಟ್ಟಿ ಚಾಕರಿ ಮಾಡುವುದು ವಿಷಾದನೀಯ. ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಸಂಧ್ಯಾ ಸುರಕ್ಷಾ, ವಿಧವಾ, ವೃದ್ಧಾಪ್ಯ ವೇತನ ಸೌಲಭ್ಯ ವಂಚಿತರಾದವರ ಪಟ್ಟಿ ನೀಡಿದರೆ ಸೌಲಭ್ಯ ದೊರಕಿಸುವುದಾಗಿ ಆಶ್ವಾಸನೆ ನೀಡಿದರು.

ಜೀವಿಕ ಜಿಲ್ಲಾ ಸಂಚಾಲಕ ಚಂದ್ರಪ್ಪ, ತಾಲೂಕು ಸಂಚಾಲಕ ಎನ್‌. ಮಂಜುನಾಥ್‌, ಬೇತೂರು ಮಂಜುನಾಥ್‌, ಬಾಬಣ್ಣ ಜಗಳೂರು, ಚಿಕ್ಕಮ್ಮ ಇತರರು ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.