ಕೋವಿಡ್ ವಾರಿಯರ್ಸ್ಗೆ ಹೂಮಳೆ
ಜೀವ ಪಣಕಿಟ್ಟು ಸೇವೆ ಸಲ್ಲಿಸುತ್ತಿರುವ ನಿಮ್ಮ ಸೇವೆ ದೊಡ್ಡದು: ಸ್ವಾಮೀಜಿ
Team Udayavani, May 16, 2020, 5:19 PM IST
ಹರಪನಹಳ್ಳಿ: ಕೋಲ ಶಾಂತೇಶ್ವರ ಮಠದ ಆವರಣದಲ್ಲಿ ಕೋವಿಡ್ ವಾರಿಯರ್ಸ್ಗಳಿಗೆ ಹೂ ಮಳೆ ಸುರಿಸಿ ಅಭಿನಂದಿಸಲಾಯಿತು
ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಕೋಲ ಶಾಂತೇಶ್ವರಮಠ ಆವರಣದಲ್ಲಿ
ಕೋವಿಡ್ ವಾರಿಯರ್ಸ್ಗೆ ಹೂ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.
ಗ್ರಾಮದ ಆಸ್ಪತ್ರೆ ಆವರಣದಿಂದ ಕೋಲ ಶಾಂತೇಶ್ವರ ಹೊರಗಿನ ಮಠದದವರೆಗೂ ನಡೆದ ಮರವಣಿಗೆಯಲ್ಲಿ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವಾರಿಯರ್ಸ್ಗಳಿಗೆ ಹೂಮಳೆಗೈದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಕೋವಿಡ್ ಹೆಮ್ಮೆಯ ವಿಷಯ. ಸರ್ಕಾರಿ ನೌಕರರು ತಮ್ಮ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಪರಿಣಾಮ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅನೇಕ ನಿರ್ದೇಶನಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಸಮಪರ್ಕಕವಾಗಿ ಅನುಷ್ಠಾನ ಮಾಡಬೇಕಾಗಿರುವುದು ಅಧಿಕಾರಿಗಳು ಎಂದರು.
ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೋವಿಡ್ ಎಲ್ಲಾ ರಂಗಕ್ಕೂ ಹೊಡೆತ ನೀಡಿದೆ. ವಾರಿಯರ್ಸ್ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತಿದ್ದೀರಿ. ನಿಮ್ಮ ಸೇವೆ ದೊಡ್ಡದು. ಅರಸೀಕೆರೆ ಜನರು ವಿಶಾಲ ಹೃದಯದವರಾಗಿದ್ದು, ನಿಮ್ಮನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಜಗಳೂರು ತಹಶೀಲ್ದಾರ್ ಹುಲಿಮನಿ ತಿಮ್ಮಣ್ಣ, ಉಪ ತಹಶೀಲ್ದಾರ್ ಫಾತಿಮಾ, ಅರಸೀಕೆರೆ ಪೊಲೀಸ್ ಠಾಣೆಯ ಪಿಎಸ್ಐ ಕಿರಣ್ಕುಮಾರ್, ವೈ.ಡಿ. ಅಣ್ಣಪ್ಪ, ಗುರುಶಾಂತನಗೌಡ, ಶಾಂತಪಾಟೀಲ್, ತಾಲೂಕು ವೈದ್ಯಾಧಿಕಾರಿ ಇನಾಯಿತವುಲ್ಲಾ, ಚಟ್ನಳ್ಳಿ ರಾಜಪ್ಪ, ಭುವನೇಶ್ವರ್, ಕೆ.ಬಸವರಾಜ್, ವಿಶ್ವನಾಥಯ್ಯ, ಎ.ಎಚ್.ನಾಗರಾಜ್, ವಿಜಯ್ ಕುಮಾರ್, ಎ.ಎಚ್.ಕೊಟ್ರೇಶ್, ಸಲಾಂ ಸಾಹೇಬ್, ಬಸವರಾಜ್, ಎಚ್.ಷಣ್ಮುಖಪ್ಪ, ಸಿದ್ದಪ್ಪ, ಪೂಜಾರ್ ಮರಿಯಪ್ಪ, ಫಣಿಯಾಪುರ ಲಿಂಗಾಪುರ, ಬಾಲೇನಹಳ್ಳಿ ಕೆಂಚನಗೌಡ, ಚೂಟಿ ಅಜಯ್ಕುಮಾರ್, ಗೋಪಾಲ್, ಪಲ್ಲಾಗಟ್ಟೆ ಮಹೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ