ಭಾರೀ ಮಳೆಗೆ ಹೊಂಡ ಭರ್ತಿ
Team Udayavani, May 11, 2020, 2:36 PM IST
ಸಾಂದರ್ಭಿಕ ಚಿತ್ರ
ಹೊಸಪೇಟೆ: ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾನುವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ತಾಲೂಕಿನ ಸೀತಾರಾಮ ತಾಂಡಾ ಹಾಗೂ ನಲ್ಲಾಪುರದಲ್ಲಿ ಆಲಿಕಲ್ಲು ಮಳೆಯಾಗಿದೆ. ಜನರು ಆಲಿಕಲ್ಲು ಸಂಗ್ರಹಿಸಿ ತಿಂದರು. ಹಂಪಿ, ಕಮಲಾಪುರ ಮತ್ತು ಕಡ್ಡಿರಾಂಪುರ ಹಾಗೂ ಮಲಪನಗುಡಿಯಲ್ಲಿ ಅರ್ಧ ತಾಸುಗಳ ಕಾಲ ಮಳೆಯಾಗಿದೆ. ಹೊಸಪೇಟೆ ನಗರದಲ್ಲಿ ಜಡಿ ಮಳೆಯಾಗಿರುವುದು ವರದಿಯಾಗಿದೆ.
ಹೂವಿನಹಡಗಲಿ: ಭಾನುವಾರ ಸಂಜೆ ಪಟ್ಟಣ ಒಳಗೊಂಡಂತೆ ಗ್ರಾಮೀಣ ಭಾಗದಲ್ಲಿಯೂ ಭಾರೀ ಮಳೆಯಾಗಿದ್ದು, ತಂಪಿನ ವಾತಾವರಣ ಸೃಷ್ಟಿಯಾಯಿತು. ಗಾಳಿ, ಮಳೆ ರಭಸವಾಗಿದ್ದು, ಸುಮಾರು ಅರ್ಧಗಂಟೆ ಮಳೆ ಸುರಿಯಿತು. ಅಲ್ಲದೆ ಆಲಿಕಲ್ಲು ಮಳೆ ಸುರಿದಿದ್ದು, ವಿಸೇಷವಾಗಿತ್ತು. ಅಲ್ಲದೆ ತಾಲೂಕಿನ ಮಹಾಸಜನದ ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಚಮ್ಮನಹಳ್ಳಿ ಮುಸುಕಿನ ಕಲ್ಲಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಯಿಂದ ನಿರ್ಮಿಸಲಾಗಿದ್ದ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಮಳೆಯಿಂದಾಗಿ ತುಂಬಿದ್ದವು.
ಕಂಪ್ಲಿ: ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಗೆ ರೋಸಿಹೋಗಿದ್ದ ತಾಲೂಕಿನ ಜನತೆಗೆ ಭಾನುವಾರ ಬಿರುಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಆಲಿಕಲ್ಲು ಮಳೆ ತಂಪನ್ನು ತಂದಿದೆ. ಆಲಿಕಲ್ಲು ಮಳೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಬಿದ್ದಿದ್ದರೆ, ಇನ್ನು ಕೆಲವು ಗ್ರಾಮಗಳಲ್ಲಿ ಗಾಳಿ ಸಹಿತ ಮಳೆ ಸುರಿದಿದೆ. ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ತಾಲೂಕಿನ ಕಣವಿ ತಿಮ್ಮಲಾಪುರ, ರಾಮಸಾಗರ, ನಂ.10 ಮುದ್ದಾಪುರ, ಸಕ್ಕರೆ ಕಾರ್ಖಾನೆ ಪ್ರದೇಶ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಣ್ಣ ಗಾತ್ರದ ಆಲಿಕಲ್ಲು ಮಳೆ ಸುರಿದಿದ್ದು, ಈ ಗ್ರಾಮಗಳಲ್ಲಿ ಸಾರ್ವಜನಿಕರು ಸೇರಿದಂತೆ ಖುಷಿಯಿಂದ ಮಳೆಯಲ್ಲಿ ನೆನೆಯುತ್ತಾ ಆಲಿಕಲ್ಲು ಸಂಗ್ರಹಿಸುವಲ್ಲಿ ನಿರತರಾಗಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಬಹು ವರ್ಷಗಳ ನಂತರ ಆಲಿಕಲ್ಲು ಮಳೆ ವೀಕ್ಷಿಸಿದ್ದು, ಮಕ್ಕಳು ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ