ವಿಜಯನಗರ ವಸಂತ ವೈಭವ
ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ-ಸ್ತಬ್ಧ ಚಿತ್ರಗಳು ರಸ್ತೆಯಲ್ಲಿ ರಂಗೋಲಿಗಳ ಚಿತ್ತಾರ
Team Udayavani, Jan 10, 2020, 12:52 PM IST
ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ವಿಜಯನಗರ ವಸಂತ ವೈಭವ ಮೆರವಣಿಗೆಗೆ ಗುರುವಾರ ಸಂಜೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಶ್ರೀಕೃಷ್ಣ ದೇವರಾಯನ ಪ್ರತಿಮೆ ವಾಹನ, ನಂದಿಧ್ವಜ, ಶಂಖ, ಕಹಳೆ, ಉದ್ದದ ಮನುಷ್ಯರು, ವಿಚಿತ್ರ ಮನುಷ್ಯರು, ಸುಲ್ತಾನ್ ಹೋರಿಗಳು, ಗೂಳಿ ಮತ್ತು ಕಟ್ಟಪ್ಪ, ಪಾಂಚ್ ಪಂಟರ್, ಬಣ್ಣ ಬಣ್ಣದ ಕೊಡೆ ಹಿಡಿದ ಕಲಾವಿದರು, ಡೈನಾಸರ್, ಊಸರವಲ್ಲಿ, ನಾಸಿಕ್ ಬ್ಯಾಂಡ್, ಹಗಲು ವೇಷಗಾರರು, ಮರಗಾಲು ಕಲಾವಿದರು. ಚಿತ್ರದುರ್ಗದ ಬ್ಯಾಂಡ್ ಸೆಟ್, ಗೊರವರ ಕುಣಿತ, ಸೋಮನ ಕುಣಿತ, ತೆಯ್ಯಮ್, ತಮಿಳುನಾಡು ವಾದ್ಯ, ಪುರುಲಿಯಾ, ಯಕ್ಷಗಾನ ವೇಷ, ಕಾರ್ಟೂನ್ಸ್, ಪ್ರಾಣಿ ಪಕ್ಷಿಗಳು, ಮರಾಠಾ ಸೈನಿಕರು, ಸಾಮಾನ್ಯ ಸೈನಿಕರು, ಮಂಗಲ್ ಪಾಂಡೆ ಸೈನಿಕರು, ಬಾಹುಬಲಿ ಸೈನಿಕರು, ಮಿಲಿಟಿರಿ ಸೈನಿಕರು, ಜೋಕರ್, ಶಾಲಾ ಬ್ಯಾಂಡ್, ಹೊನ್ನಾವರ ಬ್ಯಾಂಡ್, ಡೊಳ್ಳು ಕುಣಿತ, ಜಗ್ಗಳಿಕೆ ಮೇಳ, ತಾಷಾರಾಮ್ಡೋಲು, ಪಟದ ಕುಣಿತ, ಲಂಬಾಣಿ ಕುಣಿತ, ಕಂಸಾಳೆ, ವೀರಗಾಸೆ, ಅಲಾಯಿ ಹೆಜ್ಜೆ ಮೇಳ, ದೊಡ್ಡ ಮೋಹನಿಯಾಟಂ, ಧೋಲ್ ಚಲೋಮ್, ಕೊಂಚಾಡಿ ಚೆಂಡೆ, ಅರ್ದನಾರೇಶ್ವರ, ವೀರಭದ್ರ ಕುಣಿತ, ಕೀಲುಕುದುರೆ, ಶಿಲ್ಪಾಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಕಿಂಗ್ ಕೋಂಗ್, ಕೇರಳದ ದೈವ ವೇಷ, ಪೂಜಾ ಕುಣಿತ, ಕುಂದಾಪುರ ಡೊಲು, ಹುಲಿವೇಷ, ಬೆಂಡರಕುಣಿತ, ಕೇರಳ ಚಿಟ್ಟೆ ವೇಷ, ಕೆರಳ ಕಾಳಿ ವೇಷ, ಕೇರಳ ದೇವರ ವೇಷ, ಪಂಜಾಬ್ ಬ್ಯಾಂಡ್, ಸೇರಿದಂತೆ ಸ್ಥಳೀಯ ಶಾಲಾ-ಕಾಲೇಜಿಗಳಿಂದ ಸ್ತಬ್ದ ಚಿತ್ರಗಳು ನಗರದಲ್ಲಿ ನಡೆದ ಮೆರವಣಿಗೆಗೆ ಮೆರಗು ನೀಡಿದವು.
ರಸ್ತೆಯ ಎರಡು ಬದಿಯಲ್ಲಿ ನಾನಾ ಚಿತ್ತಾರದ ರಂಗೋಲಿ, ತಳಿರು ತೋರಣಗಳಿಂದ ಮೇನ್ ಬಜಾರ್ ರಸ್ತೆಯನ್ನು ಸಿಂಗಾರಗೊಳಿಸಲಾಗಿತ್ತು. ಮೇನ್ ಬಜಾರ್ ರಸ್ತೆ ಮೂಲಕ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಮಾರ್ಡನ್ ವೃತ್ತ, ರೋಟರಿ ವೃತ್ತ, ತಹಶೀಲ್ದಾರ್ ಕಚೇರಿ ಮೂಲಕ ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ ಮೂಲಕ ತಾಲೂಕು ಕ್ರೀಡಾಂಗಣದಲ್ಲಿ ಕಲಾ ತಂಡಗಳು ಸಮಾವೇಶಗೊಂಡವು. ನಂತರ ಕ್ರೀಡಾಂಗಣದಲ್ಲಿ ಬಾಣ ಬಿರಿಸು ಪ್ರದ ರ್ಶನ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಶಾಸಕ ಆನಂದ ಸಿಂಗ್,
ಸಂಸ ದ ವೈ. ದೇವೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಜಿಪಂ ಸಿಇಒ ನಿತೀಶ್, ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ತಹಶೀಲ್ದಾರ್ ಎಚ್. ವಿಶ್ವನಾಥ, ಹಿಂಪಿ ವಿಶ್ವಪಂರಪರೆ ಪರಂಪರೆ
ನಿರ್ವಾಹಣಾ ಪ್ರಾಧಿಕಾರದ ಆಯುಕ್ತ ಪಿ.ಎಲ್. ಲೋಕೇಶ್, ತಾಪಂ
ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರು ಬಸವರಾಜ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?