ಗೋಮಯ-ಗೋಮೂತ್ರದಿಂದ ಹಂಪಿ ದೇಗುಲ ಶುದ್ಧೀಕರಣ
Team Udayavani, Jul 10, 2020, 3:45 PM IST
ಹೊಸಪೇಟೆ: ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲ ಪ್ರಾಂಗಣದಲ್ಲಿ ಗೋಮೂತ್ರ ಹಾಗೂ ಗೋಮಯದಿಂದ ಶುದ್ಧೀಕರಿಸುತ್ತಿರುವುದು.
ಹೊಸಪೇಟೆ: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇಗುಲ ಪ್ರಾಂಗಣವನ್ನು ಪುರಾತನ ಸಂಪ್ರದಾಯದಂತೆ ಗೋಮೂತ್ರ ಹಾಗೂ ಗೋಮಯದ ಮೂಲಕ ಶುದ್ಧಗೊಳಿಸಲಾಯಿತು.
ಶ್ರೀವಿದ್ಯಾರಣ್ಯ ಭಾರತೀ ಸ್ವಾಮೀಜಿ ಸೂಚನೆಯಂತೆ ದೇವಸ್ಥಾನ ಪ್ರಧಾನ ಅರ್ಚಕರಾದ ಪಿ.ಶ್ರೀನಾಥ ಶರ್ಮಾ, ಪಿ. ಪ್ರಶಾಂತ್ ನೇತೃತ್ವದಲ್ಲಿ ಸ್ವಚ್ಛತಾ ಸಿಬ್ಬಂದಿ ವಿರೂಪಾಕ್ಷ-ಪಂಪಾಂಬಿಕೆ ದೇವಿ ದರ್ಶನಕ್ಕಾಗಿ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯಿಂದ ಗೋಮೂತ್ರ ಹಾಗೂ ಗೋಮಯ (ಹಸುವಿನ ಸೆಗಣಿ)ದ ಮಿಶ್ರಣದಿಂದ ಇಡೀ ದೇವಾಲಯದ ಪ್ರಾಂಗಣ ಶುದ್ಧೀಕರಿಸಿದರು.
ಲಾಕ್ಡೌನ್ ಜಾರಿಯಾದ ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಶುದ್ಧೀಕರಣ ಮಾಡಲಾಗಿದೆ. ವಿದ್ಯಾರಣ್ಯ ಗೋಶಾಲೆಯ ಹಸುಗಳ ಸೆಗಣಿ ಹಾಗೂ ಗೋಮೂತ್ರದಿಂದ ಶುದ್ಧೀಕರಣ ಕ್ರಿಯೆ ನಡೆಯುತ್ತಿದೆ. ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗಳಾದ ಸಾವಿತ್ರಿ, ದುರ್ಗಮ್ಮ, ಗಂಗಮ್ಮ, ಮಂಜುನಾಥ, ತಿಪ್ಪಯ್ಯ ಹಾಗೂ ಪಂಪಾಪತಿ ಶುದ್ಧೀಕರಣ ಕಾರ್ಯ ನಡೆಸಿದರು.
ಸರ್ವರೋಗಕ್ಕೂ ಗೋಮೂತ್ರ ಹಾಗೂ ಗೋಮಯ ರಾಮಬಾಣವಾಗಿದ್ದು. ಪ್ರತಿಯೊಬ್ಬರು ತಮ್ಮ ಮನೆಯಂಗಳಲ್ಲಿ ಗೋಮೂತ್ರ ಹಾಗೂ ಗೋಮಯ ಉಪಯೋಗಿಸಿ ಸ್ಯಾನಿಟೈಸ್ ಮಾಡುವುದರಿಂದ ಕೋವಿಡ್ ಅನ್ನು ದೂರ ಇಡಬಹುದು.
ಪಿ. ಶ್ರೀನಾಥ ಶರ್ಮಾ,
ಪ್ರಧಾನ ಅರ್ಚಕರು, ಶ್ರೀ ವಿರೂಪಾಕ್ಷೇಶ್ವರ
ಸ್ವಾಮಿ ದೇಗುಲ, ಹಂಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು